KRS Dam Water Level: ಕೆಆರ್ಎಸ್ ಆಣೆಕಟ್ಟು ಭರ್ತಿ, ಇಂದಿನ ನೀರಿನ ಮಟ್ಟ ಒಳಹರಿವು ಮಾಹಿತಿ
ಮೈಸೂರು, ಜೂನ್ 19: ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕು ಪಡೆದಿದ್ದು, ಮುಂದಿನ ಒಂದು ವಾರ ಅಬ್ಬರಿಸುವ ಮುನ್ಸೂಚನೆ ನೀಡಿದೆ. ಈಗಾಗಲೇ ಬಂದ ದಾಖಲಾದ ಮಳೆಯ ಕಾರಣಕ್ಕೆ ಕೃಷ್ಣ ರಾಜ ಸಾಗರ (KRS) ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ನಿತ್ಯವು ಏರಿಕೆ ಆಗುತ್ತಲೇ ಇದೆ.
ಕಾವೇರಿ ಮತ್ತು ಕೆಆರ್ಎಸ್ ಜಲಾನಯನ ಪ್ರದೇಶ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಸುರಿದ ಭಾರೀ ಮಳೆಗೆ ನದಿಗಳು ಮೈದುಂಬಿ ಹರಿಯುತ್ತಿವೆ. ಪರಿಣಾಮಾ ಕೆಆರ್ಎಸ್ ಸೇರಿದಂತೆ ವಿವಿಧ ಆಣೆಕಟ್ಟುಗಳು ಭರ್ತಿಯಾಗಿವೆ. ಒಳಹರಿವಿನ ಜೊತೆಗೆ ಹೊರಹರಿವಿನ ಪ್ರಮಾಣ, ನೀರಿನ ಸಂಗ್ರಹದ ಮಟ್ಟ ಏರಿಕೆ ಆಗಿದೆ.

ಇಂದು ಜೂನ್ 19ರಂದು ಬುಧವಾರ ಕೃಷ್ಣ ರಾಜ ಸಾಗರದಲ್ಲಿ ನೀರನ ಮಟ್ಟ ನೋಡುವುದಾದರೆ, ಒಳಹರಿವು 1209 ಕ್ಯೂಸೆಕ್ ಹೆಚ್ಚಾಗಿದೆ. ಒಟ್ಟು ಸಾಮರ್ಥ್ಯದಲ್ಲಿ 49.452 ಟಿಎಂಸಿ ಇದೆ. ಇಂದಿನ ನೀರಿನ ಸಂಗ್ರಹಣೆ ಶೇಕಡಾ 29.10ರಷ್ಟಿದೆ.
ಇನ್ನೂ ಕೆಆರ್ಎಸ್ ಜಲಾಶಯದಲ್ಲಿ ಹೊರಹರಿವು ಇಂದು ತುಸು ಏರಿಕೆ ಆಗಿದೆ. ಒಟ್ಟು 466 ಕ್ಯೂಸೆಕ್ ನೀರು ಹೊರ ಬೀಡಲಾಗಿದೆ. ಈ ಪೈಕಿ ಕಾಲುವೆಗೆ 50 ಕ್ಯೂಸೆಕ್, ಕಾವೇರಿ ನದಿಗೆ 416 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.
ವಿವಿಧ ಆಣೆಕಟ್ಟುಗಳ ಮಾಹಿತಿ
ಇದೇ ರೀತಿ ಕಬಿನಿ, ಆಲಮಟ್ಟಿ, ಹಾರಂಗಿ, ಭದ್ರಾ ಆಣೆಕಟ್ಟು ಸೇರಿದಂತೆ ಇನ್ನಿತರ ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದೆ. ಈ ಪೈಕಿ ಹೇಮಾವತಿ 622 ಕ್ಯೂಸೆಕ್ ಒಳಹರಿವು, ಕಬಿನಿ 594 ಕ್ಯೂಸೆಕ್ ಒಳಹರಿವು, ಹಾರಂಗಿ 319 ಕ್ಯೂಸೆಕ್ ಒಳಹರಿವು ಏರಿಕೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.
ಮುಂದಿನ ಐದು ಭಾರೀ ಮಳೆ ಎಚ್ಚರಿಕೆ
ಮುಂದಿನ ಐದು ದಿನ ರಾಜ್ಯದಲ್ಲಿ ಅತ್ಯಧಿಕ ಮಳೆ ಆಗಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ ಹಗುರದಿಂದ ಸಾಧಾರಣ, ಇನ್ನೂ ಹಲವಡೆ ಭಾರೀ ಮಳೆ ಆಗಲಿದೆ. ಜೂನ್ 24ರಂದು ಎಂಟು ಜಿಲ್ಲೆಗಳಿಗೆ ಅತ್ಯಧಿಕ ಮಳೆ ಆಗುವ ಕಾರಣ 'ರೆಡ್ ಅಲರ್ಟ್' ಘೋಷಿಸಲಾಗಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications