ಅಮೆರಿಕ ಪ್ರಜೆಗೆ 90,000 ರೂ. ನಾಮ ಎಳೆದ ಕ್ಯಾಬ್ ಡ್ರೈವರ್
ನವದೆಹಲಿ, ಅಕ್ಟೋಬರ್ 22: ದೆಹಲಿಯಲ್ಲಿ ಕ್ಯಾಬ್ ಡ್ರೈವರ್ ವೊಬ್ಬ ಅಮೆರಿಕದ ಪ್ರಜೆಗೆ 90,000 ರೂ. ನಾಮ ಎಳೆದ ಘಟನೆ ನಡೆದಿದೆ. ಅಮೆರಿಕದಿಂದ ನವದೆಹಲಿಗೆ ಬಂದಿಳಿದಿದ್ದ ಪ್ರವಾಸಿಯೊಬ್ಬರಿಗೆ, ದೆಹಲಿ ಸಿಟಿ ಸಂಪೂರ್ಣ ಸ್ತಬ್ಧವಾಗಿದೆ. ದೀಪಾವಳಿ ನಿಮಿತ್ತ ಇಡೀ ನಗರದಲ್ಲಿ ಯಾವುದೇ ವಾಹನ ಓಡಾಡುವುದಿಲ್ಲ ಎಂದು ಹೇಳಿ ತಮ್ಮ ಆತನನ್ನು ಜೈಪುರ ಮತ್ತು ಆಗ್ರಾಕ್ಕೆ ಕರೆದೊಯ್ದಿದ್ದಾನೆ. ನಂತರ ಒಟ್ಟು 90 ಸಾವಿರ ರೂಪಾಯಿಗೂ ಹೆಚ್ಚು ಹಣವನ್ನು ಆತನ ಬಳಿ ಪಡೆದಿದ್ದಾನೆ.
ಘಟನೆ ನಡೆದಿದ್ದು ಹೀಗೆ: ಅಕ್ಟೋಬರ್ 18 ರಂದು ದೆಹಲಿಗೆ ಬಂದಿಳಿದ ಜಾರ್ಜ್ ವಾನ್ಮಿಟರ್ ಎಂಬ ಅಮೆರಿಕ ಪ್ರಜೆ, ಏರ್ಪೋರ್ಟಿನಿಂದ ಫಾರ್ಗಂಜ್ ಎಂಬ ಪ್ರದೇಶಕ್ಕೆ ತೆರಳಲು ಟ್ಯಾಕ್ಸಿ ಬುಕ್ ಮಾಡಿದ್ದರು. ಅವರನ್ನು ಕರೆದೊಯ್ಯಲು ಬಂದ ಟ್ಯಾಕ್ಸಿಯವನು, ರಸ್ತೆ ಮಧ್ಯೆ ಪೊಲೀಸ್ ಬ್ಯಾರಿಕೇಡ್ ಗಳು ಕಂಡಿದ್ದನ್ನು ನೋಡಿ ಜಾರ್ಜ್ ಬಳಿ ಹೊಸ ಕತೆ ಕಟ್ಟಿದ್ದ. ದೀಪಾವಳಿ ಇರುವುವದರಿಂದ ದೆಹಲಿ ನಗರ ಶಟ್ ಡೌನ್ ಆಗಿದೆ. ಆದ್ದರಿಂದ ನೀವು ತಲುಪಬೇಕಾದ ಸ್ಥಳಕ್ಕೆ ಹೋಗುವುದಕ್ಕಾಗುವುದಿಲ್ಲ. ನೀವು ಬುಕ್ ಮಾಡಿದ ಹೊಟೇಲ್ ಕೂಡ ಸಿಗುವುದಿಲ್ಲ, ಆದ್ದರಿಂದ ನಾನೇ ನಿಮ್ಮನ್ನು ಒಂದು ಟ್ರಾವೆಲ್ ಏಜೆನ್ಸಿಗೆ ಕರೆದೊಯ್ಯುತ್ತೇನೆ. ಅಲ್ಲಿ ಬೇರೆ ಹೊಟೆಲ್ ಬುಕ್ ಮಾಡಿ ಎಂದು ಕೇಳಿದ್ದಾನೆ.

ನಿಜ ಎಂದು ನಂಬಿದ ಜಾರ್ಜ್ ಕ್ಯಾಬ್ ಡ್ರೈವರ್ ನೊಂದಿಗೆ ಟ್ರಾವೆಲ್ ಏಜೆನ್ಸಿಗೆ ತೆರಳಿದ್ದಾನೆ. ಅದು ನಕಲಿ ಟ್ರಾವೆಲ್ ಏಜೆನ್ಸಿಯಾಗಿದ್ದು, ಅವರು ಜೈಪುರ ಮತ್ತು ಆಗ್ರಾದಲ್ಲಿ ಹೊಟೆಲ್ ಬುಕ್ ಮಾಡಿದ್ದಾರೆ. ಟ್ಯಾಕ್ಸಿಯವನು ಜಾರ್ಜ್ ನನ್ನು ಜೈಪುರಕ್ಕೆ ಮತ್ತು ಆಗ್ರಾಕ್ಕೆ ಕರೆದೊಯ್ದಿದ್ದಾನೆ. ನಂತರ ಜಾರ್ಜ್ ದೆಹಲಿಯಲ್ಲಿ ತಾನು ಬುಕ್ ಮಾಡಿದ್ದ ಹೊಟೆಲ್ ಗೆ ಫೋನ್ ಮಾಡಿ, ತಮ್ಮ ಬುಕಿಂಗ್ ಕ್ಯಾನ್ಸಲ್ ಮಾಡಿರುವುದಕ್ಕೆ ತನ್ನ ಹಣವನ್ನು ರೀಫಂಡ್ ಮಾಡುವಂತೆ ಕೇಳಿದ್ದಾರೆ. ಆಗ ಹೊಟೆಲ್ ನವರು, ನಾವು ನಿಮ್ಮ ಬುಕಿಂಗ್ ಕ್ಯಾನ್ಸಲ್ ಮಾಡಿಲ್ಲ, ನೀವೇ ಹೊಟೆಲ್ ಗೆ ಬಂದಿಲ್ಲ ಎಂದಿದ್ದಾರೆ. ಆಗ ಟ್ಯಾಕ್ಸಿ ಡ್ರೈವರ್ ಬಗ್ಗೆ ಜಾರ್ಜ್ ಹೊಟೆಲ್ ನವರಿಗೆ ತಿಳಿಸಿದ್ದಾರೆ.
ದೀಪಾವಳಿಗೆ ಶಟ್ ಡೌನ್ ಎಂಬುದೆಲ್ಲ ಸುಳ್ಳು,. ನಿಮಗೆ ಟ್ಯಾಕ್ಸಿ ಡ್ರೈವರ್ ಮೋದ ಮಾಡಿದ್ದಾನೆ ಎಂದು ಹೊಟೆಲ್ ನವರು ತಿಳಿಸಿದ್ದಾರೆ. ಕೂಡಲೇ ಜಾರ್ಜ್ ಟ್ಯಾಕ್ಸಿ ಡ್ರೈವರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಂತರ ಪೊಲೀಸರು ಕ್ಯಾಬ್ ಡ್ರೈವರ್ ನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications