ಮೈಸೂರು ಅರಮನೆಯ ಗೈಡ್ ಗಳು ಅತಂತ್ರ ಸ್ಥಿತಿಯಲ್ಲಿರುವುದಕ್ಕೆ ಕಾರಣ ಇದೇ!
Recommended Video

ಮೈಸೂರು, ಸೆಪ್ಟೆಂಬರ್. 26: ನಾವು ಮೈಸೂರು ಅರಮನೆಗೆ ಭೇಟಿ ನೀಡಿದಾಗ ಅರಮನೆಯ ಸಂಪೂರ್ಣ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಏಕೈಕ ವ್ಯಕ್ತಿಯೆಂದರೆ ಗೈಡ್. ಅವರು ಅಷ್ಟಾಗಿ ವಿದ್ಯಾವಂತರಲ್ಲದಿದ್ದರೂ ಅರಳು ಹುರಿದ ಹಾಗೆ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ ಎಲ್ಲಾ ಭಾಷೆಗಳನ್ನು ಮಾತನಾಡುತ್ತಾರೆ.
ಆದರೆ ಇಂದು ಅವರ ಸ್ಥಿತಿ ಶೋಚನೀಯವಾಗಿದೆ. ಹೌದು, ಅರಮನೆಯ ಸೌಂದರ್ಯವನ್ನು ಸವಿಯಲು ವರ್ಷದಿಂದ ವರ್ಷಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತಿದೆ. ಆದರೆ ಅರಮನೆಯ ಗೈಡ್(ಮಾರ್ಗದರ್ಶಕ)ಗಳ ಸ್ಥಿತಿ ಮಾತ್ರ ಆಶಾದಾಯಕವಾಗಿಲ್ಲ.
ಭಾರತ ದೇಶದಲ್ಲಿ ಆಗ್ರದ ತಾಜ್ ಮಹಲ್ ಹೊರತುಪಡಿಸಿದರೆ, ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಿ ತಾಣವಾಗಿ ಮೈಸೂರು ಅರಮನೆ ಗುರುತಿಸಿಕೊಂಡಿದೆ. ಆದರೆ, ಅರಮನೆಯ ಗೈಡ್ ಗಳ ಸಹಾಯವನ್ನು ಯಾವೊಬ್ಬ ಪ್ರವಾಸಿಗರೂ ಕೇಳದಿರುವುದರಿಂದ ಗೈಡ್ ಗಳು ತಮ್ಮ ಜೀವನವನ್ನು ನಡೆಸಲು ಪರದಾಡುವಂತಾಗಿದೆ. ಹೀಗಾಗಲು ಕಾರಣವೇನು? ಮುಂದೆ ಓದಿ...

ಎಲ್ಲಾ ಭಾಷೆ ತಿಳಿದಂತವರು
ಅರಮನೆಗೆ ಬರುವ ಪ್ರವಾಸಿಗರಿಗೆ ಮಾಹಿತಿ ನೀಡಲೆಂದೇ 17 ಜನ ಗೈಡ್ ಗಳು ಇದ್ದಾರೆ. ಇವರಿಗೆ ಕನ್ನಡ, ಇಂಗ್ಲಿಷ್ , ಹಿಂದಿ, ತಮಿಳು, ತೆಲುಗು, ಮರಾಠಿ, ಉರ್ದು ಸೇರಿದಂತೆ ಹಲವು ಭಾಷೆಗಳು ತಿಳಿದಿವೆ.

ಅರಮನೆಗಳ ಪರಿಚಯ
ಅರಮನೆ ಹಾಗೂ ಮಹಾರಾಜರ ಕುರಿತು ಖಚಿತ ಮಾಹಿತಿಯೊಂದಿಗೆ ಪ್ರವಾಸಿಗರಿಗೆ, ಅದರಲ್ಲೂ ವಿದೇಶಿ ಪ್ರವಾಸಿಗರಿಗೆ ನಮ್ಮ ಕಲೆ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡಿ, ವಿದೇಶಗಳಿಗೂ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತಿದ್ದ ಇವರ ಜೀವನ ಇಂದು ದುಸ್ತರವಾಗಿದೆ.

ಗೈಡ್ ಗಳ ಅಳಲಿಗೆ ಕಾರಣ
ಗೈಡ್ ಗಳ ಈ ಪರಿಸ್ಥಿತಿಗೆ ಮುಖ್ಯ ಕಾರಣ ಕಳೆದ ಒಂದು ವರ್ಷದಿಂದ ಈಚೆಗೆ ಅರಮನೆ ಮಂಡಳಿ ಪ್ರಾರಂಭಿಸಿರುವ ಅರಮನೆಯ ಬಗ್ಗೆ ಮಾಹಿತಿ ನೀಡುವ ಉಚಿತ ಆಡಿಯೋ ಕಿಟ್.
ಹೌದು. ಈ ಆಡಿಯೋ ಕಿಟ್ ನಿಂದ ಪ್ರವಾಸಿಗರಿಗೆ ಉಚಿತವಾಗಿ ಅರಮನೆಯ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಆದ್ದರಿಂದ ಪ್ರವಾಸಿಗರು ಅರಮನೆಯ ಬಗ್ಗೆ ತಿಳಿಯಲು ಗೈಡ್ ಗಳ ಮೇಲೆ ಅವಲಂಬಿತರಾಗುವುದಿಲ್ಲ ಎಂಬುದು ಗೈಡ್ ಗಳ ಅಳಲು.

ಜೀವನೋಪಾಯಕ್ಕೆ ಸಹಕರಿಸಿ
ಅರಮನೆಯ ಮಾಹಿತಿಯನ್ನು ನೀಡುವುದರಿಂದ ನಮಗೆ ನಾಲ್ಕು ಕಾಸಾದರೂ ಸಿಗುತ್ತಿತ್ತು. ಅದಕ್ಕೂ ಈಗ ಭಂಗ ತರುವಂತಿದೆ ಆಡಿಯೋ ಕಿಟ್ ಎಂದು ನೋವಿನಿಂದಲೇ ನುಡಿಯುತ್ತಾರೆ. ಇನ್ನಾದರೂ ಅರಮನೆ ಆಡಳಿತ ಮಂಡಳಿ ಇತ್ತ ಗಮನಹರಿಸಿ ಗೈಡ್ ಗಳ ಜೀವನೋಪಾಯಕ್ಕೆ ಸಹಕರಿಸಬೇಕಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications