ಸುಳ್ವಾಡಿ ಜನರು ನರಹಂತಕ ವೀರಪ್ಪನ್ ನನ್ನು ನೆನಪಿಸಿಕೊಂಡಿದ್ದೇಕೆ?
Recommended Video

ಮೈಸೂರು, ಡಿಸೆಂಬರ್ 18 : ವಿಷಪ್ರಸಾದಕ್ಕೆ ಬಲಿಯಾದ ಆಘಾತದಿಂದ ಇಡೀ ಗ್ರಾಮದ ಜನರು ಇನ್ನೂ ಹೊರಬಂದಿಲ್ಲ. ಅದರ ನಡುವೆ ಇಲ್ಲಿನ ಜನರನ್ನು ಮಾತನಾಡಿಸಲು ಸಿಕ್ಕಾಗ ಒಬ್ಬೊಬ್ಬರದು ಒಂದೊಂದು ಕಥೆ. 1997ರ ಆಗಸ್ಟ್ 15ರಂದು ಚಾಮರಾಜನಗರ ಜಿಲ್ಲೆ ಮೈಸೂರಿನಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಯಿತು.
ನಂತರ ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಸಾವು -ನೋವು ಸಂಭವಿಸಿಲ್ಲ. ಇಂತಹ ಪೈಶಾಚಿಕ ಕೃತ್ಯವೂ ನಡೆದಿಲ್ಲ.ಪ್ರಾಣಘಾತುಕ ವಿಷ ಆಹಾರವನ್ನು ಸೇವಿಸಿ, ಜನರು ಸಾಮೂಹಿಕವಾಗಿ ಪ್ರಾಣಕಳೆದುಕೊಂಡ ಅಥವಾ ತೀವ್ರ ರೀತಿಯಲ್ಲಿ ಅಸ್ವಸ್ಥಗೊಂಡು 80-90 ಜನರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಪ್ರಕರಣಗಳು ನಡೆದಿಲ್ಲ ಎಂದು ಹೇಳುತ್ತಾರೆ ಜಿಲ್ಲೆಯ ಹಿರಿಯ ಪರಿಸರವಾದಿ ಪುಣಜನೂರು ದೊರೆಸ್ವಾಮಿ.
ಜಿಲ್ಲೆ ಇನ್ನೂ ಮೈಸೂರಿನೊಂದಿಗೆ ಬೆಸೆದಿದುಕೊಂಡಿದ್ದ ಅವಧಿಯಲ್ಲಿ, 90ರ ದಶಕದ ಆರಂಭದಲ್ಲಿ ಮಲೆಮಹದೇಶ್ವರ ಅರಣ್ಯ ಹಾಗೂ ಇನ್ನಿತರ ಅರಣ್ಯ ಪ್ರದೇಶಗಳನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದ ನರಹಂತಕ ವೀರಪ್ಪನ್ ನಾಲ್ಕೈದು ಬಾರಿ ದ್ವೇಷದ ಕ್ರೌರ್ಯ ಮೆರೆದು ಸಾಮೂಹಿಕವಾಗಿ ಹಲವರನ್ನು ಹತ್ಯೆ ಮಾಡಿದ್ದ. ಅದೇ ಕೊನೆ. ಆ ನಂತರ ಸಾಮೂಹಿಕ ನರಮೇಧ ಪ್ರಕರಣಗಳು ಈ ಭಾಗದಲ್ಲಿ ನಡೆದಿರಲಿಲ್ಲ ಎಂದು ಹೇಳುತ್ತಾರೆ ಹಿರಿಯರು. ಮುಂದೆ ಓದಿ..

ಪೊಲೀಸರ ಮೇಲೆ ದ್ವೇಷ
ಸದಾ ಪೊಲೀಸರ ಮೇಲೆ ದ್ವೇಷ ಕಾರುತ್ತಲೇ ಇದ್ದ ವೀರಪ್ಪನ್ 1992ರ ಮೇ 19ರಂದು ಹನೂರು ತಾಲ್ಲೂಕಿನ ರಾಮಾಪುರ ಪೊಲೀಸ್ ಠಾಣೆಯ ಮೇಲೆ ಏಕಾಏಕಿ ದಾಳಿ ನಡೆಸಿ ಐವರು ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದ.
ಅದೇ ವರ್ಷ ಆಗಸ್ಟ್ 14ರಂದು ಮೀಣ್ಯಂ ಬಳಿ ಹೊಂಚು ಹಾಕಿ ಕುಳಿತು, ಅಂಬಾಸಿಡರ್ ಕಾರಿನಲ್ಲಿ ಬರುತ್ತಿದ್ದ ಎಸ್ಪಿ ಹರಿಕೃಷ್ಣ, ಪೊಲೀಸ್ ಅಧಿಕಾರಿ ಶಕೀಲ್ ಅಹಮದ್ ಹಾಗೂ ಇತರ ಪೊಲೀಸ್ ಸಿಬ್ಬಂದಿ ಮೇಲೆ ಗುಂಡಿನ ಮಳೆಗೆರದು, ಏಳು ಜನರನ್ನು ಹತ್ಯೆ ಮಾಡಿ ಕ್ರೌರ್ಯ ಮೆರೆದಿದ್ದ.

ನೆಲಬಾಂಬ್ ಸ್ಫೋಟ
1993ರ ಏಪ್ರಿಲ್ 9ರಂದು ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಎರಡು ವಾಹನಗಳನ್ನು ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಪಾಲಾರ್ ರಸ್ತೆಯಲ್ಲಿ ನೆಲಬಾಂಬ್ ಹುದಗಿಸಿಟ್ಟು ಸ್ಫೋಟಿಸಿದ್ದ ವೀರಪ್ಪನ್. ಈ ಭೀಕರ ದುರಂತದಲ್ಲಿ 22 ಮಂದಿ ಜೀವ ತೆತ್ತಿದ್ದರು.

ಐವರು ಸಾವು
1991-93ರ ನಡುವಿನ ಅವಧಿಯಲ್ಲಿ, ತನ್ನ ಪತ್ನಿಯನ್ನು ತಮಿಳುನಾಡು ಪೊಲೀಸರಿಗೆ ಒಪ್ಪಿಸಿದ ಕಾರಣಕ್ಕೆ ಚಾಮರಾಜನಗರ ತಾಲ್ಲೂಕಿನ ಪುಣಜನೂರಿನಲ್ಲಿ ಐವರು ನಾಗರಿಕರನ್ನು ದಾರುಣವಾಗಿ ಕೊಂದು ರಣಕೇಕೆ ಹಾಕಿದ್ದ.

ನೆನೆಯುತ್ತಿರುವುದು ವಿಪರ್ಯಾಸವೇ!
ನಮ್ಮ ರಾಜ್ಯದವರು ಹಾಗೂ ತಮಿಳುನಾಡಿನವರು ಸೇರಿದಂತೆ ವೀರಪ್ಪನ್ ಒಟ್ಟು 114 ಜನರನ್ನು ಹತ್ಯೆ ಮಾಡಿದ್ದ. ಪೊಲೀಸರು, ಅರಣ್ಯ ಅಧಿಕಾರಿಗಳು ಹಾಗೂ ತನ್ನ ಬಗ್ಗೆ ಮಾಹಿತಿ ನೀಡುತ್ತಿರುವವರ ಮೇಲೆ ಸದಾ ಹಗೆ ಸಾಧಿಸುತ್ತಿದ್ದ ವೀರಪ್ಪನ್ ಅವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡುವ ಮೂಲಕ ಸ್ಥಳೀಯರಲ್ಲಿ ಭಯ ಬಿತ್ತಿದ್ದರು ಎನ್ನುತ್ತಾರೆ. ಒಟ್ಟಾರೆ ಈ ದುರಂತದ ನಡುವೆ ಇಲ್ಲಿನ ಜನರು ನರಹಂತಕನನ್ನು ನೆನೆಯುತ್ತಿರುವುದು ವಿಪರ್ಯಾಸವೇ ಸರಿ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications