'ನನ್ನ ಮಕ್ಕಳು ಅಕ್ರಮ ಮರಳು ದಂಧೆಯಲ್ಲಿದ್ರೆ ನೇತು ಹಾಕುವೆ'
ಮೈಸೂರು, ಸೆ.14 : 'ನನ್ನ ಮಕ್ಕಳು ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿದ್ದರೆ ಅವರನ್ನು ನೇತು ಹಾಕುವೆ' ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಎಸ್.ಈಶ್ವರಪ್ಪ ಅವರ ಮಾತಿಗೆ ತಿರುಗೇಟು ಕೊಟ್ಟಿದ್ದಾರೆ.
ಸೋಮವಾರ
ಮೈಸೂರು
ವಿಮಾನ
ನಿಲ್ದಾಣದಲ್ಲಿ
ಮಾಧ್ಯಮಗಳ
ಜೊತೆ
ಮಾತನಾಡಿದ
ಸಿದ್ದರಾಮಯ್ಯ
ಅವರು,
'ಬಿಜೆಪಿ
ನಾಯಕರು
ಬೀದಿಯಲ್ಲಿ
ನಿಂತು
ಬಾಯಿಗೆ
ಬಂದಂತೆ
ಮಾತನಾಡುತ್ತಾರೆ'
ಎಂದು
ಆರೋಪಿಸಿದರು.
[ಮರಳು
ಮಾಫಿಯಾ
ಎಂದರೇನು,
ಏನಿದರ
ಮರ್ಮ]
'ಬಿಜೆಪಿಯವರಂತೆ ಕೀಳು ಮಟ್ಟದಲ್ಲಿ ಮಾತನಾಡುವವರನ್ನು ರಾಜಕೀಯ ಜೀವನದಲ್ಲಿ ನಾನೆಂದೂ ನೋಡಿಲ್ಲ. ಭ್ರಷ್ಟಚಾರದ ಬಗ್ಗೆ ಮಾತನಾಡುವ ಯಡಿಯೂರಪ್ಪ ಅವರು ಹೇಗೆ ಆಡಳಿತ ನಡೆಸಿದ್ದಾರೆ? ಎಂಬುದುದನ್ನು ರಾಜ್ಯದ ಜನರು ನೋಡಿದ್ದಾರೆ' ಎಂದರು. [ಮರಳು ಲಾರಿಯನ್ನು ಮಾರಿದ ಪೊಲೀಸರು]
'ಕೆ.ಎಸ್.ಈಶ್ವರಪ್ಪ ಅವರು ನನ್ನ ಮಕ್ಕಳು ಅಕ್ರಮ ಮರಳು ದಂಧೆಯಲ್ಲಿ ಭಾಗಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ಮಕ್ಕಳು ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿದ್ದರೆ ಅವರನ್ನು ನೇತು ಹಾಕುವೆ' ಎಂದು ಹೇಳಿದರು.
ಈಶ್ವರಪ್ಪ ಏನು ಹೇಳಿದ್ರು? : ಭಾನುವಾರ ಮೈಸೂರಿನಲ್ಲಿ ಮಾತನಾಡಿದ್ದ ಕೆ.ಎಸ್.ಈಶ್ವರಪ್ಪ ಅವರು 'ಅಕ್ರಮ ಮರಳು ದಂಧೆಯಲ್ಲಿ ಸಿದ್ದರಾಮಯ್ಯ ಮತ್ತು ಅವರ ಪರಮಾಪ್ತರಾದ ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ ಅವರ ಪುತ್ರರು ಶಾಮೀಲಾಗಿದ್ದಾರೆ. ಮರಳು ಮಾಫಿಯಾದಲ್ಲಿ ಪ್ರಭಾವಿ ರಾಜಕಾರಣಿಗಳ ಮಕ್ಕಳು ಭಾಗಿಯಾಗಿದ್ದಾರೆ ಎಂದು ಜಿಲ್ಲಾ ಭೇಟಿಯ ವೇಳೆ ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದಾರೆ' ಎಂದು ಹೇಳಿದ್ದರು.