ಈದ್ 2022: ದೇಶದಾದ್ಯಂತ ರಂಜಾನ್ ಸಂಭ್ರಮ, ಶಾಂತಿಗಾಗಿ ಪ್ರಾರ್ಥನೆ
ನವದೆಹಲಿ ಮೇ 03: ಇಂದು ದೇಶಾದ್ಯಂತ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರೀತಿ ಮತ್ತು ಸಂಭ್ರಮದಿಂದ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತಿದೆ. ಜೊತೆಗೆ ಶಾಂತಿಗಾಗಿ ಪ್ರಾರ್ಥಿಸಲಾಗುತ್ತಿದೆ. ಪರಸ್ಪರ ಪ್ರೀತಿಯ ಅಪ್ಪುಗೆಯ ಮೂಲಕ ಶುಭ ಹಾರೈಸುವ ಹಾಗೂ ಮನೆ ಮನೆಗಳಲ್ಲಿ ಸಿಹಿ ತಿನಿಸುಗಳ ತಯಾರಿಕೆಯೊಂದಿಗೆ ಅತಿಥಿಗಳನ್ನು ಆಹ್ವಾನಿಸುವ ದೃಶ್ಯಗಳು ಕಂಡುಬರುತ್ತಿವೆ. ಒಂದು ತಿಂಗಳ ಕಠಿಣ ಉಪವಾಸದ ನಂತರ ರಂಜಾನ್ ಆಚರಿಸಲಾಗುತ್ತಿದೆ.
ಈ ದಿನದಂದು ಜನರ ಮನೆಗಳಲ್ಲಿ ವರ್ಮಿಸೆಲ್ಲಿಯನ್ನು(ಶಾವಿಗೆ ಪಾಯಿಸಾ) ತಯಾರಿಸಲಾಗುತ್ತದೆ. ಆದ್ದರಿಂದ ಈ ಹಬ್ಬವನ್ನು 'ಸ್ವೀಟ್ ಈದ್' ಎಂದೂ ಕರೆಯುತ್ತಾರೆ. ಪ್ರಸ್ತುತ, ದೇಶದ ವಿವಿಧ ರಾಜ್ಯಗಳಿಂದ ಜನರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಚಿತ್ರಗಳು ಹೊರಬರುತ್ತಿದ್ದು, ಅವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ರಂಜಾನ್ ವಿಶೇಷ ಖಾದ್ಯ
ದಮ್ ಬಿರಿಯಾನಿ, ಹಲೀಮ್, ಒಂಟೆ ಮಾಂಸದ ಬಿರಿಯಾನಿ, ವೆಜ್ ಸಮೋಸಾ, ಒಣ ಹಣ್ಣು... ಹೀಗೆ ನಾನ್ವೆಜ್ ಮತ್ತು ವೆಜ್ ಖಾದ್ಯಗಳನ್ನು ರಂಜಾನ್ ದಿನದಂದು ತಯಾರಿಸಲಾಗುತ್ತದೆ. ನಾನಾ ಬಗೆಯ ಚಿಕನ್, ಮಟನ್ ಖಾದ್ಯದ ಜತೆಗೆ ರಂಜಾನ್ ಹಬ್ಬಕ್ಕಾಗಿಯೇ ಹಲವು ರೀತಿಯ ಸ್ಪೆಷಲ್ ಫುಡ್ ರೆಡಿ ಆಗುತ್ತವೆ. ಅವುಗಳಲ್ಲಿ ವಿಶೇಷವಾದದ್ದು ಮಟನ್ ಮತ್ತು ಚಿಕನ್ನಲ್ಲಿ ತಯಾರಾಗುವ ಹಲೀಮ್. ಹೈದರಾಬಾದಿ ಹಲೀಮ್ ಅಂತಾನೇ ಫೇಮಸ್ ಆಗಿರುವ ಲೋಕಪ್ರಿಯ ಸ್ವಾದಿಷ್ಟ ಡಿಶ್ ಇದು.

ಪತ್ಥರ್ ಘೋಷ್ ಕೂಡ ರಂಜಾನ್ನ ಮತ್ತೊಂದು ಸ್ಪೆಷಲ್ ಡಿಶ್. ಚಪ್ಪಡಿ ಕಲ್ಲುಗಳನ್ನು ಬೆಂಕಿಯಲ್ಲಿ ಕಾಯಿಸಿ, ಬಿಸಿಯಾಗಿರುವ ಆ ಕಲ್ಲಿನ ಮೇಲೆ ಮಾಂಸಕ್ಕೆ ಮಸಾಲೆ ಹಾಕಿ ಬೇಯಿಸುತ್ತಾರೆ. ವೆಜ್ ಪ್ರಿಯರಿಗಾಗಿ ಶೀರ್ ಕೂರ್ಮಾ ತಯಾರಿಸಲಾಗುತ್ತದೆ. ತೆಳು, ಗೋಡಂಬಿ, ಖರ್ಜೂರ, ಪಿಸ್ತಾ, ಬಾದಾಮಿ ಹೀಗೆ ಒಣ ಹಣ್ಣುಗಳನ್ನು ಮಿಕ್ಸ್ ಮಾಡಿ ತಯಾರಿಸಿದ ಸಿಹಿ ತಿಂಡಿ ಇದಾಗಿದ್ದು, ತಿನ್ನುವುದರ ಜತೆ ಕುಡಿಯುವ ಅನುಭವ ಕೂಡ ಕೊಡಲಿದೆ.
Recommended Video
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications