ಭಯೋತ್ಪಾದನೆ ಚಟುವಟಿಕೆಗೆ ಕೇರಳ ಹೆಚ್ಚು ಪ್ರಶಸ್ತ: ಭಟ್ಕಳ
ನವದೆಹಲಿ, ಸೆ. 19: ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಸೂತ್ರಧಾರ ಯಾಸಿನ್ ಭಟ್ಕಳ ಕರಾಳ ಹಸ್ತ ಮಂಗಳೂರು, ಗೋವಾದತ್ತಲೂ ಪಸರಿಸಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದ ನಂತರ ಭಯೋತ್ಫಾದನೆ ಚಟುವಟಿಕೆಗೆ ಪ್ರಶಸ್ತ ತಾಣವೆನಿಸಿರುವ ಕೇರಳದಲ್ಲೂ ಯಾಸಿನ್ ಭಟ್ಕಳನ ಹೆಜ್ಜೆ ಗುರುತು ಮೂಡಿಸಿದ್ದಾನೆ ಎಂಬ ಸಂಗತಿ ಬಹಿರಂಗವಾಗಿದೆ.
ರಾಷ್ಟ್ರೀಯ ತನಿಖಾ ದಳದ (NIA) ಬಂಧನದಲ್ಲಿರುವ ಯಾಸಿನ್ ಭಟ್ಕಳ ಮತ್ತು ಅವನ ಸಹಚರ ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿ ನಿರಂತವಾಗಿ ತಮ್ಮ ಪಾತಕ ಕೃತ್ಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. 2008ರ ಬೆಂಗಳೂರು ಬಾಂಬ್ ಸ್ಫೋಟದ ಬಗ್ಗೆ ಹೆಚ್ಚಿನ ಮಾಹಿತಿ ಕೆದಕಿದಾಗ ಕೇರಳದಲ್ಲಿನ ಭಯೋತ್ಪಾದನೆ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದಾನೆ.
ಕೇರಳದಲ್ಲಿ IM ಸ್ಥಾಪನೆಗೆ ತಾನೇ ಕಾರಣ ಎಂದಿರುವ ಯಾಸಿನ್ ಭಟ್ಕಳ ಇನ್ನೂ ಏನೆಲ್ಲ ಹೇಳಿದ್ದಾನೆ ಕೇಳಿ:

ಕೇರಳದಲ್ಲೂ sleeper cellಗಳಿವೆ
ಕರ್ನಾಟಕ, ಬಿಹಾರ, ಪುಣೆ, ಗೂವಾದಲ್ಲಿ sleeper cellಗಳನ್ನು ಸ್ಥಾಪಿಸಿ ಭಯೋತ್ಪಾದಕ ಚಟುವಟಿಕೆಗೆ ಯುವಕರನ್ನು ನೇಮಿಸಿಕೊಳ್ಳುವುದರ ನಡುವೆಯೇ ಕೇರಳದಲ್ಲೂ ತಾವು ಸಕ್ರಿಯರಾಗಿದ್ದೆವು. ಕೇರಳದ ಉತ್ತರ ಜಿಲ್ಲೆಗಳಲ್ಲಿ ಹೊಸ sleeper cellಗಳನ್ನು ಸ್ಥಾಪಿಸಿಕೊಂಡಿದ್ದೇವೆ. ಅಲ್ಲಿ ವ್ಯಾಪಕ ತರಬೇತಿ ನೀಡಲಾಗುತ್ತಿದೆ. ಹೀಗೆ ತರಬೇತಿ ಪಡೆದವರು ಭಾರತದಲ್ಲಿ ಹೊಸದಾಗಿ ದಾಳಿ ನಡೆಸಲು ಸಜ್ಜಾಗಿದ್ದಾರೆ.

ಹವಾಲಾ ಮೂಲಕ ಕೊಲ್ಲಿ ರಾಷ್ಟ್ರಗಳಿಂದ ಉಗ್ರರಿಗೆ ಹಣ
ಭಯೋತ್ಪಾದನೆ ತರಬೇತಿ ನೀಡಲು ಅನೇಕ ವರ್ಷಗಳಿಂದ LeT ಕೊಲ್ಲಿ ರಾಷ್ಟ್ರಗಳಲ್ಲಿ ಯುವಕರನ್ನು ನೇಮಿಸಿಕೊಳ್ಳುತ್ತಿದೆ. ಹವಾಲಾ ಜಾಲದ ಮೂಲಕ ಕೊಲ್ಲಿ ರಾಷ್ಟ್ರಗಳಿಂದ ಉಗ್ರ ಚಟುವಟಿಕೆಗಳಿಗೆ ಹಣ ಹರಿದುಬರುತ್ತಿದೆ. ಟಿ ನಾಜಿರ್ ಎಂಬ ಕೇರಳ ಪ್ರಜೆ ಲಷ್ಕರ್ ಸಂಘಟನೆಯ ಪರವಾಗಿ ಕೇರಳದಲ್ಲಿ ಸಕ್ರಿಯನಾಗಿದ್ದಾನೆ. ಕಾಸರಗೋಡು, ಕಣ್ಣೂರು ಮತ್ತು ಕೋಜಿಕ್ಕೋಡ್ ಗಳಲ್ಲಿ IM ತಂಡಗಳು ಕಾರ್ಚಾರಣೆಯಲ್ಲಿವೆ.

ಕಠ್ಮಂಡುವಿನಿಂದ ಕರಾಚಿಗೆ LeT ನೇರ ಸಂಪರ್ಕ
ಅಷ್ಟೇ ಅಲ್ಲ. ಕಠ್ಮಂಡುವಿನಿಂದ ಕರಾಚಿಗೆ ನೇರ ಸಂಪರ್ಕವಿದೆ. ಕರಾಚಿಯಲ್ಲಿ Lashkar-e-Tayyaba (LeT) ಕೇಂದ್ರಗಳಲ್ಲಿ ತರಬೇತಿ ನೀಡಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವಂತೆ ಅವರನ್ನು ಭಾರತಕ್ಕೆ ಕಳುಹಿಸಲಾಗುತ್ತಿದೆ.

Students Islamic Movement of India
ಕೇರಳದಲ್ಲಿ ನಮಗೆ ಅನುಕಂಪ ನೀಡುವವರು ಹೆಚ್ಚಾಗಿದ್ದಾರೆ. Students Islamic Movement of India ಬಗ್ಗೆ ಅನುಕಂಪ ಹೊಂದಿರುವವರು ನಮಗೆ ಸಾಥ್ ನೀಡಿದ್ದಾರೆ. Harkat-ul Jihad-al Islami ಮತ್ತು LeT ಕೇರಳದಲ್ಲೂ ಬೇರು ಬಿಟ್ಟಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications