ನಂಜನಗೂಡು ಜನರನ್ನ ಬೆಚ್ಚಿ ಬೀಳಿಸಿದ ಬಿಹಾರಿಗಳು
ಮೈಸೂರು, ಜುಲೈ 1: ನಂಜನಗೂಡು ಜನರನ್ನ ಬಿಹಾರಿಗಳು ಬೆಚ್ಚಿ ಬೀಳಿಸಿದ್ದಾರೆ. ಕ್ವಾರಂಟೈನ್ ಆಗಿ ಹೊರ ಬಂದಿರುವ ಬಿಹಾರಿಗಳ ಕೈಯಲ್ಲಿ ಸೀಲ್ ಇರುವುದನ್ನು ಕಂಡು ಜನತೆ ಭಯ ಭೀತರಾಗಿದ್ದಾರೆ.
Recommended Video
ನಾಲ್ವರು ಬಿಹಾರಿಗಳು ನಂಜನಗೂಡು ಪಟ್ಟಣದಲ್ಲಿ ಬಟ್ಟೆ ಮಾರಾಟ ಮಾಡಲು ಬಂದಿದ್ದರು. ಅವರುಗಳ ಕೈಯಲ್ಲಿ ಕ್ವಾರಂಟೈನ್ ಸೀಲ್ ಇರುವುದು ಜನರ ಕಣ್ಣಿಗೆ ಬಿತ್ತು. ಸೀಲ್ ನೋಡಿದ ಜನ ಕೊರೊನಾ ಸೋಂಕು ತಮಗೂ ಬರಬಹುದು ಎಂದು ಬೆಚ್ಚಿ ಬಿದ್ದಿದ್ದಾರೆ...
ಈ ವಿಷಯ ಪೊಲೀಸರ ಗಮನಕ್ಕೆ ಬಂದಿದ್ದು, ಸ್ಥಳಕ್ಕೆ ಬಂದ ನಂಜನಗೂಡು ಪಟ್ಟಣ ಪೊಲೀಸರು ನಾಲ್ವರನ್ನ ವಿಚಾರಣೆಗಾಗಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಕೂಲಂಕುಷ ವಿಚಾರಣೆ ನಂತರವಷ್ಟೇ ಎಲ್ಲಿಂದ, ಹೇಗೆ ನಂಜನಗೂಡಿಗೆ ಬಂದಿದ್ದರು ಎನ್ನುವುದು ತಿಳಿಯಬೇಕಿದೆ. ವ್ಯಾಪಾರಕ್ಕಾಗಿ ಪಟ್ಟಣ ತುಂಬೆಲ್ಲಾ ಬಿಹಾರಿಗಳು ಓಡಾಡಿದ್ದರಿಂದ ಸಹಜವಾಗಿ ಜನರು ಭಯಬೀತರಾಗಿದ್ದಾರೆ.

ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಮೈಸೂರಿನಲ್ಲಿ ಮತ್ತಷ್ಟು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಹಾಗೂ ಸರ್ಕಾರ ಮುಂದಾಗಿದೆ. ಹೀಗಾಗಿ, ಕರ್ಫ್ಯೂ ಸಮಯವನ್ನು ಬದಲಾಯಿಸಲು ನಿರ್ಧಾರ ಮಾಡಲಾಗಿದೆ. ಶುಕ್ರವಾರದಿಂದ ಮೈಸೂರಿನಲ್ಲಿ ಸಂಜೆ 6 ಗಂಟೆಗೆ ಎಲ್ಲಾ ಬಂದ್ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. . ಶುಕ್ರವಾರದಿಂದ ಮೈಸೂರಿನಲ್ಲಿ ಸಂಜೆ ಆರು ಗಂಟೆಯಿಂದ ಬೆಳಗ್ಗೆ ಆರು ಗಂಟೆವರೆಗೂ ಕರ್ಫ್ಯೂ ಜಾರಿಯಲ್ಲಿರಲಿದೆ.












Click it and Unblock the Notifications