ಚುನಾವಣೆಗೂ ಮುನ್ನ ಮೈಸೂರಿನಲ್ಲಿ ನಡೆಯಿತು ವಾಮಾಚಾರ?
ಮೈಸೂರು, ಏಪ್ರಿಲ್ 4: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಮುನ್ನವೇ ವಾಮಾಚಾರ ನಡೆದಿದೆ. ಮೈಸೂರು- ಮಡಿಕೇರಿ ರಸ್ತೆಯ ಕಲಾಮಂದಿರ ಬಳಿ ಮೂರು ದಾರಿ ಸೇರುವ ಸ್ಥಳದಲ್ಲಿ ಕೋಳಿ ಬಲಿ ನೀಡಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಸ್ತೆಯ ತುಂಬೆಲ್ಲಾ ನಿಂಬೆ ಹಣ್ಣುಗಳು, ಅರಿಶಿನ, ಕುಂಕುಮ, ದಾರ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸುವಂತೆ ಮಾಡಿದೆ. ಜಿಲ್ಲಾಧಿಕಾರಿ ಕಚೇರಿ, ಪ್ರಾದೇಶಿಕ ಆಯುಕ್ತರ ಕಚೇರಿ, ಸಂಸದರ ಕಚೇರಿ ಮುಂತಾದ ಸರ್ಕಾರಿ ಕಟ್ಟಡಗಳಿಗೆ ಕೂಗಳತೆ ದೂರದಲ್ಲಿರುವ ಕಲಾಮಂದಿರ ವೃತ್ತದ ಬಳಿಯೇ ಸಾರ್ವಜನಿಕ ರಸ್ತೆಯಲ್ಲಿಯೇ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಅಪರಿಚಿತರು ತಂದು ಬಿಸಾಡಿ ಹೋಗಿದ್ದು, ಬೆಳಗ್ಗೆ ಗಮನಿಸಿದ ಸಾರ್ವಜನಿಕರಿಗೆ ದಿಗ್ಬ್ರಮೆ ಉಂಟಾಗಿದೆ.
ಬಿಎಸ್ ವೈ-ಶೋಭಾ ವಾಮಾಚಾರ ಮಾಡಿಸಲು ಕೇರಳಕ್ಕೆ ಹೋಗುತ್ತಾರೆ: ಬೇಳೂರು
ಅಲ್ಲದೇ ಚುನಾವಣಾ ಹೊಸ್ತಿಲಲ್ಲಿ ವಾಮಾಚಾರ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಂತಿದೆ.