ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಡುಹಂದಿಗಳ ಕಾಟಕ್ಕೆ ಹೈರಾಣಾದ ಬದನವಾಳು ಮಂದಿ

|
Google Oneindia Kannada News

ಮೈಸೂರು, ಏಪ್ರಿಲ್ 3: ಮೈಸೂರಿನ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಕಾಡುಹಂದಿಯೊಂದು ರಂಗಸ್ವಾಮಿ ಎಂಬುವವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ರಂಗಸ್ವಾಮಿಗೆ ತೊಡೆಯ ಭಾಗಕ್ಕೆ ತೀವ್ರತರವಾದ ‍ಪೆಟ್ಟು ಬಿದ್ದಿದ್ದು, ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.‌

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇವರು ಕುರಿ ಮೇಯಿಸಲು ತೆರಳಿದ್ದ ವೇಳೆ ಕಾಡುಹಂದಿಯೊಂದು ಗುದ್ದಿ ಎಳೆದಾಡಿದೆ. ಅಲ್ಲದೇ, ದವಡೆಗಳ ಮೂಲಕ ತೊಡೆಯ ಭಾಗಕ್ಕೆ ತಿವಿದು ಗಾಯಗೊಳಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ಕಾಡುಹಂದಿಗಳ ಕಾಟ ವಿಪರೀತವಾಗಿದೆ.

ಕಾಡಾನೆ ಆಯ್ತು, ಬಂಡೀಪುರ ರೈತರಿಗೀಗ ಕಾಡುಹಂದಿಯ ಕಾಟ!ಕಾಡಾನೆ ಆಯ್ತು, ಬಂಡೀಪುರ ರೈತರಿಗೀಗ ಕಾಡುಹಂದಿಯ ಕಾಟ!

500ಕ್ಕೂ ಹೆಚ್ಚಿನ ಕಾಡುಹಂದಿಗಳು ಸುತ್ತಮುತ್ತ ಓಡಾಡುತ್ತಿದ್ದು, ಬೆಳೆಗಳನ್ನು ನಾಶಪಡಿಸುತ್ತಿವೆ ಎಂದು ಬದನವಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ಮಹೇಶ್ ದೂರಿದ್ದಾರೆ.

A wild boar has attacked a person in Nanjangud

ಗ್ರಾಮದ ಸಮೀಪ ಇರುವ ಹಲಸಿನಕೆರೆ ಬಳಿ ಮುಳ್ಳುಗಂಟಿ ಗಿಡಗಳು ಬೆಳೆದುಕೊಂಡಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಂದಿಗಳಿವೆ. ಇದರ ಜತೆಗೆ, ನೇರಳೆ ಗೇಟ್ ಸಮೀಪ‍ವೂ ಕುರುಚಲು ಕಾಡಿದ್ದು ಅಲ್ಲೂ ಇವೆ. ಹಗಲಿನ ವೇಳೆಯೂ ಇವು ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಡಿಕ್ಕಿಯಾಗುತ್ತವೆ. ಇದರಿಂದ ಹಲವು ಅಪಘಾತಗಳು ಸಂಭವಿಸಿವೆ.

ಕೊಡಗಿನ ಕೃಷಿಕರ ನಿದ್ದೆಗೆಡಿಸಿದ ವನ್ಯಪ್ರಾಣಿಗಳು!ಕೊಡಗಿನ ಕೃಷಿಕರ ನಿದ್ದೆಗೆಡಿಸಿದ ವನ್ಯಪ್ರಾಣಿಗಳು!

ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸುವ ಹೆಚ್ಚಿನ ವಾಹನಗಳಿಗೆ ವಿಮೆ ಹಾಗೂ ಇತರೆ ದಾಖಲಾತಿಗಳು ಇಲ್ಲದಿರುವುದರಿಂದ ಪೊಲೀಸರಿಗೆ ದೂರು ನೀಡುವುದಿಲ್ಲ. ಬೇರೆಲ್ಲೋ ಪೆಟ್ಟಾಗಿದೆ ಎಂದು ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಾರೆ. ಜತೆಗೆ, ನೂರಕ್ಕೂ ಅಧಿಕ ಸೀಳುನಾಯಿಗಳಿದ್ದು, ಅವು ಕುರಿಗಳನ್ನು ತಿಂದು ಹಾಕುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

English summary
A wild boar has attacked a person in Nanjangud taluk at Mysuru district on Monday evening. The person was grazing sheeps when the wild animal attacked him. The forest department has not cared to listen to the problem of villagers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X