ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ವಿವಿಧೆಡೆ ರಾಷ್ಟ್ರೀಯ ಏಕತಾ ಓಟ: ಯಾರೆಲ್ಲಾ ಭಾಗವಹಿಸಿದ್ದರು?

|
Google Oneindia Kannada News

ಮಂಗಳೂರು, ಅಕ್ಟೋಬರ್. 31: ಸರ್ದಾರ್ ವಲ್ಲಭಭಾಯ್ ಪಟೇಲ್ ಜಯಂತಿ ಅಂಗವಾಗಿ ನಡೆಯುವ ರಾಷ್ಟ್ರೀಯ ಏಕತಾ ಓಟವನ್ನು ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಬುಧವಾರ ಆಯೋಜಿಸಲಾಗಿತ್ತು.

ಮಂಗಳೂರು ಉತ್ತರ, ಮಂಗಳೂರು ದಕ್ಷಿಣ , ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಸೇರಿದಂತೆ ಸುಳ್ಯದಲ್ಲಿ ಕೂಡ ಏಕತಾ ಓಟ ನಡೆಯಿತು. ಪುತ್ತೂರಿನಲ್ಲಿ ಆಯೋಜಿಸಲಾಗಿದ್ದ ಏಕತಾ ಓಟ ಪುತ್ತೂರು ಅಂಜನೇಯ ಮಂತ್ರಾಲಯದಿಂದ ದರ್ಬೆ ವೃತ್ತದವರೆಗೆ ಸಾಗಿತು. ಓಟದಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ಶಾಸಕ ಸಂಜೀವ ಮಠಂದೂರು ಓಟಕ್ಕೆ ಚಾಲನೆ ನೀಡಿದರು.

Unity run marks Sardar Patels Birth anniversary in Dakshina Kannada

ಪ್ರತಿಮೆ ಅನಾವರಣದ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ: ಮೋದಿಪ್ರತಿಮೆ ಅನಾವರಣದ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ: ಮೋದಿ

ನಗರದ ಕದ್ರಿಯಲ್ಲಿ ಆಯೋಜಿಸಲಾಗಿದ್ದ ಏಕತೆಗಾಗಿ ಓಟದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಿದ್ದರು.

Unity run marks Sardar Patels Birth anniversary in Dakshina Kannada

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಏಕತೆಗಾಗಿ ಓಟ ಯಶಸ್ವಿಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಏಕತೆಗಾಗಿ ಓಟ ಯಶಸ್ವಿ

ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ವತಿಯಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಏಕತಾ ಓಟವನ್ನು ಮುಖಂಡರಾದ ಟಿ.ಜಿ. ರಾಜಾರಾಂ ಭಟ್ ಉದ್ಘಾಟಿಸಿದರು. ಎರಡೂ ಕಾಲುಗಳಲ್ಲೂ ಬಲವಿಲ್ಲದಿದ್ದರೂ ಎರಡು ಕಿ.ಮೀ. ಏಕತಾ ಓಟದಲ್ಲಿ ನರಿಂಗಾನ ಪಡ್ಪುವಿನ ಪಿ.ಇಬ್ರಾಹಿಂ ಪಾಲ್ಗೊಂಡರು.

Unity run marks Sardar Patels Birth anniversary in Dakshina Kannada

ಸರ್ದಾರ್ ಪಟೇಲ್ ಸ್ಮರಣೆಯ ಏಕತಾ ಪ್ರತಿಮೆ ನಿರ್ಮಾಣ ಟೈಮ್ ಲೈನ್ಸರ್ದಾರ್ ಪಟೇಲ್ ಸ್ಮರಣೆಯ ಏಕತಾ ಪ್ರತಿಮೆ ನಿರ್ಮಾಣ ಟೈಮ್ ಲೈನ್

ಮಂಗಳೂರು ಉತ್ತರ ಕ್ಷೇತ್ರ ಸುರತ್ಕಲ್ ನಲ್ಲಿ ಕೂಡ ಇಂದು ಏಕತಾ ಓಟ ಆಯೋಜಿಸಲಾಗಿತ್ತು. ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಮತ್ತಿತರರು ಓಟದಲ್ಲಿ ಪಾಲ್ಗೊಂಡರು. ಬೆಳ್ತಂಗಡಿ, ಸುಳ್ಯದಲ್ಲೂ ಬಿಜೆಪಿ ವತಿಯಿಂದ ಏಕತಾ ಓಟ ಆಯೋಜಿಸಿದ್ದರು.

English summary
Dakshina Kannada BJP unit organised Run for unity marathon in all Constituency. All BJP leaders participated in Unity run.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X