ಗೂಡ್ಸ್ ಗಾಡಿಯಲ್ಲೇ ಶವ ರವಾನೆ: ಮೈಸೂರಿನಲ್ಲಿ ಅಮಾನವೀಯ ಘಟನೆ
ಮೈಸೂರು, ಜುಲೈ 19: ಇಷ್ಟು ದಿನ ಕೇವಲ ಬೇರೆ ರಾಜ್ಯಗಳಲ್ಲಿ ಮಾತ್ರ, ಶವಗಳನ್ನು ಹೆಗಲ ಮೇಲೆ, ತಳ್ಳುವ ಗಾಡಿಯಲ್ಲಿ ಸಾಗಿಸುವ ಘಟನೆಗಳನ್ನು ಕೇಳಿದ್ದೆವು. ಆಗೆಲ್ಲ 'ಇದೆಂಥಾ ಅಮಾನವೀಯತೆ' ಎಂದು ಹಿಡಿಶಾಪ ಹಾಕಿದ್ದೆವು. ಆದರೆ ಅಂಥದೇ ಒಂದು ಅಮಾನವೀಯ ಘಟನೆ ಮೈಸೂರಿನಲ್ಲೂ ನಡೆದಿರುವುದು ದುರಂತವೇ.
ಮೈಸೂರಿನ ಹಿನಕಲ್ ನಲ್ಲಿ ಶವ ಸಾಗಿಸುವ ವಾಹನ ಸಿಗದೇ ಗೂಡ್ಸ್ ಆಟೋದಲ್ಲೇ ಶವ ರವಾನಿಸಿದ ಘಟನೆ ನಡೆದಿದೆ.

ಹಿನಕಲ್ ನಿವಾಸಿ ಭಾಗ್ಯ ಎಂಬವರು ಜುಲೈ 18 ರ ರಾತ್ರಿ ಮೃತಪಟ್ಟಿದ್ದರು. ಆದರೆ ಭಾಗ್ಯ ಮೃತದೇಹವನ್ನು ಸಾಗಿಸಲು ಗ್ರಾಮಪಂಚಾಯತ್ ವತಿಯಿಂದ ಒಂದು ವಾಹವೂ ಸಿಗದೆ ಕುಟುಂಬಸ್ಥರು ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಕೊನೆಗೆ ಬೇರೆ ದಾರಿ ಇಲ್ಲದೆ, ಭಾಗ್ಯ ಕುಟುಂಬಿಕರು ಅವರ ಮೃತದೇಹವನ್ನು ಗೂಡ್ಸ್ ಆಟೋದಲ್ಲಿ ರುದ್ರಭೂಮಿಗೆ ಕೊಂಡೊಯ್ದಿದ್ದಾರೆ. ಈ ರೀತಿ ಅಮಾನವೀಯತೆ ಮೆರೆದ ಗ್ರಾಂಪಂಚಾಯತ್ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದೆ.












Click it and Unblock the Notifications