ಶಿಲ್ಪಾ ಶೆಟ್ಟಿ ಮತ್ತವರ ಪತಿ ವಿರುದ್ಧ ವಂಚನೆ ದೂರು ದಾಖಲು
ಯಾರಿಗಾದರೂ ಕೊಡಬೇಕಾದ ದುಡ್ಡಿಗೆ ನಾಮ ಹಾಕಿದರೆ ಏನ್ಮಾಡ್ತಾರೆ ಹೇಳಿ? ಅದನ್ನೇ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿಗೆ ಮಾಡಿದ್ದಾರೆ ಮುಂಬೈನಲ್ಲಿರುವ ಟೆಕ್ಸ್ ಟೈಲ್ ಸಂಸ್ಥೆಯ ಮಾಲೀಕರು. ಅದೇನು ದೂರು ಅಂತ ತಿಳಿಯಕ್ಕೆ ಈ ವರದಿ ಓದಿ
ಮುಂಬೈ, ಏಪ್ರಿಲ್ 27: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ಪತಿ ರಾಜ್ ಕುಂದ್ರಾ ವಿರುದ್ಧ ಗುರುವಾರ ಥಾಣೆಯ ಭಿವಂಡಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. 24 ಲಕ್ಷ ರುಪಾಯಿ ವಂಚಿಸಿದ್ದಾರೆ ಎಂದು ಈ ದಂಪತಿ ವಿರುದ್ಧ ಟೆಕ್ಸ್ ಟೈಲ್ ಸಂಸ್ಥೆಯ ಮಾಲೀಕರೊಬ್ಬರು ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ.
ತನ್ನ ಪರವಾಗಿ ಹಣ ಪಡೆದಿರುವ ಇವರಿಬ್ಬರು ಅದನ್ನು ತನಗೆ ನೀಡಿಲ್ಲ ಎಂದು ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. "ಬಿಗ್ ಡೀಲ್ಸ್ ಎಂಬ ಕಂಪೆನಿಗೆ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ನಿರ್ದೇಶಕರು. ಮಲೋಶಿಯಾ ಟೆಕ್ಸ್ ಟೈಲ್ಸ್ ನ ಪರವಾಗಿ ಮಾರಿರುವ ಬೆಡ್ ಶೀಟ್ ಗಳಿಗೆ ಗ್ರಾಹಕರಿಂದ ಹಣ ಪಡೆದು, ಅದನ್ನು ಟೆಕ್ಸ್ ಟೈಲ್ಸ್ ನವರಿಗೆ ನೀಡಿಲ್ಲ.[ನಟಿ ಶಿಲ್ಪಾ ಶೆಟ್ಟಿ ಮೇಲೆ 420 ಕೇಸು ದಾಖಲು]

ಶಿಲ್ಪಾ ಹಾಗೂ ರಾಜ್ ಕುಂದ್ರಾ ಮಾಲೀಕತ್ವದ ಹೋಮ್ ಶಾಪಿಂಗ್ ಟಿವಿ ಬೆಸ್ಟ್ ಡೀಲ್ ಹಾಗೂ ಅದಕ್ಕೆ ವಸ್ತುಗಳನ್ನು ಮಾರುತ್ತಿದ್ದವರ ಮಧ್ಯೆ ತಿಕ್ಕಾಟ ಮುಂದುವರಿದಿತ್ತು. ಏಕೆಂದರೆ ಈ ವರ್ಷದ ಆರಂಭದಿಂದಲೂ ಯಾವುದೇ ಹಣ ಪಾವತಿಸಿರಲಿಲ್ಲ. 2016ರ ನವೆಂಬರ್ 8ರಂದು ಅಪನಗದೀಕರಣದ ಘೋಷಣೆ ಮಾಡುವ ಮುಂಚಿನಿಂದಲೂ ಶಿಲ್ಪಾ ಶೆಟ್ಟಿ ಒಡೆತನದ ಕಂಪೆನಿಯಿಂದ ಹಣ ಪಾವತಿಸುತ್ತಿರಲಿಲ್ಲ ಎಂದು ದೂರಿದ್ದಾರೆ.[ಶಾಲು ಮಾರುತ್ತಿದ್ದ ಶಿಲ್ಪಾಶೆಟ್ಟಿ ಪತಿ ಈಗ ಬಾಜಿಗರ್!]
ಹಲವು ಸಲ ಬಾಕಿ ಮೊತ್ತ ಪಾವತಿಸಿ ಎಂದು ಕೇಳಿಕೊಂಡರೂ ಹಣ ಕೊಟ್ಟಿರಲಿಲ್ಲ. ಆದ್ದರಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications