ರಾಜ್ ದೀಪ್ ಸರ್ದೇಸಾಯಿ ಟ್ವಿಟ್ಟರ್ ಬಿಟ್ರರಂತೆ, ಹೌದೆ? ಯಾಕೆ?
ನವದೆಹಲಿ, ಮೇ 01: ದೇಶದ ಸೆಲೆಬ್ರಿಟಿ ಮಾಧ್ಯಮ ಪ್ರತಿನಿಧಿ, ಸಂಪಾದಕರ ಪೈಕಿ ಒಬ್ಬರೆನಿಸಿಕೊಂಡಿರುವ ಇಂಡಿಯಾ ಟುಡೇ ಸಂಪಾದಕ ರಾಜ್ ದೀಪ್ ಸರ್ದೇಸಾಯಿ ಅವರು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ತೊರೆದಿದ್ದಾರೆ.
ರಾಜ್ ದೀಪ್ ಸರ್ದೇಸಾಯಿ ಟ್ವಿಟ್ಟರ್ ಬಿಡಲು ಕಾರಣವೇನು? ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆಯೇ? ರಾಜ್ ದೀಪ್ ಅವರು ನಿಜಕ್ಕೂ ಮೋದಿ ಭಕ್ತರಿಗೆ ಡೈರೆಕ್ಟ್ ಮೆಸೇಜ್ ಮೂಲಕ ನಿಂದಿಸುತ್ತಿದ್ದಾರೆಯೇ? ರಾಜ್ ದೀಪ್ ಅವರು ಅಗಸ್ಟಾ ವೆಸ್ಟ್ ಲ್ಯಾಂಡ್ ಡೀಲ್ ಫಲಾನುಭವಿಯೇ? ಎಂಬ ಅನೇಕ ಪ್ರಶ್ನೆಗಳು ಹರಿದಾಡುತ್ತಿವೆ. [ರಾಜದೀಪ್ ಸರ್ದೇಸಾಯಿ ಮೇಲೆ ಹಲ್ಲೆ, ಟ್ವಿಟ್ಟರ್ ನಲ್ಲಿ ಗುಲ್ಲು!]
ಜನವರಿ 16ರಂದು ಮೋದಿ ಪರ ಟ್ವೀಟ್ ಮಾಡುವ ಅವರ ಭಕ್ತರು ಬಳಸುವ ಭಾಷೆ ಬಗ್ಗೆ ಸರ್ದೇಸಾಯಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಅದೇ ರೀತಿ ಕೆಟ್ಟ ಭಾಷೆ ಬಳಕೆ ಪ್ರತಿಕ್ರಿಯೆ ಸಂದೇಶ ರಾಜ್ ದೀಪ್ ರಿಂದ ಸಿಗುತ್ತಿದೆ ಎಂದು ಸಾರ್ವಜನಿಕರು ತಮ್ಮ ಡೈರೆಕ್ಟ್ ಮೆಸೇಜ್ ಸ್ಕ್ರೀನ್ ಶಾಟ್ಸ್ ಹಾಕುತ್ತಿದ್ದಾರೆ.
ರಾಜ್ ದೀಪ್ ಸರ್ದೇಸಾಯಿ ನಂತರ ಅವರ ಪತ್ನಿ ಸಾಗರಿಕಾ ಘೋಶ್, ಎನ್ಡಿಟಿವಿಯ ಬರ್ಖಾದತ್ ಅವರ ಮೇಲೂ ಯುಪಿಎ ಪರ ನಿಲುವು ಹೊಂದಿದ್ದೀರಿ ಎಂದು ಆರೋಪಿಸಿ ಟ್ವೀಟ್ ಮಾಡಲಾಗುತ್ತಿದೆ.

ರಾಜ್ ದೀಪ್ ಸರ್ದೇಸಾಯಿ ಹ್ಯಾಕ್ ಆಗಿದ್ದು ನಿಜವೇ?
ರಾಜ್ ದೀಪ್ ಸರ್ದೇಸಾಯಿ ಈ ಹಿಂದೆ ಕೂಡಾ ಸಾರ್ವಜನಿಕರೊಡನೆ ನೇರಾ ನೇರ ಮಾತಿನ ಚಕಮಕಿಗೆ ಇಳಿದ ಘಟನೆ ನಡೆದಿದೆ. ಟ್ವಿಟ್ಟರ್ ನಿಂದ ಅವರು ಹೊರಕ್ಕೆ ಹೋಗಿದ್ದರೆ ಇದರಲ್ಲಿ ಅಚ್ಚರಿ ಏನಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
|
ಅಗಸ್ಟಾ ವೆಸ್ಟ್ ಲ್ಯಾಂಡ್ ಫಲಾನುಭವಿಯಾಗಿದ್ದಾರೆ
ಬಹುಕೋಟಿ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟತ್ ಹಗರಣದ ಫಲಾನುಭವಿಯಾಗಿದ್ದಾರೆ, ಹೀಗಾಗಿ ಸಾರ್ವಜನಿಕ ಮುಂದೆ ಉತ್ತರ ಕೊಡಲಾಗದೆ ಮರೆಯಾಗಿದ್ದಾರೆ ಎಂಬ ಟ್ವೀಟ್ ಗಳು ಬಂದಿವೆ.
|
ಬರ್ಖಾ ದತ್ ಕೂಡಾ ಜನರ ಟಾರ್ಗೆಟ್
ರಾಜ್ ದೀಪ್ ಸರ್ದೇಸಾಯಿ ನಂತರ ಪತ್ರಕರ್ತೆ ಬರ್ಖಾ ದತ್ ಕೂಡಾ ಜನರ ಟಾರ್ಗೆಟ್ ಆಗಿದ್ದಾರೆ.

ಟ್ವಿಟ್ಟರ್ ಹ್ಯಾಕ್ ಆಗಿದ ಬಳಿಕ ರಾಜ್ ದೀಪ್ ಟ್ವೀಟ್
ಟ್ವಿಟ್ಟರ್ ಹ್ಯಾಕ್ ಆಗಿದ ಬಳಿಕವೂ ರಾಜ್ ದೀಪ್ ಟ್ವೀಟ್ ಮಾಡಿದ್ದು ಹೇಗೆ? ಅಕೌಂಟ್ ನಿಷ್ಕ್ರಿಯವಾಗಿ ಬರೀ ನೇರ ಸಂದೇಶ ಮಾತ್ರ ಕಳಿಸಲು ಸಾಧ್ಯವೇ? ಎಂಬ ಪ್ರಶ್ನೆಗಳು ಉಳಿದಿವೆ. ಆದರೆ, ಅಕೌಂಟ್ ನಿಷ್ಕ್ರಿಯಗೊಳಿಸುವ ಬಗ್ಗೆ ರಾಜ್ ದೀಪ್ ಹೇಳಿದ್ದನ್ನು ಟ್ವೀಟ್ ನಲ್ಲಿ ಕಾಣಬಹುದು.

ಹ್ಯಾಕ್ ಆದ ಬಳಿಕ ಬಂದ ಮೆಸೇಜ್ ಗಳು
ಹ್ಯಾಕ್ ಆದ ಬಳಿಕ ಬಂದ ಮೆಸೇಜ್ ಗಳ ಸ್ಕ್ರೀನ್ ಶಾಟ್ ಗಳನ್ನು ಹಲವಾರು ಮಂದಿ ಹಾಕುತ್ತಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications