ನೀರವ್ ಮೋದಿಗೂ ನಮ್ಮ ಮೈಸೂರಿಗೂ ಏನಿದು ಲಿಂಕು..!?
ಮೈಸೂರು, ಫೆಬ್ರವರಿ 24 : ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಸುಮಾರು 11,000 ಕೋಟಿ ರೂ. ಗಳ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿಗೂ, ನಮ್ಮ ಮೈಸೂರಿಗೂ ಸಂಬಂಧವಿದೆಯಾ? ಹಾಗೊಂದು ಸುದ್ದಿ ಈಗ ಬೆಳಕಿಗೆ ಬಂದಿದೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ರೂವಾರಿಯಾದ ನೀರವ್ ಮೋದಿ ಬಿಸಿನೆಸ್ ಪಾರ್ಟನರ್ ಆದ ಗೀತಾಂಜಲಿ ಜ್ಯುವೆಲ್ಸ್ ವ್ಯವಸ್ಥಾಪಕ ನಿರ್ದೇಶಕ ಮೆಹುಲ್ ಚೊಕ್ಸಿ ಮೈಸೂರಿನ ಜ್ಯುವೆಲರ್ ಒಬ್ಬರಿಗೆ ವಂಚನೆ ಮಾಡಿರುವ ಬಗ್ಗೆ ಮೈಸೂರು ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ!
ಗೀತಾಂಜಲಿ ಜ್ಯುವೆಲ್ಸ್ ಹಲವರು ಪ್ರಾಂಚೈಸಿಗಳ ಮಾಲೀಕರ ಪೈಕಿ ಮೈಸೂರಿನ ಜುವೆಲರ್ ಅಮಿತ್ ಕುಮಾರ್ ಸಹ ಒಬ್ಬರಾಗಿದ್ದರು. ಗೀತಾಂಜಲಿ ಬ್ರ್ಯಾಂಡ್ ವ್ಯಾಪಾರಕ್ಕೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ದೇಶದಾದ್ಯಂತ ಹಲವು ಉದ್ದಿಮೆದಾರರು ತಲಾ 5 ರಿಂದ 25 ಕೋಟಿ ರೂ. ಗಳ ಹಣವನ್ನುಹೂಡಿದ್ದರು.

ಒಡಂಬಡಿಕೆ ಕರಾರು ಪ್ರಕಾರ ಪ್ರತಿ ತಿಂಗಳು ತಮ್ಮ ಠೇವಣಿ ಮೇಲಿನ ಪಾವತಿ ಆಧರಿಸಿ ಚಿನ್ನ ಮತ್ತು ವಜ್ರವನ್ನು ಪೂರೈಸಬೇಕು. ಮೂಲಗಳ ಪ್ರಕಾರ ಗೀತಾಂಜಲಿ ಜುವೆಲ್ಸ್ ಪ್ರತಿನಿಧಿಗಳು ಜ್ಯುವೆಲರಿ ವಸ್ತುಪ್ರದರ್ಶನಗಳನ್ನು ನಡೆಸಿ ಗ್ರಾಹಕರು ಮತ್ತು ಹೂಡಿಕೆದಾರರನ್ನು ಆಕರ್ಷಿಸುತ್ತಿರುವುದಾಗಿ ತಿಳಿದು ಬಂದಿದೆ.
ಕಲಾಶ್ ಡಿ ಗೋಲ್ಡ್ ಜುವೆಲರ್ಸ್ ನಿರ್ದೇಶಕರಲ್ಲೊಬ್ಬರಾದ ಅಮಿತ್ ಕುಮಾರ್ ಮಾಹಿತಿ ನೀಡಿ, ಗೀತಾಂಜಲಿ ಜ್ಯುವೆಲ್ಸ್ ಫ್ರಾಂಚೈಸಿ ತೆರೆಯಲು ಒಪ್ಪಂದ ಮಾಡಿಕೊಂಡಿದ್ದೆ. ಮೂರು ವರ್ಷಗಳಲ್ಲಿ ಆ ಗುತ್ತಿಗೆಗೆ ಐದು ಕೋಟಿ ರೂ, ಠೇವಣಿಯಾಗಿರಿಸಿ ಫ್ರಾಂಚೈಸಿ ಆರಂಭಿಸಲಾಗಿತ್ತು. ಒಡಂಬಡಿಕೆ ಪ್ರಕಾರದಂತೆ ಮೂರು ವರ್ಷದ ಅವಧಿ ಮುಗಿದ ಮೇಲೆ 4 ಕೋಟಿ ರೂ.ಗಳನ್ನು ನಮಗೆ ಕೊಡಲಾಗಿತ್ತು. ಉಳಿದ ಹಣಕ್ಕೆ ಗೀತಾಂಜಲಿ ಚೆಕ್ ನೀಡಲಾಗಿತ್ತು ಎಂದು ಅವರು ತಿಳಿಸಿದರು.
ನಾನು ಹಣ ಪಡೆಯಲು ಹೋದಾಗ ಐಸಿಐಸಿಐ ಬ್ಯಾಂಕ್ ಚೆಕ್ ಬೌನ್ಸ್ ಆಯಿತು. ದೂರವಾಣಿ ಮಾಡಿದರೆ ಕಂಪನಿಯಿಂದ ಸೂಕ್ತ ಉತ್ತರ ಸಿಗಲಿಲ್ಲವಾದ್ದರಿಂದ, ಅನಿವಾರ್ಯವಾಗಿ ನಾನು ಚೆಕ್ ಬೌನ್ಸ್ ಕೇಸ್ ಹಾಕಬೇಕಾಯಿತು ಎನ್ನುತ್ತಾರೆ ಅಮಿತ್ ಕುಮಾರ್. ಸದ್ಯ ಪ್ರಕರಣ ಈಗ ಮೈಸೂರಿನ ನಾಲ್ಕನೇ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿದ್ದು, 1 ಕೋಟಿ ರೂ ಚೆಕ್ ನೀಡಿದ್ದ ಚೊಕ್ಸಿ ಆರೋಪಿಯಾಗಿದ್ದಾರೆ. ಗೀತಾಂಜಲಿ ಜ್ಯುವೆಲ್ಸ್ ವ್ಯವಸ್ಥಾಪಕ ನಿರ್ದೇಶಕ ಮೆಹುಲ್ ಚೊಕ್ಸಿ ವಿರುದ್ಧ ಮೂಲತಃ ಮುಂಬೈನಲ್ಲಿ ಪ್ರಕರಣ ದಾಖಲಾಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಚೆಕ್ ಬೌನ್ಸ್ ಪ್ರಕರಣವಾದರೇ ಸ್ಥಳದಲ್ಲೇ ದೂರು ದಾಖಲಿಸಬೇಕಾಗಿರುವುದರಿಂದ, ಈ ಪ್ರಕರಣವನ್ನು ಮೈಸೂರಿಗೆ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications