#metoo ಅಭಿಯಾನ ತಪ್ಪು ದಾರಿಗೆ ಸೂಚನೆ: ಬಿಜೆಪಿ ಸಂಸದ
ನವದೆಹಲಿ, ಅಕ್ಟೋಬರ್ 09: ವಿದೇಶದಲ್ಲಿ ಜನಪ್ರಿಯಗೊಂಡಿದ್ದ #metoo ಅಭಿಯಾನ ಈಗ ಭಾರತದಲ್ಲಿ ಜನಪ್ರಿಯಗೊಳ್ಳುತ್ತಿದೆ. ಮಹಿಳೆಯರು ತಮಗಾದ ನೋವನ್ನು ಈ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈ ಅಭಿಯಾನ ತಪ್ಪು ದಾರಿಗೆ ಎಳೆಯಲಿದೆ. ಇಂಥ ಪದ್ಧತಿ ತಪ್ಪು ಎಂದು ಬಿಜೆಪಿ ಸಂಸದ ಉದಿತ್ ರಾಜ್ ಹೇಳಿದ್ದಾರೆ.
'ನನ್ನ ಪ್ರಕಾರ ಈ ಅಭಿಯಾನ ಅಗತ್ಯವೆನಿಸಿದರೂ, ಈಗ ಇದು ತಪ್ಪು ದಾರಿಗೆ ಎಳೆಯುತ್ತಿದೆ. 10 ವರ್ಷಗಳ ಹಿಂದೆ ನಡೆದ ಘಟನೆ ಬಗ್ಗೆ ಈಗ ಆರೋಪ ಹೊರೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ಹತ್ತು ವರ್ಷಗಳಾದ ಮೇಲೆ ಸಾಕ್ಷ್ಯಗಳನ್ನು ಹೇಗೆ ನೀಡುತ್ತಿರಿ? ಇಂಥ ಆರೋಪಗಳು ವ್ಯಕ್ತಿಯ ವ್ಯಕ್ತಿತ್ವವನ್ನೇ ಹಾಳು ಮಾಡುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು' ಎಂದು ದೆಹಲಿಯ ವಾಯುವ್ಯ ಕ್ಷೇತ್ರದ ಸಂಸದ ಉದಿತ್ ರಾಜ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ನಂತರ ಈ ಬಗ್ಗೆ ಮಾತನಾಡಿದ ಉದಿತ್, ಮಹಿಳೆಯರು 2 ರಿಂದ 4 ಲಕ್ಷ ರು ಪಡೆದು ವೃಥಾರೋಪ ಮಾಡುತ್ತಾರೆ. ಯಾರು ಈಗಿನ ಕಾಲದಲ್ಲಿ ಪರ್ಫೆಕ್ಟ್ ಆಗಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನೊಂದೆಡೆ, ಎಲ್ಲರನ್ನು ಹಾಸ್ಯಮಾಡುತ್ತಿದ್ದ ಅಲ್ ಇಂಡಿಯಾ ಬ್ಯಾಕ್ ಚೊಡ್ ಚಾನೆಲ್ ತಂಡದಿಂದ ಸ್ಥಾಪಕ ಸದಸ್ಯ ತನ್ಮಯ್ ಭಟ್ ಹಾಗೂ ಗುರ್ ಸಿಮ್ರಾನ್ ಖಂಬಾ ಹೊರ ನಡೆದಿದ್ದಾರೆ.
#MeToकैम्पेन जरूरी है लेकिन किसी व्यक्ति पर 10 साल बाद यौन शोषण का आरोप लगाने का क्या मतलब है ? इतने सालों बाद ऐसे मामले की सत्यता की जाँच कैसे हो सकेगा?जिस व्यक्ति पर झूठा आरोप लगा दिया जाएगा उसकी छवि का कितना बड़ा नुकशान होगा ये सोचने वाली बात है।गलत प्रथा की शुरुआत है।#MeToo
— Dr. Udit Raj, MP (@Dr_Uditraj) October 9, 2018
ನಟ ನಾನಾ ಪಾಟೇಕರ್, ಚಿತ್ರಕರ್ಮಿ ವಿಕಾಸ್ ಬೆಹ್ಲ್, ಲೇಖಕ ಚೇತನ್ ಭಗತ್, ಕಾಮಿಕ್ ಉತ್ಸವ್ ಚಕ್ರವರ್ತಿ, ನಟ ರಜತ್ ಕಪೂರ್, ಅಲೋಕ್ ನಾಥ್ ಅವರಿಗೆ #metoo ಅಭಿಯಾನದ ಬಿಸಿ ತಟ್ಟಿದೆ.












Click it and Unblock the Notifications