ಸಲ್ಮಾನ್ಗಾಗಿ ಊಟ ಬಿಟ್ಟಿದ್ದ ಸಯಾಮಿ ಸಹೋದರಿಯರು!
ಮುಂಬೈ, ಮೇ. 08 : ಅಂತೂ ಇಂತೂ ಸಲ್ಮಾನ್ ಖಾನ್ ನಿರಾಳರಾಗಿದ್ದಾರೆ. ಹೈಕೋರ್ಟಿಂದ ಶಿಕ್ಷೆಗೆ ತಡೆ ಸಿಕ್ಕಿದ್ದರಿಂದ ಅಭಿಮಾನಿಗಳ ಹರ್ಘೋದ್ಗಾರ ಮುಗಿಲುಮುಟ್ಟಿದೆ. ಆದರೆ, ಎಲ್ಲಕ್ಕಿಂತ ಹೆಚ್ಚು ಸಂತಸ ಪಟ್ಟವರು, ಸಲ್ಮಾನ್ಗಾಗಿ ಊಟ ತಿಂಡಿ ಬಿಟ್ಟು ಅಲ್ಲಾಹುವಿನಲ್ಲಿ ಪ್ರಾರ್ಥಿಸುತ್ತಿದ್ದ ಸಯಾಮಿ ಅವಳಿಗಳಾದ ಸಾಬಾ ಮತ್ತು ಫರಾಹ್.
ಬಿಹಾರದ ಹದಿನೆಂಟು ವರ್ಷ ಸಯಾಮಿ ಅವಳಿಗಳಾದ ಸಾಬಾ ಮತ್ತು ಫರಾಹ್ ಬುಧವಾರದಿಂದ ಊಟ ಮಾಡುವುದನ್ನು ನಿಲ್ಲಿಸಿದ್ದರು. ಸಲ್ಮಾನ್ನ ರಾಖಿ ಸಹೋದರಿಯರೆಂದು ಅಭಿಮಾನದಿಂದ ಹೇಳಿಕೊಳ್ಳುವ ಈ ಅವಳಿಗಳು ಸಲ್ಮಾನ್ ಭಯ್ಯಾ ಈ ಸಂಕಷ್ಟದಿಂದ ಬಿಡುಗಡೆಯಾಗಲೆಂದು ಅನುಕ್ಷಣವೂ ಅಲ್ಲಾಹುವಿನಲ್ಲಿ ಪ್ರಾರ್ಥಿಸುತ್ತಿದ್ದರು. [ಸಲ್ಮಾನ್ ಮೇಲೆ ವಿಧಿಸಿದ್ದ ಶಿಕ್ಷೆ ಅಮಾನತು]

"ಸಲ್ಮಾನ್ ಖಾನ್ಗೆ 5 ವರ್ಷಗಳ ಜೈಲು ಶಿಕ್ಷೆಯನ್ನು ಮುಂಬೈ ಸೆಷನ್ಸ್ ಕೋರ್ಟ್ ವಿಧಿಸುತ್ತಿದ್ದಂತೆ ಕಣ್ಣೀರುಗರೆದ ಸಾಬಾ ಮತ್ತು ಫರಾಹ್ ಊಟ ಮಾಡುವುದನ್ನು ನಿಲ್ಲಿಸಿದ್ದರು. ಅವರಿಗೆ ಸಲ್ಮಾನ್ ಜೈಲು ಸೇರಲಿರುವುದು ಆಘಾತ ತಂದಿತ್ತು" ಎಂದು ಪಟ್ನಾದ ಸಾಮಾನಪುರದವರಾದ ಅವರ ತಂದೆ ಶಕೀಲ್ ಅಹ್ಮದ್ ಅವರು ಹೇಳುತ್ತಾರೆ. [ಸಲ್ಮಾನ್ ರನ್ನು ಜೈಲಿಗೆ ಕಳಿಸಿದ ಹೀರೋ]
ಸಲ್ಮಾನ್ ಖಾನ್ನನ್ನು ಬಾಲ್ಯದಿಂದಲೂ ಈ ಸಹೋದರಿಯರು ಎಷ್ಟು ಹಚ್ಚಿಕೊಂಡಿದ್ದರೆಂದರೆ ಆತನಿಗೆ ರಾಖಿ ಕಟ್ಟುವ ಹೆಬ್ಬಯಕೆ ವ್ಯಕ್ತಪಡಿಸಿದ್ದರು. ಇದನ್ನು ಕೇಳಿದ ಸಲ್ಮಾನ್, ಮೂರು ವರ್ಷಗಳ ಹಿಂದೆ ಅವರನ್ನು ಸ್ವತಃ ಮುಂಬೈಗೆ ಕರೆಸಿಕೊಂಡು ಅವರ ಕೈಯಿಂದ ರಾಖಿ ಕಟ್ಟಿಸಿಕೊಂಡು, ಅವರಿಗೆ 50 ಸಾವಿರ ರು. ಉಡುಗೊರೆ ಕೊಟ್ಟು ಸಂತಸ ಪಟ್ಟಿದ್ದರು.
ಒಂದೆಡೆ ಹರ್ಷದ ಹೊನಲು ಉಕ್ಕಿ ಹರಿಯುತ್ತಿದ್ದರೆ, ಮತ್ತೊಂದೆಡೆ ಗಂಡನನ್ನು ಕಳೆದುಕೊಂಡು ಪರಿಹಾರಕ್ಕಾಗಿ ಪರಿತಪಿಸುತ್ತಿರುವ, ಅಪಘಾತದಲ್ಲಿ ಸತ್ತ ನೂರುಲ್ಲಾ ಪತ್ನಿ ಪರಿತಪಿಸುತ್ತಿರಬಹುದು. ಹತ್ತು ಲಕ್ಷ ರು. ಪರಿಹಾರ ಇನ್ನೂ ಅವರಿಗೆ ಗಗನ ಕುಸುಮವಾಗಿದೆ. ಇನ್ನೂದರೂ ಅವರಿಗೆ ಪರಿಹಾರ ದೊರಕಿಸಿಕೊಡುವ ಮಾನವೀಯತೆಯನ್ನು ಸಲ್ಮಾನ್ ತೋರುವರೆ? [ಸತ್ತ ನೂರುಲ್ಲಾ ಪತ್ನಿಯ ಅಳಲು]
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications