ಕೈ-ತೆನೆ ಮೈತ್ರಿಯಾದರೆ ಮೈಸೂರಿನಿಂದ ದೇವೇಗೌಡರೇ ಅಭ್ಯರ್ಥಿ:ಜಿಟಿಡಿ
ಮೈಸೂರು, ಮಾರ್ಚ್ 5: ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್ - ಕಾಂಗ್ರೆಸ್ ಮೈತ್ರಿಯಾದರೆ ಮಾತ್ರ ಮೈಸೂರಿನಿಂದ ಎಚ್.ಡಿ ದೇವೇಗೌಡರು ಸ್ಪರ್ಧಿಸುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಸ್ಪಷ್ಟನೆ ನೀಡಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಕುರಿತಾಗಿ ಇನ್ನು ಯಾವುದೇ ಚರ್ಚೆಯಾಗಿಲ್ಲ. ಒಂದು ವೇಳೆ ಕಾಂಗ್ರೆಸ್ ಜೆ.ಡಿ.ಎಸ್ ಮೈತ್ರಿಯಾದರೆ ಮಾತ್ರ ಮೈಸೂರಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ದೇವೆಗೌಡರು ಸ್ಪರ್ಧೆ ಮಾಡುತ್ತಾರೆ. ದೇವೇಗೌಡರನ್ನು ಹೊರತುಪಡಿಸಿ ಬೇರೆ ಅಭ್ಯರ್ಥಿ ಯಾರು ಇಲ್ಲ ಎಂದು ತಿಳಿಸಿದರು.

ತಮ್ಮ ಪುತ್ರನ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಜಿಟಿಡಿ, ನನ್ನ ಮಗ ಹರೀಶ್ ಸ್ಪರ್ಧೆ ಮಾಡಲ್ಲ. ನನ್ನ ಕುಟುಂಬ ಚಾಮುಂಡೇಶ್ವರಿ ಚುನಾವಣೆಯಿಂದಲೇ ಚೇತರಿಸಿಕೊಂಡಿಲ್ಲ. ಉಳಿದಂತೆ ದೇವೇಗೌಡರ ಹೆಸರು ಹೊರತುಪಡಿಸಿ ಬೇರೆ ಯಾರೂ ಆಕಾಂಕ್ಷಿಗಳಿಲ್ಲ ಎಂದು ತಿಳಿಸಿದರು.












Click it and Unblock the Notifications