ಕೊರೊನಾ ರೋಗಿಗಳ ಸೇವೆಗೆ ಆಟೋ ಚಾಲಕನಾದ ಶಿಕ್ಷಕ; ವಿವಿಎಸ್ ಲಕ್ಷ್ಮಣ್ ಟ್ವೀಟ್
ಮುಂಬೈ, ಮೇ 4: ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇದ್ದು, ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಅವಶ್ಯಕತೆ ಇದ್ದವರಿಗೆ ನೆರವಾಗಲು ಹಲವರು ಮುಂದೆ ಬರುತ್ತಿದ್ದಾರೆ. ಇದೀಗ ಮುಂಬೈನಲ್ಲಿಯೂ ಶಿಕ್ಷಕರೊಬ್ಬರು ಕೊರೊನಾ ರೋಗಿಗಳಿಗೆ ನೆರವಾಗಲು ಮುಂದಾಗಿದ್ದಾರೆ.
ಕೊರೊನಾ ರೋಗಿಗಳಿಗೆ ಆಟೋ ಸೇವೆಯನ್ನು ಉಚಿತವಾಗಿ ಒದಗಿಸುತ್ತಿದ್ದಾರೆ. ಇಂಗ್ಲಿಷ್ ಶಿಕ್ಷಕರಾಗಿರುವ ದತ್ತಾತ್ರೇಯ ಸಾವಂತ್ ಎಂಬುವರು ತಾವೇ ಆಟೋ ಓಡಿಸಿ ಕೊರೊನಾ ರೋಗಿಗಳಿಗೆ ನೆರವಾಗುತ್ತಿದ್ದಾರೆ.
ಎಚ್ಚರಿಕೆ ಗಂಟೆ: ಬೆಂಗಳೂರಿನ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಖಾಲಿ ಖಾಲಿ!
ಇವರ ಫೋಟೊವನ್ನು ಭಾರತೀಯ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷ್ಮಣ್ ಹಂಚಿಕೊಂಡಿದ್ದು, ಶಿಕ್ಷಕರ ಸೇವೆಯನ್ನು ಕೊಂಡಾಡಿದ್ದಾರೆ.
ಶಿಕ್ಷಕರೂ ಆಗಿರುವ ದತ್ತಾತ್ರೇಯ ಸಾವಂತ್ ಅವರು ಕೊರೊನಾ ರೋಗಿಗಳಿಗಾಗಿ ಉಚಿತ ಸೇವೆ ನೀಡುತ್ತಿದ್ದಾರೆ. ಈ ಸೇವೆಗೆ ಹ್ಯಾಟ್ಸ್ ಆಫ್ ಎಂದು ಟ್ವಿಟ್ಟರ್ನಲ್ಲಿ ಹೊಗಳಿದ್ದಾರೆ.
"ನಾನು ಕೊರೊನಾ ರೋಗಿಗಳನ್ನು ಉಚಿತವಾಗಿ ಕೋವಿಡ್ ಕೇರ್ ಹಾಗೂ ಆಸ್ಪತ್ರೆಗಳಿಗೆ ಬಿಡುತ್ತೇನೆ. ಹಾಗೆಯೇ ಆಸ್ಪತ್ರೆಯಿಂದ ಮನೆಗಳಿಗೆ ಕರೆದುಕೊಂಡು ಹೋಗುತ್ತೇನೆ. ಇದುವರೆಗೂ 26 ರೋಗಿಗಳಿಗೆ ಈ ರೀತಿಯ ಸೇವೆ ನೀಡಿದ್ದೇನೆ" ಎಂದು ಸಾವಂತ್ ಅವರು ಹೇಳಿಕೊಂಡಿದ್ದಾರೆ.
Dattatraya Sawant, a school teacher by profession and a part-time autorickshaw driver, gives free rickshaw rides to COVID patients
— VVS Laxman (@VVSLaxman281) May 1, 2021
He picks up and drops patients from hospital without charging them. Hats off to his noble initiative.
Pray that we overcome this soon🙏🏼 pic.twitter.com/fieGYvWQCu
ನಗರದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಕೆಲವರು ಸಾಯುತ್ತಿದ್ದಾರೆ. ಖಾಸಗಿ ಆಂಬುಲೆನ್ಸ್ಗಳು ಕೆಲವು ಬಡವರಿಗೆ ಕೈಗೆಟುಕದಂತಿವೆ. ಹೀಗಾಗಿ ಈ ಆಟೊ ಸೇವೆ ನೀಡಲು ಆರಂಭಿಸಿದೆ ಎಂದು ಹೇಳಿದ್ದಾರೆ ಅವರು.
Recommended Video
ಕೊರೊನಾ ಪ್ರಕರಣಗಳು ಕಡಿಮೆಯಾಗುವವರೆಗೂ ಈ ಸೇವೆ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಹಲವರು ಸಾವಂತ್ ಅವರಿಗೆ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಈತನ ಆಟೋಗೆ ಇಂಧನ ಒದಗಿಸುವುದಾಗಿ ತಿಳಿಸಿದೆ.