ಜೇಟ್ಲಿ ಹಾಕಿದ ಕೇಸ್ : ಅರವಿಂದ್ ಕೇಜ್ರಿವಾಲ್ ಗೆ ಕೋರ್ಟ್ ನೋಟಿಸ್
ನವದೆಹಲಿ, ಡಿ. 22: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡರ ವಿರುದ್ಧ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪಟಿಯಾಲ ಹೌಸ್ ಕೋರ್ಟಿನಲ್ಲಿ ಭಾರಿ ಮೊತ್ತದ ಕ್ರಿಮಿನಲ್ ಮೊಕದ್ದಮೆ ಹೂಡಿದ್ದು ಗೊತ್ತಿರಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ನಡೆದು, ಕೇಜ್ರಿವಾಲ್ ಹಾಗೂ ಇತರೆ ಐವರಿಗೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಲಾಗಿದೆ.
ದೆಹಲಿ
ಕ್ರಿಕೆಟ್
ಸಂಸ್ಥೆಯ
(ಡಿಡಿಸಿಎ)
ಅವ್ಯವಹಾರಕ್ಕೆ
ಸಂಬಂಧಿಸಿದಂತೆ
ವಿತ್ತ
ಸಚಿವ್
ಅರುಣ್
ಜೇಟ್ಲಿ
ಅವರ
ವಿರುದ್ಧ
ದೆಹಲಿ
ಮುಖ್ಯಮಂತ್ರಿ
ಅರವಿಂದ
ಕೇಜ್ರಿವಾಲ್
ಸೇರಿದಂತೆ
ಕೆಲ
ಆಪ್
ನಾಯಕರು
ಆರೋಪಿಸಿದ್ದರು.
ಇದಕ್ಕೆ
ಆಕ್ಷೇಪ
ವ್ಯಕ್ತಪಡಿಸಿರುವ
ಅರುಣ್
ಜೇಟ್ಲಿ
ಅವರು
ನಾಗರಿಕ
ಮಾನಹಾನಿ
ಖಟ್ಲೆ
ದಾಖಲಿಸಿ
10
ಕೋಟಿ
ರೂಪಾಯಿಗಳ
ಪರಿಹಾರ
ಕೇಳಿದ್ದರು.
[ಡಿಡಿಸಿಎ
ಭ್ರಷ್ಟಾಚಾರ:
ವಿಡಿಯೋ
ಸಾಕ್ಷ್ಯ
ಬಹಿರಂಗ]
ಜೇಟ್ಲಿ ವಿರುದ್ಧ ಡಿಡಿಸಿಎಯಲ್ಲಿ ಫೋರ್ಜರಿ, ಭ್ರಷ್ಟಾಚಾರ, ಸಾರ್ವಜನಿಕ ಹಣದ ಲೂಟಿ ಆರೋಪಗಳಿಗೆ ಸಂಬಂಧಿಸಿದಂತೆ ಜೇಟ್ಲಿ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಿದೆ. ಮಾಜಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಗೋಪಾಲ ಸುಬ್ರಮಣಿಯಂ ನೇತೃತ್ವದಲ್ಲಿ ಪ್ರಕರಣದ ತನಿಖೆಗೆ ದೆಹಲಿ ಸರ್ಕಾರ ಆದೇಶಿಸಿದೆ.
ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಹಗರಣ ಸಂಬಂಧಿಸಿದಂತೆ ವಿಡಿಯೋ ಸಾಕ್ಷ್ಯವನ್ನು ಮಾಜಿ ಕ್ರಿಕೆಟರ್,ಬಿಜೆಪಿ ಸಂಸದ ಕೀರ್ತಿ ಅಜಾದ್ ಅವರು ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದಾರೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಡಿಡಿಸಿಎ ಅಧ್ಯಕ್ಷರಾಗಿದ್ದ ಕಾಲದಲ್ಲಿ ಭಾರಿ ಅವ್ಯವಹರ ನಡೆದಿದೆ ಎಂದು ಆರೋಪಿಸಿದ್ದರು. (ಒನ್ ಇಂಡಿಯಾ ಸುದ್ದಿ)