ಗಾಯಕ ಅರ್ಜಿತ್ ಸಿಂಗ್ ಗೆ ರವಿ ಪೂಜಾರಿಯಿಂದ ಬೆದರಿಕೆ!
ಮುಂಬೈ, ಆಗಸ್ಟ್ 18: ಆಶೀಕಿ 2 ಖ್ಯಾತಿಯ ಗಾಯಕ ಅರ್ಜಿತ್ ಸಿಂಗ್ ಅವರಿಗೆ ಭೂಗತ ಪಾತಕಿ ರವಿ ಪೂಜಾರಿ ಕಡೆಯಿಂದ ಬೆದರಿಕೆ ಕರೆ ಬಂದಿದೆ. ಭಾರಿ ಮೊತ್ತದ ಹಣ ನೀಡುವಂತೆ ಬೆದರಿಕೆ ಒಡ್ಡಿದರು ಎಂದು ಅರ್ಜಿತ್ ಹೇಳಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ರವಿ ಪೂಜಾರಿ ಗ್ಯಾಂಗಿನಿಂದ ಸುಮಾರು 5 ಕೋಟಿ ರು ಮೊತ್ತದ ಬೇಡಿಕೆ ಬಂದಿದೆ. ಅದರೆ, ಅರ್ಜಿತ್ ಅವರು ಮೊತ್ತದ ಬಗ್ಗೆ ಮಾಧ್ಯಮಗಳ ಮುಂದೆ ಏನೂ ಹೇಳಿಲ್ಲ.
'ನಾನು ಸಾಮಾನ್ಯವಾಗಿ ಯಾವುದೇ ಅನಾಮಿಕ ನಂಬರ್ ನಿಂದ ಬರುವ ಕರೆಗಳನ್ನು ಸ್ವೀಕರಿಸುವುದಿಲ್ಲ. ಅದರೆ, ನನ್ನ ಫೋನ್ ಸ್ವಿಚ್ ಆಫ್ ಆಗಿತ್ತು. ಚಾರ್ಜ್ ಮಾಡಿ ಮತ್ತೆ ಆನ್ ಮಾಡಿದಾಗ ತಕ್ಷಣ ಕರೆ ಬಂತು. ನಂಬರ್ ನೋಡದೆ ಕರೆ ಸ್ವೀಕರಿಸಿದೆ. ರವಿ ಪೂಜಾರಿ ಮಾತನಾಡುತ್ತಾರೆ ಎಂದು ಒಂದು ಧ್ವನಿ ಹೇಳಿತು. ನಂತರ ಕಾನ್ಫರೆನ್ಸ್ ಕಾಲ್ ನಲ್ಲಿ ರವಿ ಪೂಜಾರಿ ಮಾತನಾಡಿ, ಭಾರಿ ಮೊತ್ತದ ಹಣ ಡಿಮ್ಯಾಂಡ್ ಮಾಡಿದರು. [ರವಿ ಪೂಜಾರಿ ಗ್ಯಾಂಗ್ ಟಾರ್ಗೆಟ್ ಶಾರುಖ್ ಖಾನ್?]

ಅದರೆ, ಸಂಭಾಷಣೆ ವೇಳೆ ರವಿ ಪೂಜಾರಿ ನಾರ್ಮಲ್ ಆಗೇ ಮಾತನಾಡಿದರು. ನನಗಾಗಿ ಹಾಡು ಹಾಡ್ತೀರಾ ಎಂದು ಕೇಳಿದರು. ಟಚ್ ನಲ್ಲಿರುವಂತೆ ಹೇಳಿದರು. ಆದರೆ, ಅವರ ಗ್ಯಾಂಗಿನವರು ಭಾರಿ ಮೊತ್ತದ ಡಿಮ್ಯಾಂಡ್ ಇಟ್ಟರು ಎಂದು ಅರ್ಜಿತ್ ವಿವರಿಸಿದ್ದಾರೆ.[ಎಲ್ಲರಂತಲ್ಲದ ಮೋಹಕ ಗಾಯಕ ಅರ್ಜಿತ್ ಸಿಂಗ್]
ನನಗೆ ಈ ಕರೆ ಬಂದ ಮೇಲೆ ಪೊಲೀಸ್ ರಕ್ಷಣೆ ಬೇಕು ಎಂದೆನಿಸಲಿಲ್ಲ. ಹೀಗಾಗಿ ನಾನು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ಮಾಧ್ಯಮದವರು ಕೂಡಾ ನನ್ನ ಬಗ್ಗೆ ಚಿಂತೆ ಬಿಟ್ಟು, ಬೇರೆ ಉತ್ತಮ ಸುದ್ದಿಗಳತ್ತ ಗಮನಹರಿಸಿದರೆ ಒಳ್ಳೆಯದು ಎಂದು ಅರ್ಜಿತ್ ಟ್ವೀಟ್ ಮಾಡಿದ್ದಾರೆ.
It's a humble request to media to stop bothering me about news. There are other important things happening in India.
— arijit singh (@raiisonai) August 17, 2015 ಆದರೆ, ಅರ್ಜಿತ್ ಅವರ ಮ್ಯಾನೇಜರ್ ಈ ಘಟನೆ ಬಗ್ಗೆ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅರ್ಜಿತ್ ಬಳಿ ಎಷ್ಟು ಹಣ ಇಲ್ಲ ಎಂದು ತಿಳಿದ ಮೇಲೆ ಗ್ಯಾಂಗ್ ಗಾಗಿ ಮ್ಯೂಸಿಕ್ ಶೋ ನಡೆಸಿಕೊಡುವಂತೆ ರವಿ ಪೂಜಾರಿ ಕೇಳಿಕೊಂಡಿದ್ದಾರೆ ಎಂದು ಅರ್ಜಿತ್ ಸಿಂಗ್ ಅವರ ಮ್ಯಾನೇಜರ್ ದೂರಿನಲ್ಲಿ ಹೇಳಿದ್ದಾರೆ. (ಐಎಎನ್ ಎಸ್)
-
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price












Click it and Unblock the Notifications