ಮಂಗಳೂರು: ಮಾಲಿನ್ಯದಿಂದ ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿದ ಫಲ್ಗುಣಿ
ಮಂಗಳೂರು, ಮೇ 30: ಗುರುಪುರದ ಮಲವೂರು ಅಣೆಕಟ್ಟೆಯ ಬಳಿ ಹರಿಯುವ ಫಲ್ಗುಣಿ ನದಿ ನೀರು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿದೆ. ಆದರೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾತ್ರ ಇನ್ನೂ ಮಾಲಿನ್ಯಕ್ಕೆ ಕಾರಣ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
ನದಿ ನೀರು ಮಲಿನವಾಗಲು ಕಾರಣ ಕಂಡುಕೊಳ್ಳಲು ಮಾಲಿನ್ಯ ಮಂಡಳಿ ಜೊತೆಗೂಡಿ ಸುರತ್ಕಲ್ ಎನ್ಐಟಿಕೆಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಜಿ ಶ್ರೀನಿಕೇತನ್ ಕೆಲಸಮಾಡುತ್ತಿದ್ದಾರೆ. ಅವರು, ಫೇಕಲ್ ಕಾಲಿಫಾರ್ಮ್ ಕಾರಣದಿಂದ ನದಿ ನೀರು ಮಾಲಿನ್ಯ ಆಗಿರುವ ಸಾಧ್ಯತೆಯಿದೆ ಎಂದಿದ್ದಾರೆ.[ಮೂಲ್ಕಿಯಲ್ಲೊಬ್ಬರು ಅಮೆರಿಕಾದಿಂದ ಬಂದ 'ಸರ್ಫಿಂಗ್ ಸ್ವಾಮಿ']

ಸಂಸ್ಕರಿಸದೆ ಕೊಳಚೆ ನೀರನ್ನು ಧೀರ್ಘ ಸಮಯದಿಂದ ನದಿಗೆ ಬಿಟ್ಟಿರುವ ಕಾರಣ ಬೇಸಗೆಯಲ್ಲಿ ಸ್ಥಿರವಾಗಿ ನಿಲ್ಲುವ ಅಣೆಕಟ್ಟೆಯ ನೀರು ಮಲಿನವಾಗಿರಬಹುದು,' ಎಂದು ಅವರು ಹೇಳುತ್ತಾರೆ.
ಅಣೆಕಟ್ಟೆಯ ಗೇಟುಗಳು ಮುಚ್ಚಿರುವ ಕಾರಣ ತಾಜಾ ನೀರು ಹರಿಯಲು ಅವಕಾಶವಿಲ್ಲದೆ ನೀರು ಕಲುಷಿತವಾಗಿರಬಹುದು. ಸರ್ಕಾರ ಮಾಡಿರುವ ಹೈಡ್ರೋಗ್ರಫಿ ಪರೀಕ್ಷೆ ನೀರು ಮಲಿನವಾಗಲು ಸ್ಪಷ್ಟ ಕಾರಣವನ್ನು ತಿಳಿಸಲಿದೆ' ಎಂದು ಶ್ರೀನಿಕೇತನ್ ಹೇಳಿದ್ದಾರೆ.
ಕೈಗಾರಿಕಾ ತ್ಯಾಜ್ಯದ ಪ್ರಭಾವವೂ ನದಿ ನೀರನ್ನು ಮಲಿನಗೊಳಿಸಿರುವ ಸಾಧ್ಯತೆಯಿದೆ ಎಂದೂ ಅವರು ಹೇಳಿದ್ದಾರೆ.[ಮಂಗಳೂರು: ಈಜಲು ತೆರಳಿದ ಬಾಲಕರಿಬ್ಬರು ನೀರುಪಾಲು]
ಮಾಲಿನ್ಯ ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ಪ್ರಕಾರ ಅಣೆಕಟ್ಟೆ ಬಳಿ ಕೆಳಹರಿಯುವ ನೀರಿನಲ್ಲಿ ಆಮ್ಲಜನಕದ ಪ್ರಮಾಣ 0.5 ಎಂಜಿಡಿ ಇದೆ. ಸಾಮಾನ್ಯವಾಗಿ ಜೀವರಾಶಿಗಳು ಬೆಳೆಯಲು ನೀರಿನಲ್ಲಿ ಕನಿಷ್ಠ 3.5 ಎಂಜಿಡಿ ಆಮ್ಲಜನಕ ಅಗತ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಮಾಲಿನ್ಯ ಮಂಡಳಿ ಈಗ ಬೈಕಂಪಾಡಿಯ ಪ್ರತೀ ಉದ್ಯಮದ ತ್ಯಾಜ್ಯವನ್ನೂ ಪರಿಶೀಲಿಸುತ್ತಿದೆ. ಬೋಲೂರ್ ಮತ್ತು ಕುದ್ರೋಳಿಯಂತಹ ಹಲವು ಸ್ಥಳಗಳಲ್ಲಿ ಚರಂಡಿ ನೀರನ್ನು ಸಂಸ್ಕರಿಸದೆ ನದಿಗೆ ಬಿಡಲಾಗುತ್ತಿದೆ. ಮಹಾನಗರಪಾಲಿಕೆ ಸೇರಿದಂತೆ ಎಲ್ಲರೂ ಜೊತೆಗೂಡಿ ಕೆಲಸ ಮಾಡಿದರೆ ಈ ಮಾಲಿನ್ಯ ಸಮಸ್ಯೆಯನ್ನು ತಡೆಯಬಹುದು ಎಂದು ಪುರಾಣಿಕ್ ಅಭಿಪ್ರಾಯಪಟ್ಟಿದ್ದಾರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications