ನಾಗರಹೊಳೆ ಕಾಡಿನ ರಸ್ತೆ ಪಕ್ಕದಲ್ಲೇ 9 ಹುಲಿ ಕಂಡ ಸ್ಥಳೀಯರು
ನಾಗರಹೊಳೆ, ಜನವರಿ 7: ಕಾಡಿನಲ್ಲಿ ಹುಲಿ ನೋಡಬೇಕು ಅಂದುಕೊಳ್ಳುವವರಿಗೂ ಸಂತೋಷದ ಸುದ್ದಿಯೊಂದಿದೆ. ನಾಗರಹೊಳೆ ಕಾಡಿನಲ್ಲಿ ರಸ್ತೆ ಪಕ್ಕದಲ್ಲೇ ಒಟ್ಟಿಗೆ ಒಂಬತ್ತು ಹುಲಿ ಕಂಡುಬಂದಿದೆ. ಸ್ಥಳೀಯರೊಬ್ಬರಿಗೆ ಈ ರೀತಿ ಅಷ್ಟು ಸಂಖ್ಯೆಯ ಹುಲಿ ಕಂಡುಬಂದಿದ್ದು, ಸಹಜವಾಗಿಯೇ ಸಂತೋಷ ಹಾಗೂ ಗಾಬರಿಗೆ ಕಾರಣವಾಗಿದೆ.
ಎಷ್ಟೋ ಸಲ ಗಂಟೆಗಟ್ಟಲೆ ಕಾದರೂ, ನಾಲ್ಕೈದು ಬಾರಿ ಸಫಾರಿಗೆ ಹೋದರೂ ಯಾವ ಪ್ರಾಣಿಯನ್ನೂ ನೋಡಲು ಆಗಿರೋದಿಲ್ಲ. ಇನ್ನು ಹುಲಿ ಕಾಣುವುದು, ಅದರಲ್ಲೂ ಒಂಬತ್ತು ಹುಲಿ ಕಾಣಿಸಿಕೊಳ್ಳುವುದು ತೀರಾ ಕಷ್ಟ ಕಷ್ಟ. ಈ ರೀತಿ ಹುಲಿಗಳು ರಸ್ತೆ ಪಕ್ಕದಲ್ಲಿ ಬಂದು ಇರುವುದಕ್ಕೆ ಕಾರಣಗಳಿವೆ.[ಹುಲಿ ಕೂಡ ಹೆದರುವ ಕಾಡು ನಾಯಿ ಅಂದ್ರೆ ಸುಮ್ನೇನಾ?]

ಕಾಡಿನ ಮಧ್ಯದ ರಸ್ತೆಗಳಿಗೆ ಹೋಲಿಸಿದರೆ, ಡಾಂಬರು ರಸ್ತೆಗಳು ಹೆಚ್ಚು ಬೆಚ್ಚಗಿರುತ್ತವೆ. ಏಕೆಂದರೆ ಬೆಳಗ್ಗೆ ಇಡೀ ಬಿಸಿಲು ಕಾದಿರುತ್ತದೆ. ಜತೆಗೆ ವಾಹನಗಳ ಓಡಾಟದಿಂದಲೂ ಹೀಗಾಗಿರುತ್ತದೆ. ಈಗ ಕಾಡಿನೊಳಗೆ ವಿಪರೀತ ಚಳಿಯಿರುವುದರಿಂದ ಬೆಚ್ಚಗೆ ಎನಿಸುವ ಡಾಂಬರು ರಸ್ತೆಯ ಪಕ್ಕ ಬರುತ್ತವೆ.
ಇನ್ನು ಈಗ ಹುಲಿಗಳಿಗೆ ಕೂಡಿಕೆ ಕಾಲ. ಆದ್ದರಿಂದ ಅವುಗಳ ಚಟುವಟಿಕೆ ಕೂಡ ಹೆಚ್ಚು. ಸಾಧಾರಣವಾಗಿ ತಂಪಾದ ಜಾಗವನ್ನೇ ಹುಲಿಗಳು ಆರಿಸಿಕೊಳ್ಳುತ್ತವೆ. ಅದರಲ್ಲೂ ಬೇಟೆಯಾಡಿ, ಮಾಂಸ ತಿಂದ ನಂತರ ಅವುಗಳಿಗೆ ತಂಪಾದ ನೀರಿನ ಸಾಮೀಪ್ಯವೇ ಬೇಕು. ಆದರೆ ಈಗ ವಾತಾವರಣವೇ ಚಳಿಯಾದ್ದರಿಂದ ರಸ್ತೆ ಪಕ್ಕದಲ್ಲಿ ಕಾಣಿಸಿಕೊಳ್ಳುತ್ತಿದೆ. ಈಗೊಮ್ಮೆ ನಾಗರಹೊಳೆಗೆ ಪ್ರವಾಸಕ್ಕೆ ಹೋಗಿಬರಬಹುದು: ಹುಲಿ ದರ್ಶನಂ ಪ್ರಾಪ್ತಿರಸ್ತು.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications