ಮಂಗಳೂರು: ಚಪ್ಪಲಿ ಕಳುವಾಗಿದ್ದಕ್ಕೆ 112ಕ್ಕೆ ಕರೆ ಮಾಡಿ ದೂರು ನೀಡಿದ ವಾರಸುದಾರ, ಮುಂದೇನಾಯ್ತು ನೋಡಿ
ಮಂಗಳೂರು, ಜುಲೈ, 18: ದೇವಸ್ಥಾನ, ಊರಜಾತ್ರೆ, ಜನಜಂಗುಳಿ ಇರುವಲ್ಲಿ ಚಪ್ಪಲಿ ಕಳವಾಗುವುದು ಮಾಮೂಲಿ. ಹಾಗೆಯೇ ವಾರಸುದಾರರು ತಮ್ಮ ಚಪ್ಪಲಿ ಹುಡುಕಾಡಿ ಸಿಗದೆ ಕೊನೆಗೆ ಬೇಸತ್ತು ಬರಿಗಾಲಲ್ಲೇ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಆದರೆ ಇಲ್ಲೊಬ್ಬ ಭೂಪ ತನ್ನ ಚಪ್ಪಲಿ ಕಳುವಾಗಿದೆ ಎಂದು 112ಗೆ ಕರೆ ಮಾಡಿ ಪೊಲೀಸ್ ಕರೆಸಿ ಹುಡುಕಾಡುವಂತೆ ಮಾಡಿದ ಘಟನೆ ಮಂಗಳೂರಿನ ಶರವು ದೇವಸ್ಥಾನದ ಬಳಿಯ ಬಾಳಂಭಟ್ ಸಭಾಂಗಣದಲ್ಲಿ ನಡೆದಿದೆ.
ಮೊನ್ನೆ ರವಿವಾರ ಶರವು ದೇವಸ್ಥಾನದ ಬಳಿಯ ಬಾಳಂಭಟ್ ಸಭಾಂಗಣದಲ್ಲಿ ಸಾವಯವ ಕೃಷಿ, ಉತ್ಪನ್ನಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮವಿತ್ತು. ಆದ್ದರಿಂದ ಅಧಿಕ ಸಂಖ್ಯೆಯಲ್ಲಿ ಇಲ್ಲಿ ಜನ ಸೇರಿದ್ದರು. ಹಾಗೆಯೇ ಅಲ್ಲಿಗೆ ಬಂದಿರುವವರೊಬ್ಬರ ಚಪ್ಪಲಿ ಕಾಣೆಯಾಗಿದೆ. ಅವರು ಹುಡುಕಾಟ ನಡೆಸಿ ಚಪ್ಪಲಿ ಕಾಣದಿದ್ದಾಗ 112ಗೆ ಕರೆ ಮಾಡಿದ್ದಾರೆ. ನಂತರ ದೂರು ಪರಿಶೀಲನೆ ನಡೆಸುವಂತೆ ಬಂದರು ಠಾಣೆಗೆ ಸಂದೇಶ ಬಂದಿದೆ.

ಅದರಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಚಪ್ಪಲಿ ಹುಡುಕಾಟಕ್ಕೆ ಬಾಳಂಭಟ್ ಹಾಲ್ಗೆ ಬಂದಿದ್ದಾರೆ. ಚಪ್ಪಲಿ ಕಳೆದುಕೊಂಡಿರುವ ವ್ಯಕ್ತಿ ತನ್ನ ಚಪ್ಪಲಿಯನ್ನು ಯಾರೋ ಹಾಕಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾನೆ.
ತಕ್ಷಣ ಪೊಲೀಸರು ಬಾಳಂಭಟ್ ಸಭಾಂಗಣದ ಮುಂಭಾಗದ ಸಿಸಿಕ್ಯಾಮೆರಾವನ್ನು ಪರಿಶೀಲನೆ ನಡೆಸಿದಾಗ ಯುವಕನೊಬ್ಬ ಆ ಚಪ್ಪಲಿ ಹಾಕಿಕೊಂಡು ಹೋಗಿರುವುದು ಪತ್ತೆಯಾಗಿದೆ. ಈ ವೇಳೆ ಚಪ್ಪಲಿ ಕಳೆದುಕೊಂಡವರನ್ನು ಬಂದರು ಠಾಣೆಯಲ್ಲಿ ಈ ಬಗ್ಗೆ ದೂರು ನೀಡಲು ಹೇಳಿದಾಗ ಅವರು ಅದಕ್ಕೆ ನಿರಾಕರಿಸಿದ್ದಾರೆ. ಬಳಿಕ ಪೊಲೀಸರು ಅಲ್ಲಿಂದ ಮರಳಿದ್ದಾರೆ. ಆದರೆ ಚಪ್ಪಲಿ ಕಳವಿನಂತಹ ಸಣ್ಣ ಪುಟ್ಟ ವಿಚಾರಕ್ಕೂ ಪೊಲೀಸ್ ಸ್ಪಂದನೆ ನಿಜಕ್ಕೂ ಮೆಚ್ಚುವಂತದ್ದಾಗಿದೆ.
ಸಾಮಾನ್ಯವಾಗಿ ಕೆಲವರು ಹೆಚ್ಚಿದ ದರ ಇದ್ದರೂ ಕೂಡ ಇಷ್ಟಪಟ್ಟ ಚಪ್ಪಲಿಗಳನ್ನು ಮಾತ್ರ ಖರೀದಿ ಮಾಡಿಯೇ ತಂದಿರುತ್ತಾರೆ. ಸಾಲ ಮಾಡಿಯಾದರೂ ತಾವು ಇಷ್ಟಪಟ್ಟ ಚಪ್ಪಲಿಗಳನ್ನು ಕೊಂಡುಕೊಳ್ಳುವುದನ್ನು ನಾವು ನೋಡಿರುತ್ತೇವೆ. ಆದರೆ ಇಂತಹ ಚಪ್ಪಲಿಗಳನ್ನೇ ಯಾರಾದರೂ ಕದ್ದುಬಿಟ್ಟರೆ ಮನಸ್ಸಿಗೆ ತುಸು ನೋವಾದೇ ಆಗುತ್ತದೆ. ಯಾಕಂದರೆ ಅಷ್ಟು ಇಷ್ಟಪಟ್ಟು ಆ ಚಪ್ಪಲಿಗಳನ್ನು ಖರೀದಿ ಮಾಡಿ ತಂದಿರುತ್ತಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications