ಮಂಗಳೂರಿನಲ್ಲಿ ಯುವಕರನ್ನು ಆಕರ್ಷಿಸುತ್ತಿದೆ ಸ್ಟ್ರೀಟ್ ಫುಟ್ಬಾಲ್
ಮಂಗಳೂರು, ಜುಲೈ.17: ವಿಶ್ವದ ವಿವಿಧ ದೇಶಗಳಲ್ಲಿ ಜನಪ್ರಿಯವಾಗಿರುವ ಸ್ಟ್ರೀಟ್ ಫುಟ್ಬಾಲ್ ಈಗ ಮಂಗಳೂರಿಗೂ ಕಾಲಿರಿಸಿದೆ. ಮಂಗಳೂರು ನಗರದ ಕುದ್ರೋಳಿ ದೇವಸ್ಥಾನದ ಸಮೀಪ ಅಳಕೆಯ ರಸ್ತೆ ಬದಿಯಲ್ಲಿ ಕೃತಕ ಟರ್ಪ್ ಆಳವಡಿಸಿದ ಮಿನಿ ಫುಟ್ಬಾಲ್ ಕ್ರೀಡಾಂಗಣವೊಂದು ಸ್ಟ್ರೀಟ್ ಫುಟ್ಬಾಲ್ ಆಗಿ ಸಜ್ಜಾಗಿದೆ.
ಪುಟ್ಬಾಲ್ ಕ್ರೀಡೆಗೆ ಮಂಗಳೂರು ನಗರದಲ್ಲಿ ಅವಕಾಶ ಇಲ್ಲದೇ ಇರುವುದನ್ನು ಗಮನಿಸಿದ ಕರಾವಳಿಯ ಮೂವರು ಯುವಕರು ಒಂದಾಗಿ ಪರ್ಫೆಕ್ಟ್ ಪಾಸ್ ಎಂಬ ಹೆಸರಿನ ಸಂಸ್ಥೆ ಆರಂಭಿಸಿ ಸ್ಟ್ರೀಟ್ ಫುಟ್ಬಾಲ್ ಜನಪ್ರಿಯಗೊಳಿಸುವ ಪ್ರಯತ್ನ ನಡೆಸಿದ್ದಾರೆ.

ಫೀಫಾ ಗುಣಮಟ್ಟದ ಕ್ರೀಡಾಂಗಣ
ನಗರದ ಕುದ್ರೋಳಿ ದೇವಸ್ಥಾನ ಸಮೀಪ ಇರುವ ರಸ್ತೆ ಬದಿಯಲ್ಲಿ ಸುಮಾರು 10 ಸಾವಿರ ಅಡಿ ವಿಸ್ತೀರ್ಣದ ಜಾಗದಲ್ಲಿ ಫೀಫಾ ಗುಣಮಟ್ಟದ ಕ್ರೀಡಾಂಗಣ ನಿರ್ಮಿಸಿದ್ದಾರೆ. ಫ್ರಾನ್ಸ್ ನಿಂದ ಆಮದು ಮಾಡಿದ ಕೃತಕ ಟರ್ಫ್ ಕ್ರೀಡಾಂಗಣಕ್ಕೆ ಆಳವಡಿಸಲಾಗಿದೆ.

ಸುರಕ್ಷತೆಗೆ ಹೆಚ್ಚಿನ ಒತ್ತು
ಕ್ರೀಡಾಂಗಣಕ್ಕೆ ಕೊಂಚ ಇಳಿಜಾರಾಗಿ ಸಿಮೆಂಟ್ ಬೆಡ್ ಆಳವಡಿಸಲಾಗಿದ್ದು, ಇದರಿಂದಾಗಿ ಮಳೆಗಾಲದಲ್ಲೂ ಕ್ರೀಡಾಂಗಣದಲ್ಲಿ ನೀರು ನಿಲ್ಲದೆ ಸರಾಗವಾಗಿ ಹರಿದು ಹೋಗುತ್ತದೆ. ಮೈದಾನದ ಸುತ್ತಲೂ ನೆಟ್ ಆಳವಡಿಸಲಾಗಿದ್ದು, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಈ ಮಿನಿ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ವ್ಯವಸ್ಥೆ ಇದ್ದು, ಬಟ್ಟೆ ಬದಲಾಯಿಸಲು ಕೊಠಡಿ, ಪಾರ್ಕಿಂಗ್ ಸೌಲಭ್ಯ ಹೊಂದಿದೆ.

ಏನಿದು ಸ್ಟ್ರೀಟ್ ಫುಟ್ಬಾಲ್?
ನಮ್ಮ ದೇಶದ ಗಲ್ಲಿ, ಓಣಿ ಹೀಗೆ ಎಲ್ಲೆಂದರಲ್ಲಿ ಕ್ರಿಕೆಟ್ ಆಟ ಆಡುವುದು ಸಾಮಾನ್ಯ, ಇದೇ ರೀತಿ ಫುಟ್ಬಾಲ್ ಅನ್ನೇ ಉಸಿರಾಗಿಸಿಕೊಂಡಿರುವ ಅಮೆರಿಕ, ಆಫ್ರಿಕಾ, ಯುರೋಪ್ ದೇಶಗಳಲ್ಲಿ ಇದೇ ರೀತಿ ಗಲ್ಲಿಗಳಲ್ಲಿ ಫುಟ್ಬಾಲ್ ಆಡುವುದು ಸಾಮಾನ್ಯ.
ಈ ರೀತಿ ಆಡುವ ಫುಟ್ಬಾಲ್ ಆಟಕ್ಕೆ ಯಾವುದೇ ರೀತಿಯ ವಿಶೇಷ ನಿಯಮಗಳಿಲ್ಲ. ಹೀಗೆ ರಸ್ತೆ ಬದಿ ಆಡುತ್ತಿದ್ದ ಫುಟ್ಬಾಲ್ ಕ್ರಮೇಣ ಸ್ಟ್ರೀಟ್ ಪುಟ್ ಬಾಲ್ ಆಗಿ ಜನಪ್ರಿಯವಾಯಿತು. ಸಣ್ಣ ಮೈದಾನ ಒಂದು ತಂಡದಲ್ಲಿ 5 ಅಥವಾ 7 ಮಂದಿ ಸದಸ್ಯರು ಇರುತ್ತಾರೆ. ಆಟದಲ್ಲಿ ಯಾವುದೇ ನಿರ್ದಿಷ್ಟ ನಿಯಮಾವಳಿಗಳು ಇರುವುದಿಲ್ಲ.

ಯುವಕರು-ಮಕ್ಕಳ ಆಕರ್ಷಣೆ
ಫುಟ್ಬಾಲ್ ಆಟ ನಿಖರತೆ, ಚುರುಕುತನ ಸಹಿತ ಕೌಶಲ್ಯಗಳನ್ನು ಕಲಿಯಲು ಪೂರಕವಾಗಿದೆ. ಅಲ್ಲದೆ ಆಟದ ಜೊತೆ ವ್ಯಾಯಾಮ ಹಾಗೂ ಮನರಂಜನೆ ಇದರ ಉದ್ದೇಶವಾಗಿದೆ. ಆಟಗಾರರು ಎಷ್ಟು ಬಾರಿ ಬಿದ್ದರೂ ಗಾಯವಾಗದ ಹುಲ್ಲು ಹಾಸಿನ ಮೈದಾನವನ್ನು ಟಿವಿಯಲ್ಲಿ ಮಾತ್ರ ನೋಡಿರಬಹುದು.
ಆದರೆ ಈಗ ವಿಶ್ವ ದರ್ಜೆಯ ಕೃತಕ ಟರ್ಪ್ ಆಳವಡಿಸಿದ ಮಿನಿ ಕ್ರಿಡಾಂಗಣ ನೋಡುವ ಹಾಗೂ ಫುಟ್ಬಾಲ್ ಆಡುವ ಅವಕಾಶ ಕಲ್ಪಿಸಲಾಗಿದೆ. ಈ ಸ್ಟ್ರೀಟ್ ಫುಟ್ಬಾಲ್ ಕ್ರೀಡಾಂಗಣ ಈಗಾಗಲೇ ಮಂಗಳೂರು ನಗರದ ಯುವಕರು ಮತ್ತು ಮಕ್ಕಳನ್ನು ಆಕರ್ಷಿಸಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications