ಭಯೋತ್ಪಾದಕರ ಹುಟ್ಟಡಗಿಸಲು ಬಂದರು ಬಂದೂಕು ಹಿಡಿದ ದುರ್ಗೆಯರು
ನವದೆಹಲಿ, ಆಗಸ್ಟ್ 11: ಭಾರತದ ಭಯೋತ್ಪಾದಕ ನಿಗ್ರಹ ದಳಕ್ಕೆ ಇನ್ನು ಮಹಿಳಾ ಬಲ ಕೂಡ ಸೇರಿಕೊಂಡಿದೆ. ದೆಹಲಿ ಪೊಲೀಸ್ ದೇಶದಲ್ಲೇ ಮೊದಲ ಬಾರಿಗೆ ಮಹಿಳಾ ಸ್ವಾಟ್ (SWAT) ತಂಡವನ್ನು ಸೇರ್ಪಡೆಗೊಳಿಸಿಕೊಂಡಿದೆ.
36 ಮಹಿಳಾ ಕಮಾಂಡರ್ಗಳು ಈ ತಂಡದಲ್ಲಿದ್ದು, ಬಹುತೇಕರು ಈಶಾನ್ಯ ರಾಜ್ಯದ ಮಹಿಳೆಯರಾಗಿದ್ದಾರೆ. ಸ್ವಾತಂತ್ರ್ಯ ದಿನೋತ್ಸವದ ಭದ್ರತಾ ಕಾರ್ಯದಲ್ಲಿ ಈ ತಂಡ ಭಾಗಿಯಾಗಲಿದೆ.
ಈ ಮಹಿಳಾ ಸ್ವಾಟ್ (ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರಗಾರಿಕಾ ಪಡೆ) ತಂಡವನ್ನು ದೆಹಲಿ ಪೊಲೀಸ್ ಗೆ ಸೇರ್ಪಡೆಗೊಳ್ಳುವ ವಿಶೇಷ ಸಂದರ್ಭಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಸಾಕ್ಷಿಯಾಗಿದ್ದು. ಮಹಿಳಾ ಸ್ವಾಟ್ ಬಲ ಇನ್ನಷ್ಟು ಹೆಚ್ಚಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಕಠಿಣ ತರಬೇತಿ
36 ಮಹಿಳಾ ಸ್ವಾಟ್ ಸದಸ್ಯರು 15 ತಿಂಗಳ ಕಠಿಣ ತರಬೇತಿ ಪಡೆದಿದ್ದಾರೆ. ಎನ್ಎಸ್ಜಿ ಕಮಾಂಡೋಗಳು ನೀಡಿದ ತರಬೇತಿಯಲ್ಲಿ, ಆರಂಭಿಕ ಹಂತದ ಭದ್ರತೆಯಿಂದ ಹಿಡಿದು ವಿಶೇಷ ಆಪರೇಷನ್ ಮಾಡುವ ಎಲ್ಲ ರೀತಿಯ ತರಬೇತಿಗಳನ್ನು ಈ ಮಹಿಳಾ ತಂಡ ಹೊಂದಿದೆ.

ಕ್ರಾವ್ ಮಗಾದಲ್ಲಿ ಪರಿಣಿತಿ
ಇಸ್ರೇಲಿಯಾ ಕ್ರಾವ್ ಮಗಾ ಎಂಬ ಸಮರ ಕಲೆಯಲ್ಲಿ ಈ ತಂಡ ಪರಿಣಿತಿ ಪಡೆದಿದೆ. ಕ್ರಾವ್ ಮಗಾ ಅತ್ಯಂತ ಅಪಾಯಕಾರಿ ಹೊಡೆದಾಟದ ಕಲೆ ಎಂದೇ ಖ್ಯಾತಿ ಗಳಿಸಿದೆ. ಇದೊಂದು ನಿರಾಯುಧ ಯುದ್ಧ ಶೈಲಿ. ಆಯುಧ ಇಲ್ಲದೆ ಎದುರಾಳಿಯನ್ನು ನೆಲಕಚ್ಚಿಸುವ ಅತ್ಯಂತ ಅಪಾಯಕಾರಿ ಯುದ್ಧಶೈಲಿ ಇದಾಗಿದೆ.

ಬಳಸುತ್ತಿರುವ ಗನ್ಗಳು
ಈ ಸ್ಟಾಟ್ ತಂಡದ ಮಹಿಳೆಯರು ಭಾರತದ ಎಲ್ಲ ರೀತಿಯ ಶಸ್ತ್ರಾಸ್ತ್ರಗಳನ್ನು ಬಳಸುವುದರ ಬಗ್ಗೆ ತರಬೇತಿ ಪಡೆದಿದ್ದಾರೆ. ಆದರೆ ಸ್ವಾತಂತ್ರ್ಯದಿನೋತ್ಸವದ ದಿನ ಇವರಿಗೆ ಎಂಪಿ5 ಸಬ್ ಮಷಿನ್ ಗನ್, ಜಿಲಾಕ್ 21 ಪಿಸ್ತೂಲುಗಳನ್ನು ನೀಡಿ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ.

ಯಾವ ಸನ್ನಿವೇಶಗಳಿಗೆ ಸಿದ್ಧ
ಈ ಸ್ವಾಟ್ ತಂಡವು, ತೆರೆ-ಮರೆ ಯುದ್ಧ, ವಿಐಪಿ ಭದ್ರತೆ, ನೇರ ಯುದ್ಧ, ನಗರ ಪ್ರದೇಶದಲ್ಲಿ ನಡೆಸುವ ದಾಳಿಗಳನ್ನು ಹತ್ತಿಕ್ಕುವಲ್ಲಿ ಪರಿಣಿತಿ ಪಡೆದಿದೆ ಎಂದು ದೆಹಲಿ ಆಯುಕ್ತ ಹೇಳಿದ್ದಾರೆ. ಇಷ್ಟೆ ಅಲ್ಲದೆ, ವಿಶೇಷ ತನಿಖೆ, ತಂತ್ರಜ್ಞಾನ ಮಾಹಿತಿ, ಶಸ್ತ್ರಾಸ್ತ್ರ ಮಾಹಿತಿಯೂ ಈ ತಂಡದ ಸದಸ್ಯರಿಗೆ ಇದೆ.

ಯಾವ ರಾಜ್ಯದ ಎಷ್ಟು ಮಹಿಳೆಯರು
36 ಮಹಿಳೆಯರ ಈ ತಂಡದಲ್ಲಿ 13 ಮಹಿಳೆಯರು ಅಸ್ಸಾಂ ರಾಜ್ಯದವರೇ ಆಗಿರುವುದು ವಿಶೇಷ ಇನ್ನುಳಿದ ಮಹಿಳೆಯರು ಅರುಣಾಚಲಪ್ರದೇಶ, ಸಿಕ್ಕಿಂ ಮತ್ತು ಮಣಿಪುರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಎಲ್ಲಾ ಸದಸ್ಯರು ಈಶಾನ್ಯದವರೇ ಆಗಿರುವುದು ವಿಶೇಷ.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು












Click it and Unblock the Notifications