ಚಾಮುಂಡಿಬೆಟ್ಟಕ್ಕೆ "ಪ್ರಸಾದ್" ಯೋಜನೆ, ತಜ್ಞರ ಅಭಿಪ್ರಾಯ ಪಡೆಯಿರಿ: ಜಿ.ಟಿ.ಡಿ
ಮೈಸೂರು, ಜನವರಿ, 23: ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮುನ್ನ ಭೂ ವಿಜ್ಞಾನಿಗಳು ಮತ್ತು ಪರಿಸರ ತಜ್ಞರ ಅಭಿಪ್ರಾಯ ಪಡೆಯುವುದು ಉತ್ತಮ ಎಂದು ಶಾಸಕ ಜಿ.ಟಿ.ದೇವೇಗೌಡ ಮೈಸೂರಿನಲ್ಲಿ ಹೇಳಿದರು.
ದೇವಿಯ
ಭಕ್ತರಿಂದ
ಕಳವಳ
ವ್ಯಕ್ತ
ಸುದ್ದಿಗಾರೊಂದಿಗೆ
ಮಾತನಾಡಿದ
ಅವರು,
ಚಾಮುಂಡಿ
ಬೆಟ್ಟದ
ಮೇಲೆ
ಕೇಂದ್ರ
ಸರ್ಕಾರದ
ಪ್ರಸಾದ್
ಯೋಜನೆಯಡಿ
ರಾಜ್ಯ
ಪ್ರವಾಸೋದ್ಯಮ
ಇಲಾಖೆ
ಅಭಿವೃದ್ಧಿ
ಕೆಲಸಗಳನ್ನು
ಮಾಡಲು
ಹೊರಟಿದೆ.
ಈ
ಅಭಿವೃದ್ಧಿ
ಕೆಲಸಗಳು
ಬೆಟ್ಟದ
ಪ್ರಾಕೃತಿಕ
ಸಂರಚನೆಗೆ,
ಸಹಜ
ಸೌಂದರ್ಯಕ್ಕೆ
ಮತ್ತು
ಧಾರ್ಮಿಕ
ಪಾವಿತ್ರ್ಯಕ್ಕೆ
ಕುಂದು
ತರಬಹುದು.
ಈ
ಬಗ್ಗೆ
ಪರಿಸರ
ಕಾಳಜಿವುಳ್ಳ
ನಾಗರಿಕರು
ಮತ್ತು
ಈ
ನಾಡಿನ
ಅಧಿದೇವತೆ
ಚಾಮುಂಡೇಶ್ವರಿ
ದೇವಿಯ
ಭಕ್ತರು
ಕಳವಳ
ವ್ಯಕ್ತಪಡಿಸುತ್ತಿದ್ದಾರೆ.
ಅಭಿವೃದ್ಧಿ
ಕೆಲಸಗಳನ್ನು
ಮಾಡುವ
ಮೊದಲು
ತಜ್ಞರ
ಅಭಿಪ್ರಾಯ
ಪಡೆಯಬೇಕು.
ಮತ್ತು
ಪರಿಸರಕ್ಕೆ
ಪೂರಕವಾದ
ಕೆಲಸಗಳನ್ನು
ಮಾತ್ರ
ಮಾಡಬೇಕಿದೆ
ಎಂದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ 5 ಬಾರಿ ಗೆದ್ದಿದ್ದ ಸಿದ್ದರಾಮಯ್ಯ: ಈ ಬಾರಿಯ ಸ್ಪರ್ಧೆ ಇನ್ನೂ ನಿಗೂಢ..!
ಬೆಟ್ಟದ ರಕ್ಷಣೆಯೇ ನಮ್ಮ ಕರ್ತವ್ಯ
"ಈ ಕ್ಷೇತ್ರದ ಶಾಸಕರಾಗಿ ಚಾಮುಂಡಿ ಬೆಟ್ಟದ ರಕ್ಷಣೆ ಮಾಡುವುದು ಮತ್ತು ಚಾಮುಂಡೇಶ್ವರಿ ದೇವಿಯ ಭಕ್ತರು ಹಾಗೂ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ನಾಗರಿಕರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ನನ್ನ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಚಾಮುಂಡಿ ಬೆಟ್ಟದ ಮೇಲೆ ಕೇಂದ್ರ ಸರ್ಕಾರದ "ಪ್ರಸಾದ್" ಯೋಜನೆಯಡಿ ಮಾಡಲು ಉದ್ದೇಶಿಸಿರುವ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಕ್ಕೂ ಮೊದಲು ಭೂ ವಿಜ್ಞಾನಿಗಳು, ಪರಿಸರ ತಜ್ಞರು ಮತ್ತು ಪರಂಪರೆ ತಜ್ಞರ ಅಭಿಪ್ರಾಯ ಪಡೆಯುವುದು ಸೂಕ್ತ. ವಿವಿಧ ತಜ್ಞರು ತಮ್ಮ ಅಭಿಪ್ರಾಯ ಕೊಡುವ ತನಕ ಬೆಟ್ಟದ ಮೇಲೆ ಯಾವುದೇ ರೀತಿಯ ಕೆಲಸಗಳನ್ನು ಮಾಡಬಾರದು ಎಂಬ ಬಗ್ಗೆ ಸಂಬಂಧ ಪಟ್ಟ ಅಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಚಾಮುಂಡಿ ಬೆಟ್ಟ ನಾನು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವುದರಿಂದ ಗಂಭೀರವಾಗಿ ಪರಿಗಣಿಸಿದ್ದೇನೆ. ಈ ಬಗ್ಗೆ ಕೆಲವು ತಜ್ಞರು ಮತ್ತು ಪರಿಸರ ಪ್ರೇಮಿಗಳ ಜೊತೆಗೆ ಚರ್ಚೆ ಮಾಡಿದ್ದೇನೆ. ಇವರೆಲ್ಲ ವ್ಯಕ್ತಪಡಿಸುತ್ತಿರುವ ಅಭಿಪ್ರಾಯ ಸರಿಯಿದೆ ಎಂದು ನನಗೆ ಅನಿಸಿದೆ. ಚಾಮುಂಡಿ ಬೆಟ್ಟದ ಪ್ರಾಕೃತಿಕ ಸಂರಚನೆ ತುಂಬಾ ಸೂಕ್ಷ್ಮ ಮತ್ತು ದುರ್ಬಲವಾಗಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಹೀಗಿರುವಾಗ ಬೆಟ್ಟದ ಧಾರಣಾ ಸಾಮರ್ಥ್ಯ ತಿಳಿಯದೇ, ಕಾಂಕ್ರೀಟ್ ಕಟ್ಟಡಗಳನ್ನು ಕಟ್ಟುವುದು ಅಪಾಯಕಾರಿ ಆಗುವ ಸಂಭವವಿದೆ ಎಂದು ಎಚ್ಚರಿಸಿದ್ದಾರೆ.