ದೆಹಲಿಯಲ್ಲಿ ನರೇಂದ್ರ, ಮಹಾರಾಷ್ಟ್ರದಲ್ಲಿ ದೇವೇಂದ್ರ
ಮುಂಬೈ, ಅ.29: ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಹೊರ ಬೀಳುವ ಮುನ್ನವೇ ಒಂದು ಮಾತು ಚಾಲ್ತಿಯಲ್ಲಿತ್ತು. 'ದೆಹಲಿಯಲ್ಲಿ ನರೇಂದ್ರ, ಮಹಾರಾಷ್ಟ್ರದಲ್ಲಿ ದೇವೇಂದ್ರ' ಈಗ ಈ ಮಾತು ನಿಜವಾಗಿದೆ. ಆರೆಸ್ಸೆಸ್, ಮೋದಿ ಅಣತಿಯಂತೆ ದೇವೇಂದ್ರ ಅವರಿಗೆ ಮಹಾರಾಷ್ಟ್ರದ ಸಿಎಂ ಆಗುವ ಯೋಗ ಲಭಿಸಿದೆ.
ರಾಜಕೀಯ ಗುರು ನಿತಿನ್ ಗಡ್ಕರಿ ಅವರು ಸಿಎಂ ಕುರ್ಚಿಯನ್ನು ದೇವೇಂದ್ರ ಅವರಿಗೆ ಕೊಟ್ಟಿದ್ದಾರೆ. ನಾಗಪುರದ ಯುವ ನಾಯಕನಿಗೆ ಈಗ ದೇಶದ ವಾಣಿಜ್ಯ ನಗರಿ ಸೇರಿದಂತೆ ಮರಾಠಿಗರ ಹಿತ ಕಾಯುವ ಪ್ರಮುಖ ಜವಾಬ್ದಾರಿ ಸಿಕ್ಕಿದೆ. ಚುನಾವಣಾ ನೀತಿ ಉಲ್ಲಂಘನೆ, ಹಲ್ಲೆ ಪ್ರಕರಣಗಳನ್ನು ಬಿಟ್ಟರೆ ದೇವೇಂದ್ರ ಅವರದ್ದು ಕ್ಲೀನ್ ಇಮೇಜ್. [ಹರ್ಯಾಣ ಸಿಎಂ ಖಟ್ಟರ್ ವ್ಯಕ್ತಿಚಿತ್ರ ಓದಿ]
ಮಧ್ಯಮ ವರ್ಗದ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ(1970, ಜುಲೈ 22) ದೇವೇಂದ್ರ ಗಂಗಾಧರ ರಾವ್ ಫಡ್ನವೀಸ್ ಅವರು ಸತಾರಾ ಮೂಲದವರು. ಪೇಶ್ವೆಗಳ ಆಳ್ವಿಕೆ ಕಾಲದಲ್ಲಿ ಇವರ ಕುಟುಂಬಕ್ಕೆ ಗ್ರಾಮವೊಂದರ ಉಸ್ತುವಾರಿಕೆ ಲಭಿಸಿತ್ತು. ಈಗ ದೇವೇಂದ್ರ ಅವರಿಗೆ ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ಸಿಕ್ಕಿದೆ. ಛತ್ರಪತಿ ಶಿವಾಜಿ, ಬಿ.ಆರ್ ಅಂಬೇಡ್ಕರ್ ಅವರ ಸಿದ್ಧಾಂತದಂತೆ ರಾಜ್ಯಭಾರ ಮಾಡುವುದಾಗಿ ದೇವೇಂದ್ರ ಹೇಳಿದ್ದಾರೆ. ದೇವೇಂದ್ರ ಅವರ ಸಂಕ್ಷಿಪ್ತ ವ್ಯಕ್ತಿ ಚಿತ್ರ ಇಲ್ಲಿದೆ:

ಕುಟುಂಬ: ಪತ್ನಿ ಅಮೃತಾ ರಾನಡೆ, 2006ರಲ್ಲಿ ಮದುವೆ, ಆಕ್ಸಿಸ್ ಬ್ಯಾಂಕ್ ನಲ್ಲಿ ಉದ್ಯೋಗಿ, ಪುತ್ರಿ ದಿವಿಜಾ ಫಡ್ನವೀಸ್.
* ತಂದೆ ಗಂಗಾಧರ್ ರಾವ್ ಫಡ್ನವೀಸ್, ತಾಯಿ ಸವಿತಾ ಫಡ್ನವೀಸ್
ವಿದ್ಯಾಭ್ಯಾಸ : ಬಿ.ಎ (ಕಾನೂನು), ಎಲ್.ಎಲ್.ಬಿ
* ಬರ್ಲಿನ್ ನ ಜರ್ಮನ್ ಫೌಂಡೇಷನ್ ಫಾರ್ ಇಂಟರ್ ನ್ಯಾಷನಲ್ ಡೆವಲಪ್ ಮೆಂಟ್ ನಿಂದ ಬಿಸಿನೆಸ್ ಮ್ಯಾನೇಜ್ ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ನಲ್ಲಿ ಡಿಪ್ಲೋಮಾ
* ನಾಗಪುರ ವಿಶ್ವವಿದ್ಯಾಲಯದಿಂದ ಎಲ್ಎಲ್ ಬಿ
* ಬೋಸ್ ಪ್ರೈಜ್ ಇನ್ ಹಿಂದೂ ಲಾ ಗೌರವ.
ರಾಜಕೀಯ ಜೀವನ :
* 1986-89 ಎಬಿವಿಪಿಯಲ್ಲಿ ಕಾರ್ಯ ಇದಕ್ಕೂ ಮುನ್ನ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು.
* ವಾರ್ಡ್ ಅಧ್ಯಕ್ಷರಾಗಿ ಬಿಜೆಪಿಗೆ ಸೇರ್ಪಡೆ
* 1992 - ಎರಡು ಅವಧಿಗೆ ನಾಗಪುರದ ಯುವ ಕಾರ್ಪೊರೇಟರ್ ಆಗಿ ಆಯ್ಕೆ
* 1997 - 27ನೇ ವಯಸ್ಸಿಗೆ ನಾಗಪುರದ ಮೇಯರ್ ಆಗಿದ್ದರು.
* 1990 : ನಾಗಪುರದ ಪಶ್ಚಿಮ ಭಾಗದ ಬಿಜೆಪಿ ಸದಸ್ಯ
* 1992 : ನಾಗಪುರ ನಗರದ ಯುವಮೋರ್ಚಾ ಅಧ್ಯಕ್ಷ
* 1994 : ಯುವಮೋರ್ಚಾದ ರಾಜ್ಯ ಉಪಾಧ್ಯಕ್ಷ
* 2001 : ರಾಷ್ಟ್ರೀಯ ಯುವಮೋರ್ಚಾದ ಉಪಾಧ್ಯಕ್ಷ
* 2010 : ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ
* 2013 : ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ
ವಿಳಾಸ: #276, ರಾವ್ ಸಾಹೇಬ್ ಫಡ್ನವೀಸ್ ಪಾರ್ಕ್, ಧರ್ಮಂಪೇಠ್, ನಾಗಪುರ, 440 010
ವೆಬ್ ತಾಣ: http://www.devendrafadnavis.in
ಫೇಸ್ ಬುಕ್ : https://www.facebook.com/devendra.fadnavis
ಟ್ವಿಟ್ಟರ್ : https://twitter.com/Dev_Fadnavis
-
ಉಪಚುನಾವಣಾ ಅಖಾಡ ಸಜ್ಜು: ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಮತದಾನ; ಇಂದು ಮನೆ ಮನೆ ಮತಯಾಚನೆ -
Darshan: ನಟ ದರ್ಶನ್ ಕಾನೂನು ಹೋರಾಟಕ್ಕೆ ಗೆಲುವು: 'ಬಾಸ್' ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ -
Copra Price: ಇದೇ ಮೊಟ್ಟ ಮೊದಲ ಬಾರಿ ತಿಪಟೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ -
KSRTC ನೌಕರರ ಹಿಂಬಾಕಿ 1271 ರೂ ಬಿಡುಗಡೆ; ವೇತನ ಹೆಚ್ಚಳಕ್ಕೆ ಮುಹೂರ್ತ ಫಿಕ್ಸ್: ಏ.17ಕ್ಕೆ ನಿರ್ಣಾಯಕ ಸಭೆ -
ಕರ್ನಾಟಕ ದ್ವಿತೀಯ PUC ಫಲಿತಾಂಶಕ್ಕೆ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ: ಏಪ್ರಿಲ್ 8ಕ್ಕೂ ರಿಸಲ್ಟ್ ಬರೋದು ಡೌಟ್? -
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Divorce Celebration: ಡಿವೋರ್ಸ್ ಪಡೆದ ಮಗಳಿಗೆ ಸಿಹಿ ತಿನ್ನಿಸಿ ಅದ್ದೂರಿ ಸ್ವಾಗತ: ತಂದೆಯ ಸಂಭ್ರಮಾಚರಣೆ ವಿಡಿಯೋ ವೈರಲ್ -
Gold Rate April 7: ಚಿನ್ನ - ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ -
Viral Video: ಆರ್ಸಿಬಿ Vs ಸಿಎಸ್ಕೆ ಪಂದ್ಯ; ಕರ್ನಾಟಕ Vs ತಮಿಳುನಾಡು ಮಾಡಬೇಡಿ ಎಂದ ಸಿಎಸ್ಕೆ ಫ್ಯಾನ್ -
Viral Video: ನಾಳೆಯೇ ನಿಮ್ಮ ಕೆಲಸ ಹೋದರೆ ಏನು ಮಾಡುವಿರಿ? ಮಾಜಿ ಗೂಗಲ್ ಉದ್ಯೋಗಿಯ ಪ್ರಶ್ನೆಗೆ ದಂಗಾದ ನೆಟ್ಟಿಗರು -
Karnataka Rain Updates: ಚಂಡಮಾರುತ ಪ್ರಸರಣ ಪ್ರಭಾವ: ಬೆಂಗಳೂರು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ 3ದಿನ ಮಳೆ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ












Click it and Unblock the Notifications