ಮುಂಬೈನ ಮೊದಲ ಪ್ರನಾಳ ಶಿಶು ತಾಯಿಯಾದ ಕ್ಷಣ
ಮುಂಬೈ, ಮಾರ್ಚ್ 08: ವಿಶ್ವ ಮಹಿಳಾ ದಿನಾಚರಣೆಗೂ ಮುನ್ನ ದಿನ ಮುಂಬೈನ ಮೊದಲ ಪ್ರನಾಳ ಶಿಶು ಹರ್ಷಾ ಚಾವ್ಡ ಅವರು ಪರಿಪೂರ್ಣ ಮಹಿಳೆಯಾಗಿ ಅರ್ಥಾತ್ ತಾಯ್ತನ ಪಡೆದುಕೊಂಡಿದ್ದಾರೆ. ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
1986ರ ಆಗಸ್ಟ್ ತಿಂಗಳಿನಲ್ಲಿ ಪ್ರನಾಳ ಶಿಶುವಾಗಿ ಕಣ್ಬಿಟ್ಟಿದ್ದ ಹರ್ಷಾ ಅವರು ಸೋಮವಾರ (ಮಾರ್ಚ್ 07) ಮುಂಬೈಯ ಜಸ್ಲೋಕ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.[ಐವಿಎಫ್ ಅನುಗ್ರಹ: ನಟಿ ತಾರಾ ಅನುರಾಧಾ ಈಗ ತಾಯಿ]
ಡಾ. ಇಂದಿರಾ ಹಿಂದೂಜ ಮತ್ತು ಡಾ ಕುಸುಮ್ ಜವೇರಿ ಅವರ ಸಹಾಯದಿಂದ ಈ ಸಿಸೇರಿಯನ್ ನಡೆಸಲಾಯಿತು. ಐವಿಎಫ್ (IVF ಎಂದರೆ ಏನು?) ಮೂಲಕ ಜನಿಸಿದ (ಪ್ರಣಾಳ ಶಿಶು) ಮಗು ಮುಂದೆ ಬೆಳೆದು ದೊಡ್ಡವಳಾಗಿ ಮಗುವಿಗೆ ಜನ್ಮ ನೀಡಲು ಸಾಧ್ಯವೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. [ವೈದ್ಯಕೀಯ ಪವಾಡ... ಈ ಪುರುಷ 2 ಮಕ್ಕಳ ತಾಯಿ!]

ಪ್ರನಾಳ ಶಿಶು ಕೂಡಾ ಸಾಧಾರಣ ಮಗುವಿನಂತೆ ಬೆಳೆದು ಮಗುವಿಗೆ ಜನ್ಮ ನೀಡಬಲ್ಲುದು ಎಂಬುದಕ್ಕೆ ಹರ್ಷಾ ಉದಾಹರಣೆ ಎಂದು ಐವಿಎಫ್ ತಜ್ಞರು ಹೇಳಿದ್ದಾರೆ. ಹರ್ಷಾ ಅವರ ಮಗು ಆರೋಗ್ಯವಾಗಿದ್ದು, 3.1 ಕೆಜಿಯಷ್ಟು ತೂಕ ಹೊಂದಿದೆ.[ಅಮೀರ್ ಖಾನ್ -ಕಿರಣ್ ದಂಪತಿಗೆ ವಿಶೇಷ ಗಂಡು ಮಗು]
'ನಾನು ದೇವರ ವರದಾನ ಎಂದರೆ ನನ್ನ ಮಗು ಕೂಡಾ ದೇವರು ಕೊಟ್ಟ ವರ' ಎಂದು ಹರ್ಷಾ ಅವರು ಟೈಮ್ಸ್ ಆಫ್ ಇಂಡಿಯಾಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
30yrs after she made history,
— Lilly Mary Pinto (@Lilly_M_Pinto) March 8, 2016
1st test-tube baby Harsha Chavda Shah delivers a child of her own. pic.twitter.com/VA3i2cHBwT
1978ರಲ್ಲಿ ಬ್ರಿಟನ್ನಿನಲ್ಲಿ ಜನಿಸಿದ ಲೂಸಿ ಬ್ರೌನ್ ಅವರು ಮೊದಲ ಟೆಸ್ಟ್ ಟ್ಯೂಬ್ ಬೇಬಿ ಎನಿಸಿದ್ದಾರೆ. in vitro fertilisation (ಐವಿಎಫ್) ತಂತ್ರಜ್ಞಾನ ಬಳಸಿಕೊಂಡು ಸರಿ ಸುಮಾರು 5 ಮಿಲಿಯನ್ ಗೂ ಅಧಿಕ ಶಿಶುಗಳನ್ನು ಪಡೆಯಲಾಗಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ ವಿಡಿಯೋ ನೋಡಿ:
(ಒನ್ಇಂಡಿಯಾ ಸುದ್ದಿ)
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications