'ಠಾಕ್ರೆ ಸಿನಿಮಾ ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ'
ಮುಂಬೈ, ಡಿಸೆಂಬರ್ 28: ಶಿವಸೇನಾ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಜೀವನ ಆಧಾರಿತ 'ಠಾಕ್ರೆ' ಸಿನಿಮಾದ ಟ್ರೇಲರ್ ವಿವಾದ ಹುಟ್ಟು ಹಾಕಿದೆ.
ಈ ಟ್ರೇಲರ್ ನಲ್ಲಿ ಕಂಡು ಬರುವ ಹಿಂಸಾಚಾರ, ದ್ವೇಷಪೂರಿತ ಭಾಷಣದಿಂದ ಚಿತ್ರದ ಬಿಡುಗಡೆಗೆ ಪ್ರತಿರೋಧ ಕಂಡು ಬರುವ ಸಾಧ್ಯತೆ ಹೆಚ್ಚಿದೆ ಎಂಬ ವರದಿಗಳಿವೆ.

ಈ ಬಗ್ಗೆ ಮಾತನಾಡಿದ ಶಿವಸೇನಾ ಮುಖಂಡ ಹಾಗೂ ಬಾಳಾ ಠಾಕ್ರೆ ಚಿತ್ರಕ್ಕೆ ಕಥೆ ಒದಗಿಸಿರುವ ಸಂಜಯ್ ರಾತ್ ಅವರು,'ಈ ಚಿತ್ರವನ್ನು ಯಾರೊಬ್ಬರೂ ನಿಷೇಧಿಸಲು ಸಾಧ್ಯವಿಲ್ಲ. ಸೆನ್ಸಾರ್ ಮಂಡಳಿ ಆಕ್ಷೇಪಗಳನ್ನು ಪರಿಹರಿಸಲಾಗುವುದು, ಇದು ಶಿವಸೇನಾ ಸ್ಥಾಪಕ ಠಾಕ್ರೆ ಅವರ ದೂರದೃಷ್ಟಿತ್ವವನ್ನು ಸಾರುವ ಚಿತ್ರವಾಗಿದೆ ಎಂದಿದ್ದಾರೆ.
ಈ ಚಿತ್ರದಲ್ಲಿ ಯಾವುದೇ ವೈಭವೀಕರಣ ದೃಶ್ಯಗಳಿಲ್ಲ, ಇಲ್ಲಿ ಬರುವ ದೃಶ್ಯ, ಭಾಷಣಗಳು ಈ ಹಿಂದೆ ನಡೆದ ನೈಜ ಘಟನೆಗಳನ್ನು ಆಧಾರಿಸಿದ್ದಾಗಿದೆ. ಬಾಳಾ ಸಾಹೇಬ್ ತಮ್ಮ ಜೀವತ ಅವಧಿಯಲ್ಲಿ ಅನೇಕರ ಮೇಲೆ ನಿಷೇಧ ಹೇರಿದ್ದರು, ಅದನ್ನು ಮರೆಯಲು ಸಾದ್ಯವೇ? ಠಾಕ್ರೆ ಜೀವನದ ಬಗ್ಗೆ ನಿರ್ಧರಿಸಲು ಸಿಬಿಎಫ್ ಸಿಗೆ ಏನು ಹಕ್ಕಿದೆ? ಎಂದು ಪ್ರಶ್ನಿಸಿದ್ದಾರೆ.
ಏನಿದು ವಿವಾದ: ರಾಷ್ಟ್ರ ಪ್ರಶಸ್ತಿ ವಿಜೇತ ನವಾಜುದ್ದೀನ್ ಸಿದ್ದಿಕಿ ಅವರು ಪ್ರಧಾನ ಪಾತ್ರದಲ್ಲಿ ನಡೆಸಿರುವ ಚಿತ್ರದಲ್ಲಿ ಅನೇಕ ದೃಶ್ಯಗಳು ವಿವಾದಕ್ಕೆ ನಾಂದಿ ಹಾಡಿವೆ. ಬಾಬ್ರಿ ಮಸೀದಿ ಧ್ವಂಸ, 1992ರಲ್ಲಿ ಹಿಂದೂ- ಮುಸ್ಲಿಂ ಗಲಭೆ, ಭಾರತ- ಪಾಕಿಸ್ತಾನ ಸಂಬಂಧದ ಬಗ್ಗೆ ಅಂದಿನ ರಾಜಕಾರಣಿಗಳ ಹೇಳಿಕೆಗಳು ಎಲ್ಲವೂ ಚಿತ್ರದಲ್ಲಿದೆ.
ಜನವರಿ 25, 2019ಕ್ಕೆ ಹಿಂದಿ ಹಾಗೂ ಮರಾಠಿ ಭಾಷೆಯಲ್ಲಿ ಚಿತ್ರವು ತೆರೆಗೆ ಬರಲಿದೆ. ಚಿತ್ರದಲ್ಲಿ ಠಾಕ್ರೆ ಪಾತ್ರಧಾರಿ ಸಿದ್ದಿಕಿ ಮಿಂಚಿದ್ದಾರೆ.
ಆದರೆ, ಚಿತ್ರದ ಡೈಲಾಗ್ ಗಳು ಮರಾಠಿಗರು ಹಾಗೂ ದೇಶದ ಇತರೆ ಭಾಷಿಗರ ವಿರುದ್ಧ ದ್ವೇಷಪೂರಿತ ವಾತಾವರಣ ಸೃಷ್ಟಿಸಲಿದೆ. ದಕ್ಷಿಣ ಭಾರತೀಯರ ಬಗ್ಗೆ ಬಂದಿರುವ ಹೇಳಿಕೆಗಳು ಸರಿಯಿಲ್ಲ ಎಂದು ನಟ ಸಿದ್ದಾರ್ಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications