ಲಂಚಕ್ಕಾಗಿ ರಫೇಲ್ ಡೀಲನ್ನು ಕಾಂಗ್ರೆಸ್ ವಾಪಸ್ ಕಳಿಸಿತ್ತು : ಆರ್ಎಸ್ಪಿ
ನವದೆಹಲಿ, ಸೆಪ್ಟೆಂಬರ್ 22 : "ಇದು ಅತ್ಯಂತ ನಾಚಿಕೆಗೇಡಿನ ವಿಷಯ, ಬೇಜವಾಬ್ದಾರಿಯುತವಾದದ್ದು. ಒಂದು ರಾಷ್ಟ್ರದ ಪ್ರಧಾನಿಯ ವಿರುದ್ಧ ಯಾವುದೇ ರಾಷ್ಟ್ರೀಯ ಪಕ್ಷದ ಅಧ್ಯಕ್ಷರೊಬ್ಬರು ಇಂಥ ಪದಗಳನ್ನು ಬಳಿಸಿಲ್ಲ. ರಾಹುಲ್ ಅಂಥವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?"
ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ನರೇಂದ್ರ ಮೋದಿಯವರು ದೇಶಕ್ಕೆ ಮೋಸ ಮಾಡಿದ್ದಾರೆ, ದೇಶದ ಪ್ರಧಾನಿ 'ಕಳ್ಳ' (ಚೋರ್) ಎಂದು ಜರಿದು, ತಮ್ಮ ಹುದ್ದೆಯ ಘನೆಯನ್ನೂ ಮೀರಿ ಬಳಸಿರುವ ಪದಗಳಿಗಾಗಿ ರಾಹುಲ್ ಗಾಂಧಿಯವರನ್ನು ಮಾತಿನಲ್ಲೇ ಜರಿದುಹಾಕಿದ್ದಾರೆ ಬಿಜೆಪಿ ನಾಯಕ ರವಿ ಶಂಕರ್ ಪ್ರಸಾದ್.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ತಾಯಿಯವರೊಂದಿಗೆ ರಾಹುಲ್ ಗಾಂಧಿ ಅವರ ಮೇಲೆಯೂ ಚಾರ್ಜ್ ಶೀಟ್ ಹಾಕಲಾಗಿದೆ. ತಮ್ಮ ಸ್ವಂತ ಭಾವನ ವಿರುದ್ಧ ಭೂಕಬಳಿಕೆಯ ಕೇಸನ್ನು ಜಡಿಯಲಾಗಿದ್ದರೂ ಒಂದೇ ಒಂದು ಮಾತನ್ನೂ ಆಡಿಲ್ಲ ಎಂದು ರವಿ ಶಂಕರ್ ಪ್ರಸಾದ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

2012ರಲ್ಲಿ ಡಸಾಲ್ಟ್ ಅತ್ಯಂತ ಕಡಿಮೆಯ ಬಿಡ್ಡರ್ ಆಗಿದ್ದರೂ ರಫೇಲ್ ಡೀಲನ್ನು ಏಕೆ ವಾಪಸ್ ಕಳಿಸಲಾಯಿತು? ನಮ್ಮ ನೇರವಾದ ಆರೋಪ ಏನೆಂದರೆ, ಕಾಂಗ್ರೆಸ್ ಗೆ ಆಗ ಯಾವುದೇ ಲಂಚ ದೊರೆಯಲಿಲ್ಲ, ಆ ಕಾರಣಕ್ಕಾಗಿ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರು ತಿರುಗೇಟು ನೀಡಿದ್ದಾರೆ.
ಫ್ರಾನ್ಸ್ ನ ಡಸಾಲ್ಟ್ ಏವಿಯೇಶನ್ ಜೊತೆ ಯುದ್ಧ ವಿಮಾನ ಕೊಳ್ಳುವ ವ್ಯವಹಾರದಲ್ಲಿ ಭಾರತದ ಭಾಗೀದಾರ ಕಂಪನಿಯಾಗಿ ರಿಯನ್ಸ್ ಡಿಫೆನ್ಸ್ ಕಂಪನಿ ಪರ ನರೇಂದ್ರ ಮೋದಿ ಲಾಬಿ ಮಾಡಿದರು ಎಂದು ಸಂದರ್ಶನವೊಂದರಲ್ಲಿ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಕೋ ಒಲಾಂಡ್ ಹೇಳಿದ್ದು ಜೇನಿನ ಗೂಡಿಗೆ ಕಲ್ಲು ಎಸೆದಂತಾಗಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವಿದ್ದಾಗಲೂ ರಫೇಲ್ ಫೈಟರ್ ಜೆಟ್ ಖರೀದಿ ಪ್ರಕರಣದಲ್ಲಿ ರಿಲಯನ್ಸ್ ಹೆಸರು ಇತ್ತು. ಅಂದು ಮುಖೇಶ್ ಅಂಬಾನಿ ಅದರ ಮುಖ್ಯಸ್ಥರಾಗಿದ್ದರು. ನಂತರ ಆ ಕಂಪನಿಯನ್ನು ಮುಚ್ಚಲಾಯಿತು. ಇಂದು ಅನಿಲ್ ಅಂಬಾನಿ ಅವರ ರಿಲಯನ್ಸ್ ಡಿಫೆನ್ಸ್ ಡಸಾಲ್ಟ್ ಕಂಪನಿಯ ಜೊತೆ ಜಂಟಿ ವ್ಯವಹಾರ ನಡೆಸಿದೆ ಎಂದು ಪ್ರತಿಪಾದಿಸಿದರು.
ಒಬ್ಬ ದುರಹಂಕಾರಿ ಮತ್ತು ಸುಳ್ಳಿನ ಮೇಲೆ ಸುಳ್ಳನ್ನು ಹೇಳುತ್ತಿರುವ ಮಾಹಿತಿಯೇ ಇಲ್ಲದ ನಾಯಕನೊಬ್ಬನನ್ನು ಸಂತುಷ್ಟ ಪಡಿಸಲೆಂದು ರಫೇಲ್ ಡೀಲ್ ಹಗರಣದ ತನಿಖೆಗೆಂದು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಅವರು ಬೇಡಿಕೆಯನ್ನು ಕಡ್ಡಿ ಮುರಿದಂತೆ ತಳ್ಳಿಹಾಕಿದ್ದಾರೆ.
ಈಗಾಗಲೆ ಫ್ರಾನ್ಸ್ ರಕ್ಷಣಾ ಸಚಿವಾಲಯ, ಆಫ್ ಸೆಟ್ ಭಾಗೀದಾರಿ ಕಂಪನಿಯನ್ನು ಆಯುವಲ್ಲಿ ಭಾರತದ ಅಥವಾ ಫ್ರಾನ್ಸ್ ಕಂಪನಿಯ ಕೈವಾಡವಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರೂ ಕಾಂಗ್ರೆಸ್ ನಾಯಕರು ವಾಗ್ದಾಳಿ ಮುಂದುವರಿಸಿದ್ದಾರೆ. ರಾಹುಲ್ ಮಾಡುತ್ತಿರುವ ಭ್ರಷ್ಟಾಚಾರದ ಆರೋಪವನ್ನು ಕೂಡ ರವಿ ಶಂಕರ್ ಪ್ರಸಾದ್ ಅವರು ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಳ್ಳಿಹಾಕಿದರು.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications