ದೆಹಲಿಯಲ್ಲಿ ನರೇಂದ್ರ, ಮಹಾರಾಷ್ಟ್ರದಲ್ಲಿ ದೇವೇಂದ್ರ
ಮುಂಬೈ, ಅ.29: ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಹೊರ ಬೀಳುವ ಮುನ್ನವೇ ಒಂದು ಮಾತು ಚಾಲ್ತಿಯಲ್ಲಿತ್ತು. 'ದೆಹಲಿಯಲ್ಲಿ ನರೇಂದ್ರ, ಮಹಾರಾಷ್ಟ್ರದಲ್ಲಿ ದೇವೇಂದ್ರ' ಈಗ ಈ ಮಾತು ನಿಜವಾಗಿದೆ. ಆರೆಸ್ಸೆಸ್, ಮೋದಿ ಅಣತಿಯಂತೆ ದೇವೇಂದ್ರ ಅವರಿಗೆ ಮಹಾರಾಷ್ಟ್ರದ ಸಿಎಂ ಆಗುವ ಯೋಗ ಲಭಿಸಿದೆ.
ರಾಜಕೀಯ ಗುರು ನಿತಿನ್ ಗಡ್ಕರಿ ಅವರು ಸಿಎಂ ಕುರ್ಚಿಯನ್ನು ದೇವೇಂದ್ರ ಅವರಿಗೆ ಕೊಟ್ಟಿದ್ದಾರೆ. ನಾಗಪುರದ ಯುವ ನಾಯಕನಿಗೆ ಈಗ ದೇಶದ ವಾಣಿಜ್ಯ ನಗರಿ ಸೇರಿದಂತೆ ಮರಾಠಿಗರ ಹಿತ ಕಾಯುವ ಪ್ರಮುಖ ಜವಾಬ್ದಾರಿ ಸಿಕ್ಕಿದೆ. ಚುನಾವಣಾ ನೀತಿ ಉಲ್ಲಂಘನೆ, ಹಲ್ಲೆ ಪ್ರಕರಣಗಳನ್ನು ಬಿಟ್ಟರೆ ದೇವೇಂದ್ರ ಅವರದ್ದು ಕ್ಲೀನ್ ಇಮೇಜ್. [ಹರ್ಯಾಣ ಸಿಎಂ ಖಟ್ಟರ್ ವ್ಯಕ್ತಿಚಿತ್ರ ಓದಿ]
ಮಧ್ಯಮ ವರ್ಗದ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ(1970, ಜುಲೈ 22) ದೇವೇಂದ್ರ ಗಂಗಾಧರ ರಾವ್ ಫಡ್ನವೀಸ್ ಅವರು ಸತಾರಾ ಮೂಲದವರು. ಪೇಶ್ವೆಗಳ ಆಳ್ವಿಕೆ ಕಾಲದಲ್ಲಿ ಇವರ ಕುಟುಂಬಕ್ಕೆ ಗ್ರಾಮವೊಂದರ ಉಸ್ತುವಾರಿಕೆ ಲಭಿಸಿತ್ತು. ಈಗ ದೇವೇಂದ್ರ ಅವರಿಗೆ ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ಸಿಕ್ಕಿದೆ. ಛತ್ರಪತಿ ಶಿವಾಜಿ, ಬಿ.ಆರ್ ಅಂಬೇಡ್ಕರ್ ಅವರ ಸಿದ್ಧಾಂತದಂತೆ ರಾಜ್ಯಭಾರ ಮಾಡುವುದಾಗಿ ದೇವೇಂದ್ರ ಹೇಳಿದ್ದಾರೆ. ದೇವೇಂದ್ರ ಅವರ ಸಂಕ್ಷಿಪ್ತ ವ್ಯಕ್ತಿ ಚಿತ್ರ ಇಲ್ಲಿದೆ:

ಕುಟುಂಬ: ಪತ್ನಿ ಅಮೃತಾ ರಾನಡೆ, 2006ರಲ್ಲಿ ಮದುವೆ, ಆಕ್ಸಿಸ್ ಬ್ಯಾಂಕ್ ನಲ್ಲಿ ಉದ್ಯೋಗಿ, ಪುತ್ರಿ ದಿವಿಜಾ ಫಡ್ನವೀಸ್.
* ತಂದೆ ಗಂಗಾಧರ್ ರಾವ್ ಫಡ್ನವೀಸ್, ತಾಯಿ ಸವಿತಾ ಫಡ್ನವೀಸ್
ವಿದ್ಯಾಭ್ಯಾಸ : ಬಿ.ಎ (ಕಾನೂನು), ಎಲ್.ಎಲ್.ಬಿ
* ಬರ್ಲಿನ್ ನ ಜರ್ಮನ್ ಫೌಂಡೇಷನ್ ಫಾರ್ ಇಂಟರ್ ನ್ಯಾಷನಲ್ ಡೆವಲಪ್ ಮೆಂಟ್ ನಿಂದ ಬಿಸಿನೆಸ್ ಮ್ಯಾನೇಜ್ ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ನಲ್ಲಿ ಡಿಪ್ಲೋಮಾ
* ನಾಗಪುರ ವಿಶ್ವವಿದ್ಯಾಲಯದಿಂದ ಎಲ್ಎಲ್ ಬಿ
* ಬೋಸ್ ಪ್ರೈಜ್ ಇನ್ ಹಿಂದೂ ಲಾ ಗೌರವ.
ರಾಜಕೀಯ ಜೀವನ :
* 1986-89 ಎಬಿವಿಪಿಯಲ್ಲಿ ಕಾರ್ಯ ಇದಕ್ಕೂ ಮುನ್ನ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು.
* ವಾರ್ಡ್ ಅಧ್ಯಕ್ಷರಾಗಿ ಬಿಜೆಪಿಗೆ ಸೇರ್ಪಡೆ
* 1992 - ಎರಡು ಅವಧಿಗೆ ನಾಗಪುರದ ಯುವ ಕಾರ್ಪೊರೇಟರ್ ಆಗಿ ಆಯ್ಕೆ
* 1997 - 27ನೇ ವಯಸ್ಸಿಗೆ ನಾಗಪುರದ ಮೇಯರ್ ಆಗಿದ್ದರು.
* 1990 : ನಾಗಪುರದ ಪಶ್ಚಿಮ ಭಾಗದ ಬಿಜೆಪಿ ಸದಸ್ಯ
* 1992 : ನಾಗಪುರ ನಗರದ ಯುವಮೋರ್ಚಾ ಅಧ್ಯಕ್ಷ
* 1994 : ಯುವಮೋರ್ಚಾದ ರಾಜ್ಯ ಉಪಾಧ್ಯಕ್ಷ
* 2001 : ರಾಷ್ಟ್ರೀಯ ಯುವಮೋರ್ಚಾದ ಉಪಾಧ್ಯಕ್ಷ
* 2010 : ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ
* 2013 : ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ
ವಿಳಾಸ: #276, ರಾವ್ ಸಾಹೇಬ್ ಫಡ್ನವೀಸ್ ಪಾರ್ಕ್, ಧರ್ಮಂಪೇಠ್, ನಾಗಪುರ, 440 010
ವೆಬ್ ತಾಣ: http://www.devendrafadnavis.in
ಫೇಸ್ ಬುಕ್ : https://www.facebook.com/devendra.fadnavis
ಟ್ವಿಟ್ಟರ್ : https://twitter.com/Dev_Fadnavis
-
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್












Click it and Unblock the Notifications