ಹುತಾತ್ಮ ಮಹೇಶ್ಗೆ ಅಂತಿಮ ನಮನ ಸಲ್ಲಿಸಿದ ಸಿಎಂ
ಮೈಸೂರು, ಫೆಬ್ರವರಿ 16 : ಸಿಯಾಚಿನ್ನಲ್ಲಿ ಹುತಾತ್ಮರಾದ ಎಚ್.ಡಿ.ಕೋಟೆಯ ಪಿ.ಎನ್.ಮಹೇಶ್ ಅವರ ಪಾರ್ಥಿವ ಶರೀರ ಮೈಸೂರಿಗೆ ಆಗಮಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಸೋಮವಾರ ರಾತ್ರಿ ಮೈಸೂರಿಗೆ ಆಗಮಿಸಿದ ಪಿ.ಎನ್. ಮಹೇಶ್ ಅವರ ಪಾರ್ಥಿವ ಶರೀರವನ್ನು ಬರಮಾಡಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ನಮನ ಸಲ್ಲಿಸಿದರು. ಇಂದು ಮಧ್ಯಾಹ್ನ ಎಚ್.ಡಿ.ಕೋಟೆಯಲ್ಲಿ ಮಹೇಶ್ ಅಂತ್ಯಕ್ರಿಯೆ ನಡೆಯಲಿದೆ.

ಸಿಯಾಚಿನ್ನಲ್ಲಿ ಹಿಮಪಾತಕ್ಕೆ ಸಿಲುಕಿ 10 ಯೋಧರು ಹುತ್ಮಾತ್ಮರಾಗಿದ್ದರು. ಇವರಲ್ಲಿ ರಾಜ್ಯದ ಹನುಮಂತಪ್ಪ ಕೊಪ್ಪದ, ಎಚ್.ಡಿ.ಕೋಟೆಯ ಪಿ.ಎನ್. ಮಹೇಶ್ ಮತ್ತು ಹಾಸನದ ಟಿ.ಟಿ.ನಾಗೇಶ್ ಅವರು ಮೃತಪಟ್ಟಿದ್ದರು. ಮಹೇಶ್ ಮತ್ತು ನಾಗೇಶ್ ಅವರ ಪಾರ್ಥಿವ ಶರೀರ ಸೋಮವಾರ ರಾಜ್ಯಕ್ಕೆ ಆಗಮಿಸಿದೆ.
ಸಿಯಾಚಿನ್ ನಲ್ಲಿ ಹುತಾತ್ಮರಾದ ವೀರಯೋಧ ಮಹೇಶ್ ಅವರ ಕುಟುಂಬದವರಿಗೆ ಮುಖ್ಯಮಂತ್ರಿಗಳು ಸಾಂತ್ವನ ಹೇಳಿದರು.
Posted by Karnataka Varthe onMonday, February 15, 2016












Click it and Unblock the Notifications