ಕೇಂದ್ರ ಸರ್ಕಾರದ ವಿರುದ್ಧ ಅಣ್ಣಾ ಹಜಾರೆ ಪ್ರತಿಭಟನೆ
ನವದೆಹಲಿ,
ಫೆ.16:
ವಿವಾದಾತ್ಮಕ
ಭೂ
ಸ್ವಾಧೀನ
ಕಾಯ್ದೆ
ತಿದ್ದುಪಡಿಯನ್ನು
ಕೈ
ಬಿಡಬೇಕೆಂದು
ಆಗ್ರಹಿಸಿ
ಸಾಮಾಜಿಕ
ಕಾರ್ಯಕರ್ತ
ಅಣ್ಣಾ
ಹಜಾರೆ
ಅವರು
ಜಂತರ್
ಮಂತರ್
ಬಳಿ
ಫೆ.22ರಿಂದ
ಎರಡು
ದಿನಗಳ
ಕಾಲ
ಪ್ರತಿಭಟನೆ
ಹಮ್ಮಿಕೊಂಡಿದ್ದಾರೆ.
ಅಣ್ಣಾ
ಅವರ
ಬೆಂಬಲಕ್ಕೆ
ಬಹುತೇಕ
ಎಲ್ಲಾ
ರಾಜಕೀಯ
ಪಕ್ಷಗಳು
ನಿಂತಿದ್ದು,
ಮೋದಿ
ಸರ್ಕಾರಕ್ಕೆ
ಈಗಲೇ
ಪ್ರತಿಭಟನೆಯ
ಬಿಸಿ
ತಟ್ಟುತ್ತಿದೆ.
ಕೇಂದ್ರ
ಸರ್ಕಾರ
ಕಳೆದ
ಅಧಿವೇಶನದಲ್ಲಿ
ಸುಗ್ರೀವಾಜ್ಞೆ
ಮೂಲಕ
ಜಾರಿಗೆ
ವಿವಾದಾತ್ಮಕ
ಭೂ
ಸ್ವಾಧೀನ
ಕಾಯ್ದೆ
ತಿದ್ದುಪಡಿ
ಜಾರಿಗೆ
ತಂದಿತ್ತು.
ಈ
ಕಾಯ್ದೆಯನ್ನು
ಕೈ
ಬಿಡಬೇಕೆಂದು
ಒತ್ತಾಯಿಸಿ
ಫೆ.22ರಿಂದ
24ರವರೆಗೆ
ಪ್ರತಿಪಕ್ಷಗಳು
ಪ್ರತಿಭಟನೆ
ಹಮ್ಮಿಕೊಂಡಿವೆ.
ದೆಹಲಿಯ
ಜಂತರ್-ಮಂತರ್
ಮೈದಾನದಲ್ಲಿ
ಈ
ಪ್ರತಿಭಟನೆ
ನಡೆಯಲಿದೆ.
ಕಾಂಗ್ರೆಸ್,
ಜೆಡಿಯು,
ಡಿಎಂಕೆ,ಬಿಎಸ್ಪಿ
,
ಎಸ್ಪಿ
,
ಎಎಪಿ,
ಸಿಪಿಐಎಂ,
ಟಿಎಂಸಿ,
ಎನ್ಸಿಪಿ
ಹಾಗೂ
ಆರ್ಎಸ್ಎಸ್ನ
ಅಂಗಸಂಸ್ಥೆಗಳು
ಕೂಡ
ಇದರಲ್ಲಿ
ಪಾಲ್ಗೊಳ್ಳಲಿವೆ.
ಅಣ್ಣಾ ಹಜಾರೆ ನೇತೃತ್ವದಲ್ಲಿ ಧರಣಿ: ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ, ಸಾಮಾಜಿಕ ಹೋರಾಟಗಾರ್ತಿ ಹಾಗೂ ನರ್ಮದಾ ಬಚಾವೋ ಆಂದೋಲನದ ಮುಖ್ಯಸ್ಥೆ ಮೇಧಾ ಪಾಟ್ಕರ್, ಆರ್ಎಸ್ಎಸ್ನ ಮಾಜಿ ಮುಖಂಡ ಗೋವಿಂದಾಚಾರ್ಯ ಸೇರಿದಂತೆ ಆರ್ಎಸ್ಎಸ್ನ ಅಂಗಸಂಸ್ಥೆಗಳಾದ ಸ್ವದೇಶಿ ಜಾಗರಣ ಮಂಚ್, ಭಾರತೀಯ ಕಿಸಾನ್ ಸಂಘ ಇದರಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
ಕಾಂಗ್ರೆಸ್ನ ಯುವ ನಾಯಕ ರಾಹುಲ್ ಗಾಂಧಿ ಪ್ರತಿಭಟನೆಯ ನೇತೃತ್ವ ವಹಿಸುವ ಸಾಧ್ಯತೆಯಿದೆ. ಕೆಲವು ಪ್ರಾದೇಶಿಕ ಪಕ್ಷಗಳು ಸಹ ಕೈ ಜೋಡಿಸಿದ್ದು , ಕೇಂದ್ರ ಸರ್ಕಾರದ ವಿರುದ್ಧ ಮೂರು ದಿನಗಳ ಕಾಲ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಹೇಳಿದ್ದಾರೆ.(ಪಿಟಿಐ)