ಶಿಕ್ಷಣಕ್ಕಿಲ್ಲ ಭೇದಭಾವ: ಹೆಗ್ಗಳಿಕೆ ಪಾತ್ರವಾದ ಲೈಂಗಿಕ ಅಲ್ಪಸಂಖ್ಯಾತೆ ದೀಪಾ
ಮೈಸೂರು ಮೇ 5: ಸಮಾಜದಲ್ಲಿ ಲೈಗಿಂಕ ಅಲ್ಪಸಂಖ್ಯಾತರನ್ನು ಕೀಳಾಗಿ ಕಾಣುತ್ತಿದ್ದರೂ ತಾವು ಇತರರಿಗಿಂತ ಕಮ್ಮಿ ಇಲ್ಲ ಎಂದು ದೀಪಾ ಬುದ್ಧೆ ಎಚ್.ಜಿ. (32) ಸಾಬೀತು ಮಾಡಿದ್ದಾರೆ. ಲೈಗಿಂಕ ಅಲ್ಪಸಂಖ್ಯಾತರೆಂದರೆ ಮೂಗು ಮುರಿಯುವವರೇ ಹೆಚ್ಚು ಆದರೆ ಇದಕ್ಕೆ ಅಪವಾದ ಎನ್ನುವಂತಿದ್ದಾರೆ ದೀಪಾ. ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್ಡಿ ಪಡೆಯುತ್ತಿರುವ ಮೊದಲ ಕರ್ನಾಟಕದ ತೃತೀಯಲಿಂಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ದೀಪಾ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತಮ್ಮ ಮೊದಲ ವರ್ಷದ ಸಂಶೋಧನಾ ಚಟುವಟಿಕೆಯನ್ನು ಮುಂದುವರಿಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಜೆ.ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ 'ಮೈಸೂರು-ಚಾಮರಾಜನಗರ ಜಿಲ್ಲೆಗಳ ಟ್ರಾನ್ಸ್ಜೆಂಡರ್ ಸಮುದಾಯಗಳು: ಜೀವನ ಮತ್ತು ಹೋರಾಟದ ಕುರಿತು ವಿಮರ್ಶಾತ್ಮಕ ಅಧ್ಯಯನ' ಎಂಬ ವಿಷಯದ ಕುರಿತು ತಮ್ಮದೇ ಸಮುದಾಯದ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ ತಂದೆ ಗುರುಸಿದ್ದಯ್ಯ ಮತ್ತು ತಾಯಿ ಮಹದೇವಮ್ಮ ಅವರಿಗೆ ನಾಲ್ವರು ಸಹೋದರಿಯರೊಂದಿಗೆ ಗಂಡು ಮಗುವಾಗಿ ದೀಪಾ ಜನಿಸಿದರು. ಆಕೆ 7ನೇ ತರಗತಿಯಲ್ಲಿದ್ದಾಗ ತನ್ನ ಗುರುತನ್ನು ಅರಿತುಕೊಂಡಳು. "ನನ್ನ ಹೆತ್ತವರು ನನ್ನನ್ನು ಚೆನ್ನಾಗಿ ಪ್ರೀತಿಸುತ್ತಿದ್ದರು ಮತ್ತು ನೋಡಿಕೊಳ್ಳುತ್ತಿದ್ದರು. ಆದರೆ ನಾನು ತೃತೀಯಲಿಂಗಿ ಎಂದು ತಿಳಿದ ನಂತರ ಅವರು ನನ್ನನ್ನು ತಿರಸ್ಕರಿಸಲು ಪ್ರಾರಂಭಿಸಿದರು. ನಾನು ಪಿಯು ಓದುತ್ತಿದ್ದಾಗ ಸಂಸಾರದಿಂದ ದೂರ ಸರಿಯಲು ನಿರ್ಧರಿಸಿ ನನ್ನ ಸಮುದಾಯಕ್ಕೆ ಸೇರಿಕೊಂಡೆ'' ಎಂದು ದೀಪಾ ಹೇಳಿದ್ದಾರೆ. ಆಕೆಯನ್ನು ಕಡೆಗಣಿಸಿದ್ದರಿಂದ ಆಕೆ 12 ವರ್ಷಗಳಿಂದ ಪೋಷಕರನ್ನು ಭೇಟಿ ಮಾಡಿಲ್ಲ. ಮನೆಗೂ ಭೇಟಿ ನೀಡಿಲ್ಲ.

ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿಯ ಪ್ರೌಢಶಾಲೆಯ ಹುಟ್ಟೂರು ಹೆಗ್ಗವಾಡಿಪುರದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ದೀಪಾ, ತೃತೀಯಲಿಂಗಿಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಮತಾ ಸೊಸೈಟಿಯಲ್ಲಿ ಅರೆಕಾಲಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಲೇ ಸಂತೆಮರಹಳ್ಳಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಂದುವರಿಸಿದರು. ಕೆಲವೇ ವರ್ಷಗಳಲ್ಲಿ ಅವರು ಸೊಸೈಟಿಯ ಪ್ರಾಜೆಕ್ಟ್ ಮ್ಯಾನೇಜರ್ ಆದರು ಮತ್ತು 2018 ರಲ್ಲಿ ಅವರು ಅದರ ಅಧ್ಯಕ್ಷರಾದರು. ಮಾತ್ರವಲ್ಲದೆ ಕರ್ನಾಟಕ ರಾಜ್ಯ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಖಜಾಂಚಿಯೂ ಆದರು. 'ನಾನು ಕುದೇರುವಿನ ಪದವಿ ಕಾಲೇಜಿಗೆ ಸೇರಿಕೊಂಡೆ, ಆದರೆ ನಾನು ಟ್ರಾನ್ಸ್ಜೆಂಡರ್ ಸಮುದಾಯದೊಂದಿಗೆ ಗುರುತಿಸಿಕೊಂಡಿದ್ದರಿಂದ ಸಮಾಜದಲ್ಲಿ ಅವಮಾನ ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದ ಕಾರಣ 2015 ರಲ್ಲಿ ನನ್ನ ಶಿಕ್ಷಣವನ್ನು ನಿಲ್ಲಿಸಬೇಕಾಯಿತು. ಆದರೆ ನಂತರ ನಾನು ನನ್ನ ಅಧ್ಯಯನವನ್ನು ಪೂರ್ಣಗೊಳಿಸಿದೆ' ಎಂದು ದೀಪಾ ಹೇಳಿಕೊಂಡಿದ್ದಾರೆ.

2018 ರಲ್ಲಿ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಂಬೇಡ್ಕರ್ ಅಧ್ಯಯನದಲ್ಲಿ ಎಂಎಗೆ ಸೇರಿದರು. ಅಲ್ಲಿ ಅವರು ಅಂತಿಮ ಪರೀಕ್ಷೆಗಳಲ್ಲಿ 82% ಗಳಿಸಿದರು. ಕಾಲೇಜು ಪ್ರವೇಶದ ಸಮಯದಲ್ಲಿ ಅವರು ಪ್ರವೇಶ ಅರ್ಜಿಗಾಗಿ ಹೋರಾಡಿದರು ಮತ್ತು ಅದರಲ್ಲಿ ಯಶಸ್ವಿಯಾದರು. "ನಾನು ನನ್ನ ವಿಭಾಗದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದೆ. ಹಾಗಾಗಿ ನಾನು ಪಿಎಚ್ಡಿ ಮಾಡಲು ನಿರ್ಧರಿಸಿದೆ ಮತ್ತು ಪ್ರವೇಶಕ್ಕೆ ಬಂದ ಅಡ್ಡಿಗಳನ್ನು ಧೈರ್ಯದಿಂದ ಎದುರಿಸಿದೆ. ಈಗ ನಾನು ಕಳೆದ ವರ್ಷ ಏಪ್ರಿಲ್ನಿಂದ ಸಂಶೋಧನೆ ನಡೆಸುತ್ತಿದ್ದೇನೆ''ಎಂದು ಅವರು ಹೇಳಿದರು. ಈಗಲೂ ಚಾಮರಾಜನಗರದಲ್ಲಿ ನೆಲೆಸಿರುವ ದೀಪಾ, ವಿದ್ಯಾಭ್ಯಾಸಕ್ಕಾಗಿ ಪ್ರತಿನಿತ್ಯ 60 ಕಿ.ಮೀ ಪ್ರಯಾಣಿಸಿ ವಿಶ್ವವಿದ್ಯಾಲಯಕ್ಕೆ ಬರುತ್ತಾರೆ. ಚಾಮರಾಜನಗರದಿಂದ ಬೆಳಗ್ಗೆ 8 ಗಂಟೆಗೆ ಹೊರಟು ರಾತ್ರಿ 8 ಗಂಟೆಯ ಮೊದಲು ತನ್ನ ಕೇಂದ್ರಕ್ಕೆ ಮರಳುತ್ತಾರೆ. "ನಾನು ಮೂರು ವರ್ಷಗಳಲ್ಲಿ ನನ್ನ ಪಿಎಚ್ಡಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ. ಪೂರ್ಣಗೊಂಡ ನಂತರ, ನಾನು ಬೋಧನೆಯನ್ನು ಮಾಡಲು ಬಯಸುತ್ತೇನೆ. ಜೊತೆಗೆ ನನ್ನ ಸಮುದಾಯದ ಜನರಿಗೆ ಸಹಾಯ ಮಾಡಲು ಬಯಸುತ್ತೇನೆ, "ಎಂದು ಬುಧ, ಬಸವ ಮತ್ತು ಅಂಬೇಡ್ಕರ್ ಅವರ ಬೋಧನೆಗಳಲ್ಲಿ ಅಪಾರ ನಂಬಿಕೆಯುಳ್ಳ ದೀಪಾ ಹೇಳುತ್ತಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications