ಬೀದಿಯಲ್ಲಿ ನಾಯಿ, ಬೆಕ್ಕುಗಳ ಕಾಟಕ್ಕೆ ಬೇಸತ್ತು ಪಚ್ಚನಾಡಿ ಸ್ಥಳೀಯರು ಮಾಡಿದ್ದೇನು?, ಇಲ್ಲಿದೆ ನೋಡಿ ವಿವರ
ಬೀದಿನಾಯಿಗಳ ಕಾಟದಿಂದ ಬೇಸತ್ತ ಪಚ್ಚೆನಾಡಿ ಜನರು ಮಾಡಿದ್ದೇನು ಅಂತಾ ನೀವೆ ನೋಡಿ.
ಮಂಗಳೂರು, ಫೆಬ್ರವರಿ, 06: ಮಂಗಳೂರಿನ ಪಚ್ಚನಾಡಿ ಭಾಗದ ಜನರು ನಾಯಿಗಳ ಕಾಟದಿಂದ ಬೇಸತ್ತಿದ್ದರು. ಪ್ರತಿದಿನ ಅವರಿಗೆ ಬೀದಿ ನಾಯಿಗಳ ಜೊತೆಗೆ ಮರಿ ನಾಯಿಗಳದ್ದೇ ಕಿರಿಕಿರಿಯಾಗಿತ್ತು. ತಮ್ಮ ಊರಿನಲ್ಲಿ ನಾಯಿಮರಿಗಳನ್ನು ಬಿಡುವ ಸಾರ್ವಜನಿಕರ ವರ್ತನೆಗೆ ರೋಸಿಹೋಗಿದ್ದ ಜನ ಈಗ ಶಾಶ್ವತ ಪರಿಹಾರದತ್ತ ದೃಷ್ಟಿ ಹಾಯಿಸಿದ್ದಾರೆ.
"ಇಲ್ಲಿ ಯಾರು ನಾಯಿಮರಿ ಮತ್ತು ಬೆಕ್ಕು ಮರಿಗಳನ್ನು ತಂದು ಬಿಡುತ್ತಾರೆಯೋ ಅವರು ತಮ್ಮ ಹೆಂಡತಿ ಮಕ್ಕಳನ್ನು ತಂದು ಬಿಡಿ ಸಾಕುತ್ತೇವೆ" ಎಂದು ಒಂದೇ ಒಂದು ವಾಕ್ಯದ ಬ್ಯಾನರ್ನಲ್ಲಿ ಬರೆಸಿದ್ದಾರೆ. ಈ ಒಂದೇ ಒಂದು ವಾಕ್ಯ ಇದೀಗ ನಾಯಿ ಕಾಟವನ್ನು ತಪ್ಪಿಸಿದೆ. ಈ ಕಠೋರ ವಾಕ್ಯದ ಬ್ಯಾನರ್ ಕಂಡಿರುವುದು ಮಂಗಳೂರಿನ ಪಚ್ಚನಾಡಿ ಎಂಬಲ್ಲಿ. ಪಚ್ಚನಾಡಿಯ ಮಂಗಳ ಜ್ಯೋತಿ ಪ್ರದೇಶದಲ್ಲಿ ಸಾರ್ವಜನಿಕರು ಪುಟ್ಟ ಪುಟ್ಟ ನಾಯಿಮರಿಗಳನ್ನು ಬಿಡುತ್ತಿದ್ದರು. ಇದರಿಂದ ರೋಸಿ ಹೋದ ಜನರು, ಈಗ ಮಂಗಳಜ್ಯೋತಿಯಲ್ಲಿ ಈ ಬ್ಯಾನರ್ ಅಳವಡಿಸಿದ್ದಾರೆ.
ಮೊದಲೇ ತಾಜ್ಯ ಸಂಸ್ಕರಣಾ ಘಟಕದಿಂದ ಪಚ್ಚನಾಡಿ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ಇದರ ಜೊತೆಗೆ ಸಾರ್ವಜನಿಕರು ಪುಟ್ಟ ನಾಯಿ ಮತ್ತು ಬೆಕ್ಕಿನ ಮರಿಯನ್ನೂ ಬಿಡುತ್ತಿದ್ದರಿಂದ ಜನ ಕಿರಿ ಕಿರಿ ಅನುಭವಿಸುತ್ತಿದ್ದರು. ಎಷ್ಟೇ ಪ್ರಯತ್ನ ಪಟ್ಟರೂ ಜನ ನಾಯಿ ಮರಿಗಳನ್ನು ರಸ್ತೆಯ ಬದಿಯಲ್ಲಿ ಬಿಡುವ ಕೆಲಸ ನಿಲ್ಲಿಸದಿರುವುದರಿಂದ ಈ ಈ ಬ್ಯಾನರ್ ಅನ್ನು ಅಳವಡಿಸಲಾಗಿದೆ.

ಬೀದಿನಾಯಿಗಳ ಹಾವಳಿ, ಬೇಸತ್ತ ಜನ
ಮಂಗಳ ಜ್ಯೋತಿ ಪ್ರದೇಶದಲ್ಲಿ ಮಂಗಳಜ್ಯೋತಿ ಶಾಲೆಯಿರೋದರಿಂದ ಸುಮಾರು 200ಕ್ಕೂ ಅಧಿಕ ಮಕ್ಕಳು ಬೀದಿ ನಾಯಿ ಕಾಟವನ್ನು ಅನುಭವಿಸುತ್ತಿದ್ದಾರೆ. ನಾಯಿಗಳ ದಾಳಿಯಿಂದ ಈಗಾಗಲೇ ಕೆಲವು ಮಕ್ಕಳು ಗಾಯಗೊಂಡಿರುವ ಘಟನೆಯೂ ನಡೆದಿದೆ. ಹೀಗಾಗಿ ಮಕ್ಕಳು ಸಾರ್ವಜನಿಕರಿಗೆ ನಾಯಿಮರಿಗಳನ್ನು ರಸ್ತೆಯಲ್ಲಿ ಬಿಡದಂತೆ ಮನವಿ ಮಾಡಿದ್ದಾರೆ. ಮನೆಯ ನಾಯಿ ಮರಿಗಳನ್ನು ಮನೆಯಲ್ಲಿಯೇ ಸಾಕುವಂತೆ ಜನರಿಗೆ ಮನವಿ ಮಾಡಿದ್ದಾರೆ.
ಬೀದಿನಾಯಿಗಳ ಹಾವಳಿ ತಡೆಗೆ ಕ್ರಮ
ಮಂಗಳ ಜ್ಯೋತಿ ಶಾಲೆಗೆ ಹೋಗುವ ರಸ್ತೆಗಳಲ್ಲೂ ನಾಯಿಗಳು ತಂಡೋಪತಂಡವಾಗಿ ಓಡಾಡುತ್ತಿರುತ್ತವೆ. ಅಲ್ಲದೇ ಶಾಲೆಯ ಒಳಗಿರುವ ಮಕ್ಕಳ ಮೇಲೂ ದಾಳಿ ಮಾಡುತ್ತಿವೆ. ಮಕ್ಕಳೇ ಹೇಳುವಂತೆ ತರಗತಿ ಒಳಗೂ ನಾಯಿಗಳು ಬಂದು ಆತಂಕ ಸೃಷ್ಟಿಸಿವೆ. ಬೀದಿ ನಾಯಿಗಳು ಚರ್ಮ ರೋಗವನ್ನು ಕೂಡಿದ್ದು, ಮಕ್ಕಳು ರೋಗ ಹರಡುವ ಆತಂಕದಲ್ಲಿದ್ದಾರೆ. ಶಾಲೆಯ ಮುಂಭಾಗದಲ್ಲೇ ಸದ್ಯ ಈ ಬ್ಯಾನರ್ ಅನ್ನು ಅಳವಡಿಸಲಾಗಿದ್ದು, ಇನ್ನಾದರೂ ಜನರು ನಾಯಿ ಮರಿಗಳನ್ನು ಈ ಭಾಗದಲ್ಲಿ ಬಿಡುವುದು ಕಡಿಮೆ ಆಗುತ್ತದೆಯೋ ಅನ್ನುವುದನ್ನು ಕಾದುನೋಡಬೇಕಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications