ಮಂಡ್ಯ ರಮೇಶ್ ಕಾರು ಅಪಘಾತ, ಕೂದಲೆಳೆ ಅಂತರದಲ್ಲಿ ಪಾರು
ಮೈಸೂರು, ಫೆಬ್ರವರಿ 02: ನಟ ಮಂಡ್ಯ ರಮೇಶ್ ಅವರ ಕಾರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಕ್ಕೆ ಈಡಾಗಿದ್ದು ಕೂದಲೆಳೆಯ ಅಂತರದಲ್ಲಿ ಮಂಡ್ಯ ರಮೇಶ್ ಪಾರಾಗಾಗಿದ್ದಾರೆ.
ಮಂಡ್ಯ ರಮೇಶ್ ಅವರ ಕಾರು ಶ್ರೀರಂಗಪಟ್ಟಣ ದ ಕೆ.ಶೆಟ್ಟಿಹಳ್ಳಿ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ಬೋರಲು ಬಿದ್ದಿದೆ. ಆದರೆ ಮಂಡ್ಯ ರಮೇಶ್ಗೆ ಯಾವುದೇ ಅಪಾಯ ಆಗಿಲ್ಲ. ಕಾರನ್ನು ಮಂಡ್ಯ ರಮೇಶ್ ಅವರೇ ಚಲಾಯಿಸುತ್ತಿದ್ದರು.
ಮಂಡ್ಯ ರಮೇಶ್, ಸಾಧುಕೋಕಿಲ ಮೇಲೆ ಲೈಂಗಿಕ ಶೋಷಣೆ ಆರೋಪ!
ಮಜಾಟಾಕೀಸ್ ಕಾರ್ಯಕ್ರಮದ ಚಿತ್ರೀಕರಣ ಮುಗಿಸಿ ಬೆಂಗಳೂರಿನಿಂದ ಮೈಸೂರಿಗೆ ವಾಪಾಸ್ಸಾಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.
ಸಣ್ಣ ಪುಟ್ಟ ಗಾಯಗಳಾಗಿರುವ ಮಂಡ್ಯ ರಮೇಶ್ ಅವರನ್ನು ಸ್ಥಳಿಯರು ಆಸ್ಪತ್ರೆಗೆ ಸೇರಿಸಿದ್ದರೆ. ಅಪಘಾತ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
English summary
Film actor Mandya Ramesh has met with accident in Bengaluru-Mysuru highway. Mandya Ramesh is safe by small injuries. Accident happen near Srirangapatna. case has been registered in Srirangapatna rural police station.
Story first published: Friday, February 2, 2018, 12:26 [IST]