ಮಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿಗಳ ಮೇಲೆ ಬಜರಂಗದಳದ ಕೆಂಗಣ್ಣು
ಮಂಗಳುರು, ಡಿಸೆಂಬರ್, 22: ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆಗಮಿಸುತ್ತಿದೆ. ಅದರಲ್ಲೂ ಪಬ್, ಕ್ಲಬ್, ಹೋಟ್ಲ್ಗಳಲ್ಲಿ ಹೊಸ ವರ್ಷಾಚರಣೆಯ ಪಾರ್ಟಿಗಳ ಆಯೋಜನೆ ಜೋರಾಗಿ ಯುಕವರು ನಡೆಸಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಇದೀಗ ಮಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿಗಳ ಮೇಲೆ ಬಜರಂಗದಳ ಕೆಂಗಣ್ಣು ನೆಟ್ಟಿದೆ.
ಡಿಸೆಂಬರ್ 31ರಂದು ನಡೆಯುವ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಿಂಬಿಸುವ ಪಾರ್ಟಿಗಳಿಗೆ ಬಜರಂಗದಳ ವಿರೋಧ ವ್ಯಕ್ತಪಡಿಸಿದೆ. ಈಗಾಗಲೇ ಪಾರ್ಟಿಗಳನ್ನು ರಾತ್ರಿ 11ರೊಳಗೆ ಮುಗಿಸುವಂತೆ ಬಜರಂಗದಳ ಪೊಲೀಸ್ ಕಮಿಷನರ್ ಅವರಿಗೆ ಮನವಿ ಮಾಡಿದೆ. ಇಲ್ಲದಿದ್ದಲ್ಲಿ ಬಜರಂಗದಳದ ಕಾರ್ಯಕರ್ತರೇ ಪಾರ್ಟಿಗಳನ್ನು ಬಂದ್ ಮಾಡಿಸುತ್ತದೆ ಎಂದು ಎಚ್ಚರಿಕೆ ನೀಡಿದೆ.
ಮಂಗಳೂರು ನಗರಕ್ಕೆ ಚೀನಾ ಕಂಪನಿಯ ಸಿಸಿ ಕ್ಯಾಮೆರಾಗಳೇ ಕಂಟಕ, ಕಾಂಗ್ರೆಸ್ನಿಂದ ಆರೋಪ
ನ್ಯೂ
ಇಯರ್
ಪಾರ್ಟಿ
ಮೇಲೆ
ಕಣ್ಣಿಟ್ಟ
ಬಜರಂಗದಳ
ಬಜರಂಗದಳದ
ಮುಖಂಡ
ಪುನೀತ್
ಅತ್ತಾವರ
ಮಾತನಾಡಿ,
ಪಾರ್ಟಿ
ನೆಪದಲ್ಲಿ
ಹೋಟೆಲ್,
ಪಬ್ಗಳಲ್ಲಿ
ಲವ್
ಜಿಹಾದ್,
ಡ್ರಗ್ಸ್
ಜಿಹಾದ್
ನಡೆಯುತ್ತಿದೆ.
ಈ
ಮೂಲಕ
ದುಶ್ಚಟಗಳಿಗೆ
ಪ್ರೇರಣೆ
ನೀಡುವ
ಘಟನೆಗಳು
ನಡೆಯುತ್ತಿವೆ.
ಇಸ್ಲಾಂ
ಧರ್ಮವನ್ನು
ಪಾಲಿಸುವ
ಮುಸಲ್ಮಾನ
ಯುವಕರು
ಅವರ
ಜಮಾಅತ್
ಅನ್ನು
ಮಾತ್ರ
ಒಪ್ಪುತ್ತಾರೆ.
ಇಸ್ಲಾಂ
ಪ್ರಕಾರ
ಅವರಿಗೆ
ಪಾರ್ಟಿಗಳು,
ಸಂಗೀತ
ನಿಷಿದ್ಧವರಿರುತ್ತದೆ.
ಆದರೆ
ಮಂಗಳೂರಿನ
ಎಲ್ಲಾ
ಪಬ್ಗಳಲ್ಲೂ
ಯುವಕ,
ಯುವತಿಯರು
ಸಿಗುತ್ತಾರೆ.
ಆದ್ದರಿಂದ
ಎಲ್ಲಾ
ಪಬ್,
ಹೋಟೆಲ್
ಮಾಲೀಕರು
ಯಾವುದೇ
ಹೊಸ
ವರ್ಷಾಚರಣೆಯ
ಪಾರ್ಟಿಗಳಿಗೆ
ಯುವಕ,
ಯುವತಿಯರಿಗೆ
ಅವಕಾಶ
ನೀಡದಂತೆ
ಆಗ್ರಹಿಸಿದರು.
ಎಚ್ಚರಿಕೆ
ನೀಡಲು
ಬಜರಂಗದಳದವರು
ಯಾರು?
ಈ
ಬಗ್ಗೆ
ಎಸ್ಡಿಪಿಐ
ರಾಜ್ಯಾಧ್ಯಕ್ಷ
ಅಬ್ದುಲ್
ಮಜೀದ್
ಮೈಸೂರು
ಪ್ರತಿಕ್ರಿಯೆ
ನೀಡಿ,
ಈ
ರೀತಿ
ಎಚ್ಚರಿಕೆ
ನೀಡಲು
ಬಜರಂಗದಳದವರು
ಯಾರು?.
ದಕ್ಷಿಣ
ಕನ್ನಡ
ಜಿಲ್ಲೆಯಲ್ಲಿ
ಸರ್ಕಾರ
ಇಲ್ಲ.
ಕಾನೂನು
ಸುವ್ಯವಸ್ಥೆಯಂತೂ
ಇಲ್ಲವೇ
ಇಲ್ಲ.
ಪೊಲೀಸ್
ಇಲ್ಲ
ಅನ್ನುವಂತಹದ್ದೇ
ಇದರ
ಹಿಂದಿರುವ
ಅರ್ಥವಾಗಿದೆ.
ಪೊಲೀಸ್
ಇಲಾಖೆ
ನ್ಯೂ
ಈಯರ್
ಪಾರ್ಟಿಯ
ಮೇಲೆ
ಕಟ್ಟುನಿಟ್ಟಿನ
ಕ್ರಮ
ಕೈಗೊಳ್ಳಲಿ.
ಸಂವಿಧಾನ
ಎಲ್ಲರಿಗೂ
ಅವರದ್ದೇ
ಆದ
ಸ್ವಾತಂತ್ರ್ಯ
ನೀಡಿದೆ.
ಸಂವಿಧಾನ
ನೀಡಿರುವ
ಸ್ವಾತಂತ್ರ್ಯ
ಹಾಗೂ
ಹಕ್ಕನ್ನು
ಕಾಪಾಡುವುದು
ಪೊಲೀಸ್
ಇಲಾಖೆಯ
ಜವಾಬ್ದಾರಿಯಾಗಿದೆ.
ಕಾನೂನು
ಸುವ್ಯವಸ್ಥೆಯನ್ನು
ಹದಗೆಡಿಸುವಂತಹ
ಹೇಳಿಕೆ
ನೀಡುವ
ಬಜರಂಗದಳದವರ
ಮೇಲೆ
ಪ್ರಕರಣ
ದಾಖಲು
ಮಾಡಿ
ಮುಂಜಾಗ್ರತಾ
ಕ್ರಮವಾಗಿ
ಅವರನ್ನು
ಬಂಧಿಸಲಿ
ಎಂದು
ಆಗ್ರಹಿಸಿದರು.
SDPIನಿಂದ
ಜ.
7ರಂದು
ಪಟ್ಟಿ
ಬಿಡುಗಡೆ
ವಿಧಾನಸಭಾ
ಚುನಾವಣೆಗೆ
ಈ
ಬಾರಿ
100ಕ್ಕಿಂತಲೂ
ಅಧಿಕ
ಕ್ಷೇತ್ರಗಳಲ್ಲಿ
ಎಸ್ಡಿಪಿ
ಅಭ್ಯರ್ಥಿಗಳನ್ನು
ಕಣಕ್ಕಿಳಿಸಲಿದೆ.
ಎಸ್ಡಿಪಿಐ
ರಾಷ್ಟ್ರೀಯ
ಅಧ್ಯಕ್ಷರು
ಅಭ್ಯರ್ಥಿಗಳ
ಮೊದಲ
ಪಟ್ಟಿಯನ್ನು
ಜನವರಿ
7ರಂದು
ಬೆಂಗಳೂರಿನಲ್ಲಿ
ಬಿಡುಗಡೆಗೊಳಿಸಲಿದ್ದಾರೆ
ಎಂದು
ಎಸ್ಡಿಪಿಐ
ರಾಜ್ಯಾಧ್ಯಕ್ಷ
ಅಬ್ದುಲ್
ಮಜೀದ್
ಮೈಸೂರು
ಮಂಗಳೂರಿನಲ್ಲಿ
ಹೇಳಿದರು.
ಅಭ್ಯರ್ಥಿಗಳ
ಪಟ್ಟಿ
ಅನುಮೋದನೆಗೊಂಡಿದೆ
ಮಂಗಳೂರಿನಲ್ಲಿ
ಖಾಸಗಿ
ಹೊಟೇಲ್ನಲ್ಲಿ
ಮಾತನಾಡಿದ
ಅವರು,
ನಮ್ಮ
ರಾಷ್ಟ್ರೀಯ
ಕಾರ್ಯದರ್ಶಿ
ಮಂಡಳಿಯಲ್ಲಿ
ಅಭ್ಯರ್ಥಿಗಳ
ಪಟ್ಟಿ
ಅನುಮೋದನೆಗೊಂಡಿದೆ.
ದಕ್ಷಿಣ
ಕನ್ನಡ
ಜಿಲ್ಲೆಯ
ಎಂಟೂ
ವಿಧಾನಸಭಾ
ಕ್ಷೇತ್ರಗಳಲ್ಲೂ
ಎಸ್ಡಿಪಿಐ
ಸ್ಪರ್ಧಿಸಲಿದೆ.
ವಿಧಾನಸಭಾ
ಕ್ಷೇತ್ರ
ಸಮಿತಿಯಿಂದ
ಹಾಗೂ
ಜಿಲ್ಲೆಗಳಿಂದ
ಆಕಾಂಕ್ಷಿಗಳ
ಪಟ್ಟಿಯನ್ನು
ರಾಜ್ಯ
ಸಮಿತಿಗೆ
ಕಳುಹಿಸಲಾಗುತ್ತದೆ.
ಅಲ್ಲಿ
3
ಅಭ್ಯರ್ಥಿಗಳ
ಹೆಸರು
ಅಂತಿಮಗೊಂಡು
ರಾಷ್ಟ್ರೀಯ
ಕಾರ್ಯದರ್ಶಿ
ಮಂಡಳಿಗೆ
ಕಳುಹಿಸಲಾಗುತ್ತದೆ.
ಬಳಿಕ
ಚುನಾವಣಾ
ಕಣಕ್ಕಿಳಿಯುವ
ಅಭ್ಯರ್ಥಿಯ
ಹೆಸರು
ಅಂತಿಮಗೊಳ್ಳುತ್ತದೆ
ಎಂದರು.
ಚುನಾವಣಾ ಕಣದ ಬೇರೆ ಬೇರೆ ಕ್ಷೇತ್ರಗಳಲ್ಲಿ ನನ್ನ ಹೆಸರನ್ನು ಕೂಡ ಪ್ರಸ್ತಾಪಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಹೆಸರನ್ನು ಸೂಚಿಸಲಾಗಿದೆ. ಅಲ್ಲದೆ ನಾನು ಈಗಾಗಲೇ ಎರಡು ಬಾರಿ ಸ್ಪರ್ಧಿಸಿರುವ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲೂ ನನ್ನ ಹೆಸರಿನ ಪಟ್ಟಿ ಹೋಗಿದೆ. ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಎಲ್ಲಿ ಸೂಚಿಸುತ್ತದೆಯೇ ಅಲ್ಲಿ ಸ್ಪರ್ಧಿಸಲಿದ್ದೇನೆ ಎಂದು ಅಬ್ದುಲ್ ಮಜೀದ್ ಮೈಸೂರು ಹೇಳಿದರು.