ಮಂಗಳೂರು: ವೇಣೂರು ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ
ಮಂಗಳೂರು, ಜ.4 : ವೇಣೂರಿನ ಶ್ರೀ ಸೂರ್ಯನಾರಾಯಣ ಕ್ಷೇತ್ರ ಬಲ್ಲಂಗೇರಿ- ಅಂಗರಕರಿಯ ಶ್ರೀ ಮಹಾಗಣಪತಿ ಹವನದ ಉದ್ಯಾಪನಾ ಸಮಾರಂಭ ಜನವರಿ 3ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಕೈಮಾರು ಸುಬ್ರಹ್ಮಣ್ಯ ಉಡುಪರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪೂರ್ವಾಹ್ನ ವಾಗೀಶ್ವರೀ ಹವನ, ಗಣಪತಿ ಹವನ ,ಶ್ರೀ ಸತ್ಯನಾರಾಯಣ ಪೂಜೆ , ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಿತು.[ದೇವಾಲಯಕ್ಕೆ ಹೋಗುವುದರಿಂದ ಏನು ಲಾಭ?]
ಶ್ರೀಮಹಾಗಣಪತಿ ಹವನದ ಉದ್ಯಾಪನಾ ಸಮಿತಿಯ ಅಧ್ಯಕ್ಷ ಕೈದೊಟ್ಟು ಆನಂದ, ಕಾರ್ಯದರ್ಶಿ ನಾಗೇಶ್ ಕೋಟ್ಯಾನ್, ಕೋಶಾಧಿಕಾರಿ ಸತೀಶ್ ಶೆಟ್ಟಿ, ಸೂರ್ಯನಾರಾಯಣ ಆರಾಧನಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಉದಯ ಕುಮಾರ್, ಕ್ಷೇತ್ರ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಯನ್.ಸೀತಾರಾಮ ರೈ, ಕಾರ್ಯದರ್ಶಿ ಪಿ.ಹರಿಪ್ರಸಾದ್ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.[ಲಕಮನಹಳ್ಳಿ ಸೋಮೇಶ್ವರ ದೇಗುಲ ಜೀರ್ಣೋದ್ಧಾರ ಆರಂಭ]
ಇದಕ್ಕೂ ಮುನ್ನ ಅಂದರೆ ಜನವರಿ 1 ರಂದು ಅಳದಂಗಡಿ ಅರಮನೆಯ ತಿಮ್ಮಣ್ಣಾರಸರಾದ ಡಾ.ಪದ್ಮಪ್ರಸಾದ್ ಅಜಿಲರ ಮಾರ್ಗದರ್ಶನದೊಂದಿಗೆ ಉದಯ ಪಾಂಗಣ್ಣಾಯರ ನೇತೃತ್ವದಲ್ಲಿ ದೈವಜ್ಞ ಪಿ.ವೆಂಕಟ್ರಮಣ ಭಟ್ ಮಾಡಾವು ಮತ್ತು ದೈವಜ್ಞ ಕೇಶವ ಆಚಾರ್ಯ ಇವರಿಂದ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ ನಡೆದಿತ್ತು.