ಸುನಂದಾ ಪುಷ್ಕರ್ ಕೊಲೆ ದೃಢಪಡಿಸಿದ್ದು ಗಾಯ ಸಂ. 10
ನವದೆಹಲಿ, ಜ. 6: ಇಷ್ಟು ದಿನ ತೀವ್ರ ಚರ್ಚೆಗೆ ಗುರಿಯಾಗಿದ್ದ ಸುನಂದಾ ಪುಷ್ಕರ್ ಸಾವು ಈಗ ಹೊರ ತಿರುವು ಪಡೆದಿದೆ. ಅವರ ಸಾವಿನ ಪ್ರಕರಣವನ್ನು ನವದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆ ಪರಿಚ್ಛೇದ 302ರ ಅಡಿ ದಾಖಲಿಸಿಕೊಂಡಿದ್ದು, ತನಿಖೆಯನ್ನು ಪುನಾರಂಭಿಸಿದ್ದಾರೆ.
ಪೊಲೀಸರ ಈ ನಿರ್ಧಾರಕ್ಕೆ ಕಾರಣ ವೈದ್ಯಕೀಯ ವರದಿ. ಸುನಂದಾ ಪುಷ್ಕರ್ ಸಾವಿಗೆ ವಿಷ ಕಾರಣ ಎಂದು ವರದಿ ತಿಳಿಸಿದೆ. ಆದರೆ, ಈ ವಿಷವನ್ನು ಸುನಂದಾ ಕುಡಿದರೋ ಅಥವಾ ಯಾರಾದರೂ ಇಂಜೆಕ್ಟ್ ಮಾಡಿದರೋ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದ್ದರಿಂದ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ. [ಸುನಂದಾ ಪುಷ್ಕರ್ ಅವರದ್ದು ವ್ಯವಸ್ಥಿತ ಕೊಲೆ]

10ನೇ ಗಾಯ ಮಾರಕವಾಯ್ತೇ? : ಕೊಲೆ ಪ್ರಕರಣ ದಾಖಲಿಸುವ ಮೊದಲು ಪೊಲೀಸರು ಸುನಂದಾ ಅವರ ದೇಹದ ಮೇಲೆ ಉಂಟಾಗಿದ್ದ ಗಾಯಗಳಲ್ಲಿ ಸಂಖ್ಯೆ 10ನೇಯದ್ದರ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ ಎನ್ನಲಾಗಿದೆ.
ಅಂತಿಮ ವೈದ್ಯಕೀಯ ವರದಿಯ ಪ್ರಕಾರ 10ನೇ ಗಾಯವು ಸಿರಿಂಜ್ನಿಂದ ಉಂಟಾಗಿದೆ. ಅಲ್ಲದೆ, ಅದನ್ನು ಬಲವಂತದಿಂದ ಚುಚ್ಚಲಾಗಿದೆ ಎಂದು ಹೇಳಲಾಗಿದೆ. [ಸುನಂದಾ ಪುಷ್ಕರ್ ಕೊಲೆಯಾಗಿದೆ]
ಸುನಂದಾ ದೇಹದ ಮೇಲೆ ಒಟ್ಟು 15 ಗಾಯದ ಗುರುತುಗಳು ಕಂಡುಬಂದಿವೆ. ಆದರೆ, ಗಾಯ ಸಂಖ್ಯೆ 10 ಅತ್ಯಂತ ಮಾರಕವಾದದ್ದು. ಇದು ಬಲವಂತದಿಂದ ಉಂಟಾದಂತೆ ಕಂಡುಬಂದಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಪೊಲೊನಿಯಂ ಹಾಗೂ ಥಾಲಿಯಂ ರಾಸಾಯನಿಕಗಳು ಇರುವ ಕುರಿತು ವಿದೇಶದಲ್ಲಿಯೇ ಪರೀಕ್ಷಿಸಿ ದೃಢಪಡಿಸಿಕೊಳ್ಳಬೇಕು. ಅಲ್ಲದೆ, ಸುನಂದಾ ದೇಹದಲ್ಲಿ ನೆರಿಯಂ ಒಲಿಯಾಂಡರ್ ರಾಸಾಯನಿಕವೂ ಇರುವ ಕುರಿತು ಸಾಕ್ಷಿಯಿದೆ ಎಂದು ಹೇಳಲಾಗಿದೆ. [ಸುನಂದಾ ದೇಹದಲ್ಲಿತ್ತು ವಿಷದ ಅಂಶ]
ಅತಿ ಡ್ರಗ್ ಸೇವನೆ ಉಲ್ಲೇಖವೇ ಇರಲಿಲ್ಲ : ಮೇಲ್ನೋಟದ ಸಾಕ್ಷಿ ಹಾಗೂ ವೈದ್ಯಕೀಯ ವರದಿ ಪ್ರಕಾರ ಪ್ರಕರಣ ಬೆಳಕಿಗೆ ಬಂದಾಗ ಅತಿ ಡ್ರಗ್ ಸೇವನೆ ಕುರಿತು ಉಲ್ಲೇಖವಿರಲಿಲ್ಲ. ವೈದ್ಯಕೀಯ ವರದಿಯಲ್ಲಿ ಕೂಡ ಅಲ್ಪ್ರಾಕ್ಸ್ ಡ್ರಗ್ಸ್ ಪತ್ತೆಯಾಗಿರುವ ಕುರಿತು ಹೇಳಿಲ್ಲ. ಸುನಂದಾ ದೇಹದಲ್ಲಿ ಕೆಫಿನ್ ಮತ್ತು ಮದ್ಯ ಕಂಡುಬಂದಿದ್ದರೂ ಅದು ಮಾರಕವಲ್ಲ. [ಸುನಂದಾ ಸಾವಿನ ಹಿಂದೆ ವಿದೇಶಿಗನ ಕೈವಾಡ]
ಪ್ರಕರಣವನ್ನು ಪುನಃ ತನಿಖೆಗೆ ಒಳಪಡಿಸಲಾಗುವುದು. ತನಿಖೆಯಿಂದ ಸ್ಪಷ್ಟ ಮಾಹಿತಿ ತಿಳಿಯಲಿದೆ ಎಂದು ನವದೆಹಲಿ ಪೊಲೀಸರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. ಸ್ಥಳದಲ್ಲಿ ಸುನಂದಾ ಒಬ್ಬರೇ ಇದ್ದರೋ ಅಥವಾ ಮೂವರು ಇದ್ದರೋ ಎಂಬುದರ ಕುರಿತು ತನಿಖೆ ಕೈಗೊಳ್ಳಲಾಗುವುದು. ಪ್ರತ್ಯಕ್ಷ ಸಾಕ್ಷಿಗಳನ್ನು ಪುನಃ ವಿಚಾರಣೆಗೆ ಒಳಪಡಿಸಲಾಗುವುದು ಎಂದು ನವದೆಹಲಿ ಪೊಲೀಸರು ತಿಳಿಸಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications