Get Updates
Get notified of breaking news, exclusive insights, and must-see stories!

ಪಾಕಿಸ್ತಾನ ಭಾರತದಂತೆ ಜಾತ್ಯಾತೀತ ಆದರಷ್ಟೆ ಮಾತುಕತೆ: ಬಿಪಿನ್ ರಾವತ್

ನವದೆಹಲಿ, ನವೆಂಬರ್ 30: ಭಾರತ ಒಂದು ಹೆಜ್ಜೆ ಇಟ್ಟರೆ ನಾವು ಎರಡು ಇಡುತ್ತೇವೆ ಎಂದು ಪಾಕಿಸ್ತಾನ ಹೇಳುತ್ತಿದೆ. ಆದರೆ ಅವರ ಆ ಹೆಜ್ಜೆ ಧನಾತ್ಮಕ ಆಯಾಮದಲ್ಲಿಯೇ ಇರಬೇಕೆಂದು ಪಾಕಿಸ್ತಾನ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಪಾಕಿಸ್ತಾನದ ಆ ಹೆಜ್ಜೆಯಿಂದ ಭಾರತಕ್ಕೆ ಋಣಾತ್ಮಕ ಪರಿಣಾಮಗಳಾಗುವ ಹಾಗಿದ್ದರೆ, ಭಾರತವು ಮೊದಲೇ ಹೇಳಿರುವಂತೆ ಭಯೋತ್ಪಾದನೆ ಹಾಗೂ ಮಾತುಕತೆ ಜೊತೆ-ಜೊತೆಯಾಗಲು ಸಾಧ್ಯವಿಲ್ಲ ಎಂದು ರಾವತ್ ಹೇಳಿದ್ದಾರೆ. ಇತ್ತೀಚೆಗಷ್ಟೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ ಮಾತಿಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನಕ್ಕೆ ಭಾರತದೊಂದಿಗೆ ಸಂಬಂಧ ಸುಧಾರಿಸಿಕೊಳ್ಳಬೇಕು ಎಂಬ ಇಚ್ಛೆ ನಿಜವಾಗಿಯೂ ಇದ್ದದ್ದೇ ಆದಲ್ಲಿ ಅದು ಮೊದಲು ಜಾತ್ಯಾತೀತ, ಧರ್ಮಾತೀತ ರಾಷ್ಟ್ರವಾಗಬೇಕು. ಭಾರತವು ಜಾತ್ಯಾತೀತ ರಾಷ್ಟ್ರ, ಅದು ಸಹ ನಮ್ಮಂತೆ ಜಾತ್ಯಾತೀತ ಆಗುವಂತಿದ್ದರೆ ಮಾತ್ರವೇ ಮಾತುಕತೆ ಸಾಧ್ಯ. ಜೊತೆಗೆ ಪಾಕಿಸ್ತಾನವು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ ಬಗ್ಗೆ ತನ್ನ ನಿಲವು ಸ್ಪಷ್ಟಪಡಿಸಬೇಕು.

If Pakistan develop as a secular state India will talk: Bipin Rawat

ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಆದ್ಯತೆ ಬಗ್ಗೆ ಮಾತನಾಡಿದ ಅವರು, ಭಾರತೀಯ ಸೇನೆಯಲ್ಲಿ ಮಹಿಳೆಯರ ಪ್ರವೇಶ ಇತ್ತೀಚೆಗೆ ಹೆಚ್ಚುತ್ತಿದೆ. ಆದರೆ ಅವರನ್ನು ನಾವಿನ್ನೂ ಸಂಘರ್ಷ ಸಮಯಗಳಲ್ಲಿ ಬಳಸಿಲ್ಲ, ಆ ರೀತಿಯ ಪರಿಸ್ಥಿತಿಗಳನ್ನು ಎದುರಿಸಲು ಅವರಿನ್ನೂ ಪೂರ್ಣ ಸಿದ್ಧರಿಲ್ಲ ಎಂಬುದು ಸೇನೆ ಅಭಿಪ್ರಾಯ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಹಿಳೆ, ಪುರುಷರು ಇಬ್ಬರೂ ಒಟ್ಟಿಗೆ ಕಾರ್ಯಾಚರಣೆ ಮಾಡುತ್ತಿದ್ದಾರೆ. ಆದರೆ ಇಲ್ಲಿ ಅದಕ್ಕಿನ್ನೂ ಸಮಯ ಬೇಕು ಎಂದು ಅವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+