ಭಾರತ ಬಂದ್: ದೆಹಲಿ, ಹರ್ಯಾಣ ಬದಲಿ ಮಾರ್ಗಗಳ ವಿವರ
ನವದೆಹಲಿ, ಡಿಸೆಂಬರ್ 08: ಭಾರತ ಬಂದ್ ಇರುವ ಕಾರಣ ಹರ್ಯಾಣ ಹಾಗೂ ದೆಹಲಿ ನಡುವೆ ಸಾಕಷ್ಟು ಹೆದ್ದಾರಿಗಳು ಬಂದ್ ಆಗಲಿದ್ದು, ಬದಲಿ ಮಾರ್ಗಗಳ ಕುರಿತು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ದೆಹಲಿ-ಅಂಬಾಲಾ ಎನ್ಎಚ್ 44, ದೆಹಲಿ-ಹಿಸಾರ್ ಎನ್ಎಚ್ 9, ದೆಹಲಿ-ಪಲ್ವಾಲ್ ಎನ್ಎಚ್ 19, ದೆಹಲಿ ರೆವಾರಿ ಎನ್ಎಚ್ 48ನಲ್ಲಿ ಕೆಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ತೊಂದರೆ ಉಂಟಾಗಲಿದೆ.
ಹರ್ಯಾಣದ ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬಾರದಂತೆ ಸೂಚಿಸಲಾಗಿದೆ. ದೆಹಲಿ ಪೊಲೀಸರು ಕೂಡ ಕೆಲವು ಸೂಚನೆಗಳು ನೀಡಿದ್ದಾರೆ.

ಸಿಂಘು, ಔಚಂಡಿ, ಪಿಯಾಒ ಮನಿಯಾರಿ, ಮಂಗೇಶ್, ಟಕ್ರಿ, ಝರೋಡಾ ಗಡಿಗಳು ಬಂದ್ ಇವೆ. ರಾಷ್ಟ್ರೀಯ ಹೆದ್ದಾರಿ 44 ಎರಡೂ ಕಡೆಗಳಿಂದಲೂ ಬಂದ್ ಇರಲಿದೆ. ವಾಹನ ಸವಾರರು ಬದಲಿ ಮಾರ್ಗವನ್ನು ಬಳಸುವಂತೆ ಕೋರಲಾಗಿದೆ. ಲಾಂಪುರ್, ಸಫಿಯಾಬಾದ್, ಸಬೋಲಿ ಗಡಿಗೆ ಪ್ರವೇಶಿಸದೆ ಮುಕಾರ್ಬಾ ಹಾಗೂ ಜಿಟಿಕೆ ರಸ್ತೆಯಲ್ಲಿ ತೆರಳುವಂತೆ ಸೂಚಿಸಲಾಗಿದೆ.
ನೋಯ್ಡಾಕ್ಕೆ ತೆರಳುವವರು ಡಿಎನ್ಡಿ ಮಾರ್ಗವಾಗಿ ಚಳಿಸಬಹುದು, ನೋಯ್ಡಾಕ್ಕೆ ತೆರಳುವ ಚಿಲ್ಲಾ ಗಡಿ ಬಂದ್ ಆಗಿದೆ. ಘಾಜಿಪುರ್ ಗಡಿ ಬಂದ್ ಆಗಿದೆ. ಹೀಗಾಗಿ ದೆಹಲಿಗೆ ಬರುವವರು ಎನ್ಎಚ್ 24 ಬಳಸದೆ ಅಪ್ಸರಾ, ಭೋಪ್ರಾ, ಡಿಎನ್ಡಿ ಮೂಲಕ ಬರಲು ತಿಳಿಸಲಾಗಿದೆ.
ಹರ್ಯಾಣಕ್ಕೆ ಹೋಗುವವರು ಧಾನ್ಸಾ, ದೌರಾಲಾ, ಕಪಾಶೆರಾ, ರಾಜೋಕ್ರಿ, ಬಿಜ್ವಾಸನ್ ಮೂಲಕ ಬರಬಹುದು. ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ರೈತರು ಭಾರತ ಬಂದ್ಗೆ ಕರೆ ನೀಡಿದ್ದಾರೆ. ಹಲವು ಕಡೆ ಪ್ರತಿಭಟನೆಯ ಕಾವು ಹೆಚ್ಚಾಗಿದೆ.
-
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ












Click it and Unblock the Notifications