ಮೈಸೂರು ಅರಸರಿಗೆ ಅಲಮೇಲಮ್ಮನ ಶಾಪ ವಿಮೋಚನೆ ಆಗಿದೆಯಾ, ಇಲ್ಲಿದೆ ಉತ್ತರ
ಮೈಸೂರು, ಜೂನ್ 16: ಮೈಸೂರಿನ ಅರಮನೆಯಲ್ಲೀಗ ಸಂಭ್ರಮವೋ ಸಂಭ್ರಮ. ಇದಕ್ಕೆ ಕಾರಣ ಸುಮಾರು ಆರು ದಶಕಗಳ ಬಳಿಕ ಯದುವಂಶದ ಕುಡಿಯೊಂದು ಮಹಾರಾಣಿ ತ್ರಿಷಿಕಾ ಒಡೆಯರ್ ಹೊಟ್ಟೆಯಲ್ಲಿ ಬೆಳೆಯುತ್ತಿದೆ.
ಕಳೆದ ವರ್ಷ ಇದೇ ವೇಳೆಯಲ್ಲಿ ಅರಮನೆಯಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸಮ್ಮುಖದಲ್ಲಿ ದತ್ತು ಪುತ್ರ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಹಾಗೂ ರಾಜಸ್ತಾನದ ರಾಜಮನೆತನದ ತ್ರಿಷಿಕಾಕುಮಾರಿ ಸಿಂಗ್ ವಿವಾಹ ಅರಮನೆಯಲ್ಲಿ ಅದ್ಧೂರಿಯಾಗಿ ನಡೆದಿತ್ತು.
ವಿವಾಹವಾದ ಒಂದು ವರ್ಷದಲ್ಲಿ ರಾಜಕುಮಾರಿ ತ್ರಿಷಿಕಾ ಒಡೆಯರ್ ಗರ್ಭ ಧರಿಸಿರುವ ಸುದ್ದಿ ಹರಿದಾಡುತ್ತಿದ್ದು, ಅರಮನೆಯ ರಾಜವಂಶಸ್ಥರಿಗೆ ಮಾತ್ರವಲ್ಲ, ಜನ ಸಾಮಾನ್ಯರು ಕೂಡ ಸಂತಸಪಡುತ್ತಿದ್ದಾರೆ.
ರಾಜಕುಮಾರಿ ತ್ರಿಷಿಕಾ ಒಡೆಯರ್ ಗರ್ಭವತಿಯಾಗಿರುವ ಬಗ್ಗೆ ಅರಮನೆ ಮೂಲಗಳು ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಅರಮನೆ ಜ್ಯೋತಿಷಿಗಳು ಸ್ಪಷ್ಟಪಡಿಸಿದ್ದಾರೆ. ತ್ರಿಷಿಕಾ ಇದೀಗ ಐದು ತಿಂಗಳ ಗರ್ಭವತಿಯಾಗಿದ್ದು, ದಸರಾ ನಂತರದ ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ.

ದತ್ತುಪುತ್ರರಿಗೆ ತಟ್ಟಲ್ಲ ಅಲಮೇಲಮ್ಮನ ಶಾಪ!
ರಾಜಕುಮಾರಿ ತ್ರಿಷಿಕಾ ಒಡೆಯರ್ ಗರ್ಭವತಿಯಾಗಿರುವ ಸುದ್ದಿ ಹೊರಬರುತ್ತಿದ್ದಂತೆಯೇ ಮೈಸೂರು ರಾಜವಂಶಸ್ಥರಿಗೆ ತಟ್ಟಿದ ಶಾಪ ವಿಮೋಚನೆಯಾಯಿತು ಎಂಬಂತಹ ಮಾತುಗಳು ಕೇಳಿ ಬರುತ್ತಿವೆ.
ಆದರೆ ಮೈಸೂರು ರಾಜವಂಶಸ್ಥರ ಇತಿಹಾಸದ ಪುಟಗಳನ್ನು ತಿರುವಿ ನೋಡಿದ್ದೇ ಆದರೆ ಅಲಮೇಲಮ್ಮನ ಶಾಪ ದತ್ತುಪುತ್ರರಿಗೆ ತಟ್ಟಿಲ್ಲ ಎಂಬುದು ತಿಳಿದು ಬರುತ್ತದೆ. ಆದರೆ ಅವರಿಗೆ ಹುಟ್ಟಿದ ಮಕ್ಕಳಿಗೆ ಮಾತ್ರ ಮಕ್ಕಳಾಗದೆ, ದತ್ತು ಪಡೆಯುತ್ತಾ ಸಾಗಿರುವುದು ರಾಜವಂಶಸ್ಥರ ಇತಿಹಾಸದುದ್ದಕ್ಕೂ ಕಾಣಲು ಸಿಗುತ್ತದೆ.

ಅಲಮೇಲಮ್ಮನ ಶಾಪದ್ ಬಗ್ಗೆ ಹರಿದಾಡುವ ಕಥೆ
ಇಷ್ಟಕ್ಕೂ ಅಲಮೇಲಮ್ಮನ ಶಾಪಕ್ಕೂ ಮೈಸೂರು ರಾಜರಿಗೆ ಮಕ್ಕಳಾಗದಿರುವುದಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಕಾಡಬಹುದು. ಇವತ್ತಿಗೂ ಮೈಸೂರು ಪ್ರಾಂತ್ಯದ ಜನರ ಬಾಯಲ್ಲಿ ಹರಿದಾಡುತ್ತಿರುವ ಕಥೆಗಳನ್ನು ಗಮನಿಸಿದರೆ ಮೈಸೂರು ಅರಸರಿಗೆ ಮಕ್ಕಳಾಗದಿರುವುದು, ಮಾಲಂಗಿ ಮಡುವಾಗಿರುವುದು, ತಲಕಾಡು ಮರಳಾಗಿರುವುದು ಎಲ್ಲದಕ್ಕೂ ನೇರಾನೇರ ಸಂಬಂಧ ಇರುವುದನ್ನು ನಾವು ಕಾಣಬಹುದಾಗಿದೆ.

ರಾಜಒಡೆಯರ್ ಕಾಲದಲ್ಲಿ ಶಾಪ!
1423ರಲ್ಲಿ ಮೈಸೂರಿನ ಯದುವಂಶದ ಉದಯವಾದರೂ ಕೆಲ ಶತಮಾನಗಳ ಬಳಿಕ ಅಂದರೆ ರಾಜ ಒಡೆಯರ್ ಕಾಲದಲ್ಲಿ ಮೈಸೂರು ಅರಸರಿಗೆ ಅಲಮೇಲಮ್ಮ ಶಾಪ ನೀಡಿದ್ದು, ಅದು ಮುಂದಿನ ಅರಸರ ಮೇಲೆ ಪರಿಣಾಮ ಬೀರಿತು ಎಂಬುದನ್ನು ಕಾಣಬಹುದು.

ಶ್ರೀರಂಗಪಟ್ಟಣದ ಮೇಲೆ ದಾಳಿ
ಪ್ರಚಲಿತದಲ್ಲಿರುವ ಮಾಹಿತಿಗಳ ಪ್ರಕಾರ ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣದಲ್ಲಿ ರಾಜಾಡಳಿತ ನಡೆಸುತ್ತಿದ್ದ ಶ್ರೀರಂಗರಾಯನಿಗೆ ಬೆನ್ನುಪಣಿ ಎಂಬ ರೋಗ ಬರುತ್ತದೆ. ಅದರ ನಿವಾರಣೆಗಾಗಿ ಆತ ಪತ್ನಿ ಅಲಮೇಲಮ್ಮನ ಜೊತೆ ತಲಕಾಡಿನ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಪೂಜೆಗಾಗಿ ತೆರಳುತ್ತಾನೆ. ಇದನ್ನು ಅರಿತ ಮೈಸೂರಿನ ರಾಜ ಒಡೆಯರು ಶ್ರೀರಂಗಪಟ್ಟಣವನ್ನು ಆಕ್ರಮಿಸಿಕೊಳ್ಳಲು ಇದೇ ಸೂಕ್ತ ಸಮಯ ಎಂದು ನಿರ್ಧರಿಸಿ ಶ್ರೀರಂಗಪಟ್ಟಣದ ಮೆಲೆ ದಂಡೆತ್ತಿ ಹೋಗಿ ವಶಪಡಿಸಿಕೊಳ್ಳುತ್ತಾರೆ.

ಶಾಪ ನೀಡಿ ದೇಹತ್ಯಾಗ ಮಾಡಿದ ಅಲಮೇಲಮ್ಮ
ಶ್ರೀರಂಗರಾಯ ತಲಕಾಡಿನಲ್ಲಿಯೇ ಸಾವನ್ನಪ್ಪುತ್ತಾನೆ. ಬಳಿಕ ಪತ್ನಿ ಅಲಮೇಲಮ್ಮ ತಲಕಾಡಿನ ಪಕ್ಕದಲ್ಲಿರುವ ಮಾಲಂಗಿ ಗ್ರಾಮದಲ್ಲಿ ನೆಲೆಸುತ್ತಾಳೆ. ಆದರೆ ಅಮೂಲ್ಯವಾದ ವಜ್ರದ ಮುತ್ತಿನ ಮೂಗುತಿ ಸೇರಿದಂತೆ ಬಹಳಷ್ಟು ಒಡವೆಗಳು ಅವಳ ಬಳಿ ಇದ್ದು, ಅವುಗಳನ್ನು ವಶಪಡಿಸಿಕೊಳ್ಳಲು ರಾಜಒಡೆಯರು ಭಟರನ್ನು ಕಳುಹಿಸುತ್ತಾರೆ. ಇದನ್ನು ಅರಿತ ಅಲಮೇಲಮ್ಮ ಕೋಪಗೊಂಡು ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ ಎಂದು ಶಾಪ ಹಾಕಿ ಒಡವೆಗಳೊಡನೆ ಕಾವೇರಿ ನದಿಗೆ ಹಾರಿ ಪ್ರಾಣ ಬಿಡುತ್ತಾಳೆ.

ಶಾಪಕ್ಕೆ ಪರಿಹಾರ ಏನು?
ಅಲಮೇಲಮ್ಮ ಶಾಪ ಹಾಕಿರುವುದು ರಾಜ ಒಡೆಯರ್ ಗೆ ತಿಳಿದ ಬಳಿಕ ಅರಮನೆ ಜ್ಯೋತಿಷಿಗಳನ್ನ್ ಕರೆಸಿ ಶಾಪಕ್ಕೆ ಏನಾದರೂ ಪರಿಹಾರ ಇದೆಯಾ ಎಂದು ಕೇಳುತ್ತಾರೆ. ಆಗ ಜ್ಯೋತಿಷಿಗಳು ನೀಡಿದ ಪರಿಹಾರದಂತೆ ಅರಮನೆ ಬಳಿ ಅಲಮೇಲಮ್ಮ ಮೂರ್ತಿ ಪ್ರತಿಷ್ಠಾಪಿಸಿ, ಪೂಜಾ ಕೈಂಕರ್ಯ ನೆರವೇರಿಸುವಂತೆ ಸಲಹೆ ನೀಡುತ್ತಾರೆ. ಅದರಂತೆ ಪೂಜಾ ಕಾರ್ಯಗಳು ನಡೆಯುತ್ತಾ ಬರುತ್ತಿವೆ.

ದತ್ತುರಾಜರಿಗೆ ಮಾತ್ರ ಸಂತಾನ ಭಾಗ್ಯ
ಅಲಮೇಲಮ್ಮನ ಶಾಪದ ಬಳಿಕ ತಲಕಾಡು ಮರಳುಮಯವಾಗಿ, ಮಾಲಂಗಿ ಈಗಲೂ ಮಡುವಾಗಿದೆ. ಈಗಲೂ ಕಾಣುತ್ತಿದೆ. ಇನ್ನು ಶಾಪದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ರಾಜರ ಇತಿಹಾಸವನ್ನು ನೋಡಿದರೆ ರಾಜರು ದತ್ತು ಪಡೆದ ಮಗನಿಗೆ ಮಕ್ಕಳಾಗಿವೆ. ಆದರೆ ಆತನಿಗೆ ಹುಟ್ಟುವ ಮಗನಿಗೆ ಮಕ್ಕಳಾಗದಿರುವುದನ್ನು ಕಾಣಬಹುದು.

ಶಾಪ ವಿಮೋಚನೆ ಎಂದು ಒಪ್ಪಲಾಗುವುದಿಲ್ಲ
ಉದಾಹರಣೆಗೆ ಜಯಚಾಮರಾಜೇಂದ್ರ ಒಡೆಯರ್ ಗೆ ಶ್ರೀಕಂಠದತ್ತ ಒಡೆಯರ್ ಜನಿಸಿದರಾದರೂ ಅವರಿಗೆ ಮಕ್ಕಳಾಗಲಿಲ್ಲ. ಈಗ ಅವರ ನಂತರ ಯದುವೀರ್ ಒಡೆಯರ್ ಅವರನ್ನು ದತ್ತು ಪಡೆದಿರುವುದರಿಂದ ಅವರಿಗೆ ಸಂತಾನ ಪ್ರಾಪ್ತಿಯಾಗಿದೆ.
ಮುಂದೆ ಅವರಿಗೆ ಪುತ್ರನಾದರೆ ಆತನಿಗೆ ಮಕ್ಕಳಾಗುವುದಿಲ್ಲ. ಆಗ ಆತ ದತ್ತು ಪಡೆಯಬೇಕಾಗುತ್ತದೆ. ಇದನ್ನು ಗಮನಿಸಿದರೆ ಯದುವೀರ್ ಒಡೆಯರ್ ಪತ್ನಿ ತ್ರಿಷಿಕಾ ಒಡೆಯರ್ ಗರ್ಭವತಿ ಆಗಿರುವುದರಿಂದ ಶಾಪ ವಿಮೋಚನೆ ಆಯಿತು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications