ಪತ್ನಿ ಸ್ನಾನ ಮಾಡುತ್ತಿದ್ದಾಗ ಇಣುಕಿದ್ದಕ್ಕೆ 6 ವರ್ಷದ ಬಾಲಕನ ಕೊಲೆ
ನವದೆಹಲಿ, ಸೆಪ್ಟೆಂಬರ್ 30: ತನ್ನ ಪತ್ನಿ ಸ್ನಾನ ಮಾಡುತ್ತಿದ್ದಾಗ ಇಣುಕಿ ನೋಡಿದ ಎಂಬ ಕಾರಣಕ್ಕೆ 19 ವರ್ಷದ ರೋಹಿತ್ ಎಂಬ ತರುಣನೊಬ್ಬ ಆರು ವರ್ಷದ ಬಾಲಕನನ್ನು ಹತ್ಯೆ ಮಾಡಿರುವ ದಾರುಣ ಘಟನೆ ಆಗ್ನೇಯ ದೆಹಲಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ದೆಹಲಿಯ ಓಕ್ಲಾ ಫೇಸ್ 2ನಲ್ಲಿ ತನ್ನ ತಂದೆ-ತಾಯಿಯೊಂದಿಗೆ ವಾಸವಾಗಿದ್ದ ಆರು ವರ್ಷದ , ಸೆಪ್ಟೆಂಬರ್ 27ರಿಂದ ಕಾಣೆಯಾಗಿದ್ದ. ಆ ಪ್ರಕರಣದ ತನಿಖೆ ನಡೆಸಿರುವ ಪೊಲೀಸರಿಗೆ ಆ ಬಾಲಕ ಕೊಲೆಯಾಗಿರುವುದು ಪತ್ತೆಯಾಗಿದೆ ಎಂದು ಆಗ್ನೇಯ ದೆಹಲಿಯ ಪೊಲೀಸ್ ಕಮೀಷನರ್ ರೊಮಿಲ್ ಬಾನಿಯಾ ಅವರು ತಿಳಿಸಿದ್ದಾರೆ.

ತನಿಖೆಯನ್ವಯ, ರೋಹಿತ್ ನನ್ನು ಪೊಲೀಸರು ಬಂಧಿಸಿದ್ದಾರೆ. ರೋಹಿತ್ ನ ಮನೆ ಹಾಗೂ ಕೊಲೆಯಾದ ಬಾಲಕನ ಮನೆಗಳು ನೆರೆಹೊರೆಯ ಮನೆಗಳೇ ಆಗಿದ್ದರಿಂದ ಆ ಮನೆಗೂ ಈ ಮನೆಗೂ ಒಂದು ರೀತಿಯ ಬಾಂಧವ್ಯವಿತ್ತು.
ಈ ಸಲುಗೆಯ ಅಲೆಯಲ್ಲಿ ತನಗರಿವಿಲ್ಲದೆ ಎಲ್ಲೆ ಮೀರಿದ್ದ ಆ ಆರು ವರ್ಷದ ಬಾಲಕ, ಒಮ್ಮೆ ರೋಹಿತ್ ಪತ್ನಿ ಸ್ನಾನ ಮಾಡುತ್ತಿದ್ದಾಗ ಬಾತ್ ರೂಂನೊಳಗೆ ಇಣುಕಿ ನೋಡಿ ಕ್ಷಲ್ಲಕವಾಗಿ ಟೀಕೆ ಮಾಡಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರೋಹಿತ್ ದಂಪತಿ, ಸೆ. 27ರಂದು ತನ್ನ ಮನೆ ಮುಂದೆ ಆಡುತ್ತಿದ್ದ ಬಾಲಕನ್ನು ತಮ್ಮ ಮನೆಯೊಳಗೆ ಕರೆದು ವಿಚಾರಿಸಲು ಮುಂದಾಗಿ, ಮಾತಿಗೆ ಮಾತು ಬೆಳೆದು ರೋಹಿತ್ ಆತನನ್ನು ದೂಡಿದ್ದಾನೆ.
ಆಗ, ಆ ಬಾಲಕನ ತಲೆಯು ಮಂಚದ ಅಂಚಿಗೆ ಬಡಿದು ಆತ ಸ್ಥಳದಲ್ಲೇ ಮೃತನಾಗಿದ್ದಾನೆ. ಇದರಿಂದ ಬೆದರಿದ ರೋಹಿತ್, ಆ ಬಾಲಕನ್ನುಗೋಣಿ ಚೀಲದಲ್ಲಿ ಮುಚ್ಚಿ ರಾತ್ರಿಯಾದ ನಂತರ, ಆತನ ಮನೆಯ ಸನಿಹದಲ್ಲೇ ಹೂತು ಹಾಕಿದ್ದ. ಗುಂಡಿ ಆಳವಾಗಿ ತೋಡಿರದ ಕಾರಣ, ಕೆಲ ದಿನಗಳ ನಂತರ ಕೆಟ್ಟ ವಾಸನೆ ಬಂದಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು.
ಅಷ್ಟರಲ್ಲಾಗಲೇ ಬಾಲಕ ಕಾಣೆಯಾದ ದೂರಿನ ಬಗ್ಗೆ ತಲೆಕೆಡಿಸಿಕೊಂಡಿದ್ದ ಪೊಲೀಸರಿಗೆ ಆ ಬಾಲಕನ ಮನೆಯ ಬಳಿಯಲ್ಲೇ ಆ ಬಾಲಕ ಹೆಣವಾಗಿ ಸಿಕ್ಕಿದ್ದರಿಂದ ಪ್ರಕರಣ ತಿರುವು ಪಡೆದುಕೊಂಡು ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
-
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!











Click it and Unblock the Notifications