ಈ ಅಶಿಕ್ಷ 'ಶಿಕ್ಷಕ'ನನ್ನು ಜನರು ಅದ್ಹೇಗೆ ಆರಿಸಿದರೋ?
ಹಿಂದೊಮ್ಮೆ ಮಹಾರಾಷ್ಟ್ರ ಸದನದಲ್ಲಿ ಚಪಾತಿ ಗುಣಮಟ್ಟ ಉತ್ತಮಮಟ್ಟದಲ್ಲಿ ಇಲ್ಲವೆಂದು, ರಂಜಾನ್ ಸಮಯದಲ್ಲಿ ಉಪವಾಸ ಮಾಡುತ್ತಿದ್ದ ಮುಸ್ಲಿಂ ಯುವಕನೊಬ್ಬನ ಗಂಟಲಿಗೆ ಆ ಚಪಾತಿಯನ್ನು ತುರುಕಿ ರಾದ್ಧಾಂತ ಎಬ್ಬಿಸಿದ್ದರು ರವೀಂದ್ರ ಗಾಯಕ್ವಾಡ್.
ಮುಂಬೈ, ಮಾರ್ಚ್ 25 : ಏರ್ ಇಂಡಿಯಾದ ಹಿರಿಯ ಉದ್ಯೋಗಿಗೆ ಚಪ್ಪಲಿಯಿಂದ ಹೊಡೆದು ರಾದ್ಧಾಂತ ಮಾಡಿಯೂ ಕ್ಷಮೆ ಕೇಳಲು ನಿರಾಕರಿಸುತ್ತಿರುವ ರವೀಂದ್ರ ಗಾಯಕ್ವಾಡ್ ಅವರು ರಾಜಕೀಯಕ್ಕೆ ಧುಮುಕುವ ಮುನ್ನ ಶಿಕ್ಷಕರಾಗಿದ್ದರು.
ಹೌದು, ಮಹಾರಾಷ್ಟ್ರದ ಓಸ್ಮಾನಾಬಾದ್ ಜಿಲ್ಲೆಯ ಉಮರ್ಗಾ ವಿಧಾನಸಭೆ ಕ್ಷೇತ್ರದಿಂದ 2 ಬಾರಿ ಮತ್ತು ಓಸ್ಮಾನಾಬಾದ್ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗುವ ಮುನ್ನ ಶಿವಸೇನೆಯ ನಾಯಕ ರವೀಂದ್ರ ಗಾಯಕ್ವಾಡ್ ಅವರು ಕ್ಷೇತ್ರದ ಜನರಿಗೆ 'ರವಿ ಸರ್!'[ಚಪ್ಪಲಿಯೇಟು ಪ್ರಕರಣ: ಸಂಸದ ರವೀಂದ್ರ ಬೆಂಬಲಕ್ಕೆ ನಿಂತ ಶಿವಸೇನೆ]

ಸ್ಥಳೀಯ ಕಾಲೇಜೊಂದರಲ್ಲಿ ವಾಣಿಜ್ಯ ವಿಷಯ ಕಲಿಸುತ್ತಿದ್ದ ರವೀಂದ್ರ ಗಾಯಕ್ವಾಡ್ ಈಗ ಏರ್ ಇಂಡಿಯಾ ಉದ್ಯೋಗಿಗೆ 40 ಬಾರಿ ಬಾರಿಸಿ ಸುದ್ದಿಯ ಕೇಂದ್ರಬಿಂದುವಾಗಿದ್ದರೂ ಅವರನ್ನು ಪಕ್ಷದಿಂದ ಕಿತ್ತುಹಾಕುವ ಮನಸು ಶಿವಸೇನೆ ಮಾಡಿಲ್ಲ. ಬದಲಿಗೆ ಅವರನ್ನು ಬೆಂಬಲಿಸುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಅವರು ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ ಪದ್ಮಸಿನ್ಹ್ ಪಾಟೀಲ್ ಅವರನ್ನು 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಹೀರೋ ಆಗಿ ಮೆರೆದಾಡಿದ್ದರು. ಅವರಿಗೆ ಹಿಂಸಾತ್ಮಕ ಹಿನ್ನೆಲೆ ಇದ್ದರೂ ಅವರನ್ನು ಮತದಾರರು ಆರಿಸುತ್ತಲೇ ಇದ್ದಾರೆ.
ತಮಗೆ ಬಿಸಿನೆಸ್ ಕ್ಲಾಸ್ ಸೀಟ್ ಸಿಗಲಿಲ್ಲವೆಂದು ಏರ್ ಇಂಡಿಯಾ ಸಿಬ್ಬಂದಿಯೊಂದಿಗೆ ಜಗಳವಾಡಿ, ಅಶ್ಲೀಲ ಮಾತುಗಳನ್ನಾಡಿ, ಚಪ್ಪಲಿಯಿಂದ ಹೊಡೆದು ಅಸಭ್ಯವಾಗಿ ವರ್ತಿಸಿ ತೀವ್ರ ಟೀಕೆಗೊಳಗಾಗಿದ್ದಾರೆ. ಅವರ ಮೇಲೆ ಏನಿಲ್ಲವೆಂದರೂ 8 ಕೇಸುಗಳನ್ನು ದಾಖಲಿಸಲಾಗಿದೆ.
ಹಿಂದೊಮ್ಮೆ ಮಹಾರಾಷ್ಟ್ರ ಸದನದಲ್ಲಿ ಚಪಾತಿ ಗುಣಮಟ್ಟ ಉತ್ತಮಮಟ್ಟದಲ್ಲಿ ಇಲ್ಲವೆಂದು, ರಂಜಾನ್ ಸಮಯದಲ್ಲಿ ಉಪವಾಸ ಮಾಡುತ್ತಿದ್ದ ಮುಸ್ಲಿಂ ಯುವಕನೊಬ್ಬನ ಗಂಟಲಿಗೆ ಆ ಚಪಾತಿಯನ್ನು ತುರುಕಿ ರಾದ್ಧಾಂತ ಎಬ್ಬಿಸಿದ್ದರು ರವೀಂದ್ರ ಗಾಯಕ್ವಾಡ್.
ರವೀಂದ್ರ ಅವರ ಅಸಭ್ಯ ನಡತೆಯಿಂದ ರೊಚ್ಚಿಗೆದ್ದಿರುವ ಹಲವಾರು ವಿಮಾನಯಾನ ಸಂಸ್ಥೆಗಳು ಅವರು ವಿಮಾನ ಹತ್ತದಂತೆ ಅವರನ್ನು ನಿಷೇಧಿಸಿವೆ. ಇಂಡಿಯನ್ ಏರ್ ಲೈನ್ಸ್, ಸ್ಪೈಸ್ ಜೆಟ್, ಜೆಟ್ ಏರ್ವೇಸ್, ಇಂಡಿಗೋ ಸಂಸ್ಥೆಗಳನ್ನು ಅವರನ್ನು ಬ್ಯಾನ್ ಮಾಡಿವೆ. ಈಕಾರಣದಿಂದಾಗಿ ನಿನ್ನೆ ಅವರು ವಿಮಾನದ ಬದಲಾಗಿ ರೈಲಿನಲ್ಲಿ ಮುಂಬೈ ತಲುಪಿದ್ದರು.
ಅವರ ವಿರುದ್ಧ ಉದ್ದೇಶರಹಿತ ಕೊಲೆ ಮೊಕದ್ದಮೆ, ಸರಕಾರಿ ಉದ್ಯೋಗಿಯನ್ನು ಕರ್ತವ್ಯ ನಿರ್ವಹಿಸದಂತೆ ತಡೆದ ಕೇಸ್ ಜಡಿಯಲಾಗಿದೆ. ತಾನಂದುಕೊಂಡಂತೆ ಕೆಲಸವಾಗದಿದ್ದರೆ ಎಂಥ ಕೆಲಸಕ್ಕೂ ಹಿಂದೆಮುಂದೆ ನೋಡುವುದಿಲ್ಲ ಎಂಬ ಆರೋಪ ಅವರ ಮೇಲಿದೆ. ಇಂಥ ಹಿನ್ನೆಲೆಯಿರುವ 'ರೌಡಿ' ರಾಜಕಾರಣಿಯನ್ನು ಕ್ಷೇತ್ರದ ಜನರು ಮೂರು ಬಾರಿ ಗೆಲ್ಲಿಸಿದ್ದು ಹೇಗೆ?
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications