ಮೈಸೂರು : ನಂಜನಗೂಡಿನಲ್ಲಿ ಹುಲಿ ದಾಳಿಗೆ ರೈತ ಬಲಿ
ಮೈಸೂರು, ಅಕ್ಟೋಬರ್ 14 : ಹುಲಿ ದಾಳಿಗೆ ದನ ಮೇಯಿಸುಯತ್ತಿದ್ದ ರೈತನೊಬ್ಬ ಬಲಿಯಾದ ಘಟನೆ ನಂಜನಗೂಡಿನಲ್ಲಿ ಮಂಗಳವಾರ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ರೈತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗಿದೆ.
ನಂಜನಗೂಡು
ತಾಲೂಕಿನ
ಹೆಡಿಯಾಲ
ಸಮೀಪದ
ಹಾದನೂರ
ಒಡೆಯನಪುರ
ಗ್ರಾಮದ
ಸಮೀಪ
ಈ
ಘಟನೆ
ನಡೆದಿದೆ.
ಮೃತ
ರೈತನನ್ನು
ನಾಗರಾಜು
(38)
ಎಂದು
ಗುರುತಿಸಲಾಗಿದೆ.
ರೈತ
ನಾಗರಾಜು
ಅವರು
ಶಿವಣ್ಣ
ಮತ್ತು
ವೆಂಕಟೇಶ
ಎಂಬುವರೊಂದಿಗೆ
ದನ
ಮೇಯಿಸುತ್ತಿದ್ದ
ಸಂದರ್ಭದಲ್ಲಿ
ಹುಲಿ
ದಾಳಿ
ಮಾಡಿದೆ.
[ಬೆಳಗಾವಿಯ
ನರಭಕ್ಷಕ
ಹುಲಿ
ಗುಂಡೇಟಿಗೆ
ಬಲಿ]
ನಾಗರಾಜು ಅವರ ಜೊತೆಗಿದ್ದ ಶಿವಣ್ಣ ಮತ್ತು ವೆಂಕಟೇಶ ಅವರು ಮರದ ಅಡಿಯಲ್ಲಿ ಕುಳಿತಿದ್ದರು. ಒಂಟಿಯಾಗಿ ಕುಳಿತಿದ್ದ ನಾಗರಾಜುವಿನ ಮೇಲೆ ಪೊದೆಯಲ್ಲಿ ಅಡಗಿದ್ದ ಹುಲಿ ದಾಳಿ ನಡೆಸಿದೆ. ಇದನ್ನು ನೋಡಿದ ವೆಂಕಟೇಶ ಮತ್ತು ಶಿವಣ್ಣ ಅವರು ಕಿರುಚಿ ಹುಲಿಯತ್ತ ಕಲ್ಲು ಎಸೆದಿದ್ದಾರೆ. [ದೇಶದ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1]
ಆದರೆ, ಇಬ್ಬರನ್ನು ನೋಡಿದ ಹುಲಿ ನಾಗರಾಜು ಅವರನ್ನು ಎಳೆದುಕೊಂಡು ಹೋಗಿದೆ. ಜೋರಾಗಿ ಕೂಗಿ ಸದ್ದು ಮಾಡಿದ ಇಬ್ಬರು ಹುಲಿ ಬಾಯಿಯಿಂದ ನಾಗರಾಜು ಅವರ ದೇಹವನ್ನು ಬಿಡಿಸುವಲ್ಲಿ ಯಶಸ್ವಿಯಾದರು. ಅಷ್ಟರಲ್ಲಿ ನಾಗರಾಜು ಅವರು ಮೃತಪಟ್ಟಿದ್ದರು. [ಕುದುರೆಮುಖವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿಲ್ಲ]
ನಾಗರಾಜು ಅವರು ಮೃತಪಟ್ಟು 4 ತಾಸು ಕಳೆದರೂ ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿರಲಿಲ್ಲ. ಇದರಿಂದಾಗಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಂಡಿಪುರ ಅರಣ್ಯ ವಲಯದ ಸಿಸಿಫ್ ಡಿ.ಬಿ.ಮಲ್ಲೇಶ್ ಮತ್ತು ಸಿಬ್ಬಂದಿಗಳು ತಡವಾಗಿ ಆಗಮಿಸಿದರು.
ಅರಣ್ಯ
ಇಲಾಖೆಯವರು
ಸ್ಥಳದಲ್ಲಿಯೇ
2
ಲಕ್ಷ
ರೂ.ಗಳ
ಪರಿಹಾರದ
ಚೆಕ್
ನೀಡಲು
ಮುಂದಾದಾಗ
ಗ್ರಾಮಸ್ಥರು
ವಿರೋಧ
ವ್ಯಕ್ತಪಡಿಸಿದರು.
10
ಲಕ್ಷ
ಪರಿಹಾರ
ನೀಡಬೇಕು
ಮತ್ತು
ನಾಗರಾಜು
ಅವರ
ಮಕ್ಕಳಾದ
ಅಶ್ವಿನಿ
ಮತ್ತು
ಹರ್ಶನ್
ಅವರಿಗೆ
ಸರ್ಕಾರಿ
ಉದ್ಯೋಗ
ನೀಡಬೇಕು
ಎಂದು
ಒತ್ತಾಯಿಸಿದರು.
ಸಿಸಿಎಫ್ ಅವರು 5 ಲಕ್ಷ ರೂ.ಗಳ ಪರಿಹಾರ ನೀಡಿದರು ಮತ್ತು ಪ್ರಥಮ ಪಿಯುಸಿ ಓದುತ್ತಿರುವ ಮೃತ ನಾಗರಾಜುವಿನ ಮಗಳಾದ ಅಶ್ವಿನಿಗೆ ಉದ್ಯೋಗ ನೀಡುವ ಭರವಸೆ ನೀಡಿದರು. ಇದರಿಂದ ಗ್ರಾಮಸ್ಥರ ಆಕ್ರೋಶ ಸ್ವಲ್ಪ ಕಡಿಮೆಯಾಯಿತು.