ಮೈಸೂರು ದಸರಾ ಉತ್ಸವವನ್ನು ಮೊಬೈಲ್ನಿಂದಲೇ ಲೈವ್ ಆಗಿ ನೋಡಿ
ಮೈಸೂರು, ಅಕ್ಟೋಬರ್ ೦2 : ಜಗತ್ತಿನ ಎಲ್ಲೇ ಕುಳಿತಿದ್ದರು ಈ ಬಾರಿಯ ದಸರಾ ಸಂಭ್ರಮವನ್ನು ಲೈವ್ ಆಗಿ ಮೊಬೈಲ್ನಿಂದಲೇ ಕಣ್ತುಂಬಿಕೊಳ್ಳುವ ಅವಕಾಶವನ್ನು ಮೈಸೂರು ಜಿಲ್ಲಾಡಳಿತ ಮಾಡಿಕೊಟ್ಟಿದೆ.
ಈಗಾಗಲೇ ಮೈಸೂರು ದಸರಾ ವೆಬ್ಸೈಟ್ಗೆ ಚಾಲನೆ ನೀಡಲಾಗಿದ್ದು, ದಸರಾ ಉತ್ಸವವನ್ನು ಫೇಸ್ಬುಕ್ ಲೈವ್ ಸಹ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದೆ. ಈಗಾಗಲೇ ಕೆಲವು ಪ್ರಮುಖ ಆಚರಣೆಗಳ, ತಾಲೀಮುಗಳು ಲೈವ್ ವಿಡಿಯೋವನ್ನು ಪ್ರಸಾರ ಸಹ ಮಾಡಲಾಗಿದೆ.
ಮೈಸೂರು ದಸರಾ 2018 ಎಂಬ ಫೇಸ್ಬುಕ್ ಪೇಜ್ ತೆರೆಯಲಾಗಿದ್ದು, ಈ ಬಾರಿಯ ಮೈಸೂರು ದಸೆರಯ ಮಾಹಿತಿಯನ್ನು, ಚಿತ್ರಗಳನ್ನು ಇದರಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದೇ ಫೇಸ್ಬುಕ್ ಪುಟದಲ್ಲಿ ದಸರಾ ಉತ್ಸವದ ಲೈವ್ ವಿಡಿಯೋ ಸಹ ಪ್ರಸಾರವಾಗಲಿದೆ.
ಮೈಸೂರು ದಸರಾ ವೆಬ್ಸೈಟ್ಗೆ ಚಾಲನೆ ದೊರೆತ ದಿನದಿಂದ ಇಲ್ಲಿಯವರೆಗೂ 40 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಈ ಪೈಕಿ ಶೇ.50ಕ್ಕೂ ಹೆಚ್ಚು ಮಂದಿ ತಮ್ಮ ಮೊಬೈಲ್ ಮೂಲಕವೇ, ಅಂತರ್ಜಾಲಕ್ಕೆ ಭೇಟಿ ನೀಡಿರುವುದು ವಿಶೇಷ !

ರಾಜ್ಯದ ಜನರಷ್ಟೇ ಅಲ್ಲದೇ ವಿದೇಶಿಗರೂ ಸಹ ಹೆಚ್ಚಾಗಿ ಈ ವೆಬ್ಸೈಟ್ನಿಂದ ದಸರಾ ಬಗ್ಗೆ ಮಾಹಿತಿ ಪಡೆದಿರುವುದು ಗಮನಾರ್ಹ. ಅ.10 ರಿಂದ 19ರವರೆಗೆ ಮೈಸೂರು ದಸರಾ ನಡೆಯಲಿದ್ದು, ಉತ್ಸವಕ್ಕೆ 8 ದಿನ ಬಾಕಿ ಉಳಿದಿದೆ. ದಸರಾ ಆಚರಣೆಗೆ ಹೆಚ್ಚು ಪ್ರಚಾರ ನೀಡುವ ಸಲುವಾಗಿ ಜಿಲ್ಲಾಡಳಿತ ಮೈಸೂರು ದಸರಾ ಹೆಸರಿನಲ್ಲಿ ಅಧಿಕೃತವಾಗಿ ವೆಬ್ಸೈಟ್ ಆರಂಭಿಸಿದೆ. ಈಗಾಗಲೇ ಈ ಮಾಹಿತಿ ತಾಣದಲ್ಲಿ ದಸರಾ ಚಟುವಟಿಕೆಗಳು, ಮೈಸೂರಿನ ಇತಿಹಾಸ, ಹಿಂದಿನ ದಸರಾ ವೈಭವವನ್ನು ಸಾರುವ ಛಾಯಾಚಿತ್ರಗಳು ರಾರಾಜಿಸುತ್ತಿವೆ.
ಗಜಪಡೆಯು ಕಾಡಿನಿಂದ ನಾಡಿಗೆ ಗಜಪಯಣದ ಮೂಲಕ ಆಗಮಿಸಿದ ದಿನವೇ ಈ ವೆಬ್ಸೈಟ್ ಆರಂಭವಾಗಿದೆ. ಹೀಗೆ ವೆಬ್ಸೈಟ್ ಸಂಪರ್ಕಿಸಿದವರು ಹೆಚ್ಚಾಗಿ ಈ ಬಾರಿಯ ವಿಶೇಷಗಳೇನು ಎಂಬ ವಿಷಯದ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಈ ಪೈಕಿ ಶೇ. 50ರಷ್ಟು ಮೊಬೈಲ್, ಶೇ. 10ರಷ್ಟು ಟ್ಯಾಬ್ಲೆಟ್, ಮಿಕ್ಕಿದ್ದು ಡೆಸ್ಕ್ಟಾಪ್ ಬಳಕೆದಾರರಾಗಿದ್ದಾರೆ.
ಸಾಮಾಜಿಕ ತಾಣ ಫೇಸ್ಬುಕ್ನಲ್ಲಿಯೂ ಪ್ರತ್ಯೇಕವಾಗಿ 'ಮೈಸೂರು ದಸರಾ' ಹೆಸರಿನಲ್ಲಿ ಪೇಜ್ ತೆರೆಯಲಾಗಿದೆ. 25, 000 ಮಂದಿ ಈ ಪೇಜ್ ಅನ್ನು ಫಾಲೊ ಮಾಡುತ್ತಿದ್ದಾರೆ. ಇಲ್ಲಿಯೂ ದಸರಾ ಮಹೋತ್ಸವದ ಕುರಿತ ಮಾಹಿತಿಯನ್ನು ನಿತ್ಯವೂ ಅಪ್ಡೇಟ್ ಮಾಡಲಾಗುತ್ತಿದೆ. ಹಾಗಾಗಿ ಕ್ಷಣ ಕ್ಷಣಕ್ಕೂ ಫೇಸ್ಬುಕ್ನಲ್ಲಿ ಈ ಪೇಜ್ ವೀಕ್ಷಿಸುವವರ ಸಂಖ್ಯೆ ಸಾಗರೋಪಾದಿಯಲ್ಲಿ ಬೆಳೆಯುತ್ತಿದೆ. ಅಲ್ಲದೇ ಈ ಬಾರಿ ದಸರೆಯ ಪ್ರತಿಯೊಂದು ಮಾಹಿತಿ, ಗಜಪಡೆಯ ದಿನನಿತ್ಯದ ವಾಕಿಂಗ್ ಎಲ್ಲವನ್ನೂ ಲೈವ್ ನಲ್ಲಿ ನೀಡಲಾಗುತ್ತಿದೆ.
.
ವಿಶ್ವ ಮಾನ್ಯತೆಯ ಮೈಸೂರು ದಸರಾ ಆಚರಣೆಗೆ ಹೆಚ್ಚು ಪ್ರಚಾರ ಒದಗಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಮೈಸೂರು ದಸರಾ ವೆಬ್ಸೈಟ್ ತೆರೆಯಲಾಗಿದ್ದು, ಈಗಾಗಲೆ ಸಾರ್ವಜನಿಕರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications