ಆಸ್ಟ್ರೇಲಿಯಾ ಪ್ರವಾಸ: ಇಂಡಿಯಾ 'ಎ' ಗೆ ಉತ್ತಪ್ಪ ನಾಯಕ
ಮುಂಬೈ, ಜೂ.11: ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಇಂಡಿಯಾ 'ಎ' ಕ್ರಿಕೆಟ್ ತಂಡವನ್ನು ಬುಧವಾರ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. ಮನೋಜ್ ತಿವಾರಿ ಅವರು ನಾಲ್ಕು ದಿನಗಳ ಪಂದ್ಯಕ್ಕೆ ನಾಯಕರಾಗಿದ್ದರೆ, ಉತ್ತಪ್ಪ ಏಕದಿನ ಪಂದ್ಯಕ್ಕೆ ಕ್ಯಾಪ್ಟನ್ ಆಗಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್ 7 ಹಾಗೂ ದೇಶಿ ಕ್ರಿಕೆಟ್ ನಲ್ಲಿ ತೋರಿಸಿರುವ ಸಾಧನೆಯನ್ನು ಪರಿಗಣಿಸಿ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆಯನ್ನು ಬಿಸಿಸಿಐ ಆಯ್ಕೆಯಾದರು ಕೊಟ್ಟಿದ್ದಾರೆ.
ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಭಾರತ ಎ ತಂಡ ಎರಡು ನಾಲ್ಕು ದಿನಗಳ ಪಂದ್ಯಗಳನ್ನು ಆಡಲಿದೆ. ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ, ಭಾರತ, ದಕ್ಷಿಣ ಆಫ್ರಿಕಾ 'ಎ' ತಂಡಗಳ ಜತೆ ಆಸ್ಟ್ರೇಲಿಯಾ ಕ್ರಿಕೆಟ್ ಅಕಾಡೆಮಿಯ ಎನ್ ಪಿಎಸ್ ತಂಡಗಳು ಸೆಣಸಾಡಲಿವೆ. ಭಾರತದ ಆಸ್ಟ್ರೇಲಿಯಾ ಪ್ರವಾಸ ಜುಲೈ 6 ರಿಂದ ಆಗಸ್ಟ್ 2 ರ ತನಕ ನಡೆಯಲಿದೆ.

ಭಾರತ ಎ ತಂಡಗಳು:
ನಾಲ್ಕು ದಿನ ಪಂದ್ಯಕ್ಕೆ : ಮನೋಜ್ ತಿವಾರಿ(ನಾಯಕ), ಕೆಎಲ್ ರಾಹುಲ್, ಜೀವಜೋತ್ ಸಿಂಗ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಅಭಿಶೇಕ್ ನಾಯರ್, ನಮನ್ ಓಜಾ, ಪ್ರಗ್ನಾನ್ ಓಜಾ, ಉಮೇಶ್ ಯಾದವ್, ಧವಳ್ ಕುಲಕರ್ಣಿ, ಅನುರೀತ್ ಸಿಂಗ್, ಪಾಲಿವಾಲ್, ಅಮಿತ್ ಮಿಶ್ರಾ, ಸಂದೀಪ್ ಸಿಂಗ್, ಜಸ್ ಪ್ರೀತ್ ಬೂಮ್ರಾ, ಬಾಬಾ ಅಪರಾಜಿತ್
ಏಕದಿನ ತಂಡ: ರಾಬಿನ್ ಉತ್ತಪ್ಪ(ನಾಯಕ), ಉನ್ಮುಕ್ತ್ ಚಂದ್, ಮನೀಶ್ ಪಾಂಡೆ, ಅಂಬಟಿ ರಾಯುಡು, ಮನೋಜ್ ತಿವಾರಿ, ಕೇದಾರ್ ಜಾಧವ್, ಸಂಜು ಸಾಮ್ಸನ್, ಪರ್ವೇಜ್ ರಸೂಲ್, ಅಕ್ಷರ್ ಪಟೇಲ್, ಧವಳ್ ಕುಲಕರ್ಣಿ, ರಿಷಿ ಧವನ್, ಮೋಹಿತ್ ಶರ್ಮ, ಕರಣ್ ಶರ್ಮ, ರಾಹುಲ್ ಶುಕ್ಲಾ, ಮನನ್ ವೋಹ್ರಾ, ಜಯದೇವ್ ಉನದ್ಕತ್
ವೇಳಾಪಟ್ಟಿ:
* ಜುಲೈ 6-9 vs ಆಸ್ಟ್ರೇಲಿಯಾ ಎ, ಅಲಾನ್ ಬಾರ್ಡರ್ ಫೀಲ್ಡ್, ಕ್ವೀನ್ಸ್ ಲ್ಯಾಂಡ್
* ಜುಲೈ 13-16 vs ಆಸ್ಟ್ರೇಲಿಯಾ ಎ, ಅಲಾನ್ ಬಾರ್ಡರ್ ಫೀಲ್ಡ್, ಕ್ವೀನ್ಸ್ ಲ್ಯಾಂಡ್
* ಜುಲೈ 20-ಆಗಸ್ಟ್ 2: ಏಕದಿನ ಸರಣಿ Marrara Oval and Gardens Oval
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications