Get Updates
Get notified of breaking news, exclusive insights, and must-see stories!

ಮೈಸೂರಿನಲ್ಲಿ ವೃದ್ಧನಿಗೆ ವರದಾನವಾದ ಕೊರೊನಾ ಲಾಕ್ ಡೌನ್!

ಮೈಸೂರು, ಮೇ 21: ದಾರಿ ತಪ್ಪಿ ಬಂದು ಮಾನಸಿಕ ಖಿನ್ನತೆಗೆ ಒಳಗಾಗಿ, ಮೈಸೂರಿನಲ್ಲಿ ಅಲೆದಾಡುತ್ತಿದ್ದ ಉತ್ತರ ಪ್ರದೇಶ ಮೂಲದ ವೃದ್ಧನಿಗೆ ಲಾಕ್ ಡೌನ್ ವರದಾನವಾಗಿ ಪರಿಣಮಿಸಿದೆ.

Recommended Video

      ಯಲಹಂಕಾದ ರಾಯಲ್ ಆರ್ಕಿಡ್‌ನಲ್ಲಿ ತಬ್ಲಿಘಿಗಳಿಗೆ ಆಸರೆ , ಶಾಸಕ ಎಸ್.ಆರ್. ವಿಶ್ವನಾಥ್ ಖಂಡನೆ

      ವೃದ್ಧನಿಗೆ ಲಾಕ್ ಡೌನ್ ವೇಳೆ ಮೈಸೂರಿನ ನಂಜರಾಜ ಬಹದ್ದೂರ್ ನಿರ್ಗತಿಕರ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು. ಉತ್ತರ ಪ್ರದೇಶ ಮೂಲದ 70 ವರ್ಷದ ಕರಮ್ ಸಿಂಗ್ ಎಂಬ ವೃದ್ಧ ಅಲೆದಾಡುತ್ತಿದ್ದನು.

      ನಂತರ ವೃದ್ಧನಿಗೆ ನಿರ್ಗತಿಕರ ಕೇಂದ್ರದಲ್ಲಿ ಮನಪರಿವರ್ತನೆ ಚಟುವಟಿಕೆಗಳನ್ನು ಮಾಡಿಸಲಾಗಿತ್ತು. ಈ ವೇಳೆ ಮಾನಸಿಕ ತಜ್ಞರು ನೀಡಿದ ಚಿಕಿತ್ಸೆಗೆ ವೃದ್ಧ ಸ್ಪಂದಿಸಿದ್ದನು. ಆರೋಗ್ಯದಲ್ಲಿ ಚೇತರಿಸಿಕೊಂಡ ವೃದ್ಧನು ವೈದ್ಯರ ಬಳಿ ತನ್ನ ಹಿನ್ನೆಲೆ ಹೇಳಿಕೊಂಡಿದ್ದಾನೆ.

      An Old Man Cured From Mental Depression In Mysuru

      ಕಳೆದ ಮೂರು ವರ್ಷದ ಹಿಂದೆ ಮಗನ ಮದುವೆಗೆ ಹಣ ಹೊಂದಿಸಲು ಊರಿಂದ ತೆರಳಿದ್ದ ವೃದ್ಧ, ಆ ವೇಳೆ ತಪ್ಪಾಗಿ ಬೆಂಗಳೂರಿನ ರೈಲು ಹತ್ತಿಕೊಂಡು ಹೇಗೋ ಮೈಸೂರಿಗೆ ತಲುಪಿದ್ದನು. ನಂತರ ತನಗೆ ಇಬ್ಬರು ಮಕ್ಕಳಿರುವುದಾಗಿ ಮನಪರಿವರ್ತನೆ ನಂತರ ತಿಳಿಸಿದ.

      ಇದೀಗ ಪೊಲೀಸರ ಸಹಾಯದಿಂದ ಮಕ್ಕಳನ್ನು ಮೈಸೂರು ಪಾಲಿಕೆ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ತನ್ನ ತಂದೆ ಬದುಕಿಲ್ಲ ಎಂದುಕೊಂಡಿದ್ದ ಮಕ್ಕಳು. ತಂದೆ ಬದುಕಿರುವ ಸುದ್ದಿ ತಿಳಿದು ಸಂತಸ ಪಟ್ಟಿದ್ದಾರೆ.

      ಇದೀಗ ಕ್ರೆಡಿಟ್ ಐ ಸಂಸ್ಥೆಯು ಮಕ್ಕಳ ಬಳಿಗೆ ತಂದೆಯನ್ನು ಮೈಸೂರಿನಿಂದ ಉತ್ತರ ಪ್ರದೇಶಕ್ಕೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+