ಆಳ್ವಾಸ್ ನುಡಿಸಿರಿಗೆ ದಿನಗಣನೆ ಆರಂಭ, ಭರದಿಂದ ಸಾಗಿದ ಸಿದ್ಧತೆ
ಮಂಗಳೂರು, ನವೆಂಬರ್. 13:ಕನ್ನಡ ನಾಡು, ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ 'ಆಳ್ವಾಸ್ ನುಡಿಸಿರಿ 2018'ಗೆ ದಿನಗಣನೆ ಆರಂಭವಾಗಿದೆ. ನವೆಂಬರ್ 16 ರಿಂದ ಆರಂಭ ಗೊಳ್ಳಲಿರುವ ನುಡಿಸಿರಿ ಸಮ್ಮೇಳನಕ್ಕೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಆವರಣದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.
ಮೂರು ದಿನಗಳ ಕಾಲ ನಡೆಯಲಿರುವ ಈ ನುಡಿಸಿರಿ ಸಮ್ಮೇಳನ ಈ ಬಾರಿ 'ಕರ್ನಾಟಕ ದರ್ಶನ- ಬಹುರೂಪಿ ಆಯಾಮಗಳು' ಎಂಬ ಪರಿಕಲ್ಪನೆಯಲ್ಲಿ ನಡೆಯಲಿದೆ. ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಸಾಹಿತಿ, ಸಂಶೋಧಕಿ ಡಾ. ಮಲ್ಲಿಕಾ ಎಸ್.ಘಂಟಿ ವಹಿಸಲಿದ್ದಾರೆ. ಸಂಶೋಧಕ ಡಾ.ಷ.ಶೆಟ್ಟರ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಈ ಬಾರಿ ಪ್ರಮುಖವಾಗಿ ಒಟ್ಟು 4 ಗೋಷ್ಠಿಗಳು ನಡೆಯಲಿದ್ದು, 'ರಾಮಾಯಣ:ಸಮಕಾಲೀನ ನೆಲೆಗಳು' ಕುರಿತು ಲಕ್ಷ್ಮೀಶ ತೋಳ್ಪಾಡಿ, 'ಮಹಾಭಾರತ: ಸಮಕಾಲೀನ ನೆಲೆಗಳು' ಕುರಿತು ಉಮಾಕಾಂತ ಭಟ್ಟ ವಿಷಯ ಮಂಡಿಸಲಿದ್ದಾರೆ.
ಎರಡನೇ ಗೋಷ್ಠಿಯಲ್ಲಿ 'ವಚನ' ಕುರಿತು ಡಾ. ವಿಜಯ ಕುಮಾರ ಎಸ್. ಕಟಗಿಹಳ್ಳಿಮಠ, 'ಕೀರ್ತನ' ಕುರಿತು ಡಾ.ಎಚ್.ಎನ್.ಮುರಳೀಧರ, 'ಸೂಫಿ' ಕುರಿತು ರಂಜಾನ್ ದರ್ಗಾ, 'ತತ್ತ್ವಪದ' ಕುರಿತು ಡಾ.ಬಸವರಾಜ ಸಬರದ ವಿಷಯ ಮಂಡಿಸಲಿದ್ದಾರೆ.
ಮೂರನೆಯ ಗೋಷ್ಠಿಯಲ್ಲಿ 'ಶಿಕ್ಷಣ ಮತ್ತು ಸಾಮರಸ್ಯ'ದ ಕುರಿತು ಬಿ.ಗಣಪತಿ ಹಾಗೂ ನಾಲ್ಕನೆಯ ಗೋಷ್ಠಿಯಲ್ಲಿ 'ಜನಪದ ಸಾಹಿತ್ಯ'ದ ಕುರಿತು ಡಾ. ಪಿ.ಕೆ.ರಾಜಶೇಖರ, 'ಜನಪದ ಆರಾಧನೆ'ಯ ಕುರಿತು ಡಾ.ಅಂಬಳಿಕೆ ಹಿರಿಯಣ್ಣ ಹಾಗೂ 'ಜನಪದ ಕಲಾ ಪರಂಪರೆ'ಯ ಕುರಿತು ಡಾ.ಡಿ.ಬಿ.ನಾಯಕ ವಿಚಾರ ಮಂಡಿಸಲಿದ್ದಾರೆ.

ವಿವಿಧ ವಿಷಯಗಳ ಕುರಿತು ವಿಚಾರ ಮಂಡನೆ
ಸಮ್ಮೇಳನದಲ್ಲಿ ಈ ಬಾರಿ ಒಟ್ಟು 8 ವಿಶೇಷೋಪನ್ಯಾಸಗಳು ನಡೆಯಲಿವೆ. ಕನ್ನಡ ಪದ ಸೃಷ್ಟಿ ಸ್ವೀಕರಣ ಮತ್ತು ಬಳಕೆ ಕುರಿತು ಪ್ರೊ.ಎಂ.ಕೃಷ್ಣೇ ಗೌಡ, ಇತ್ತೀಚಿನ ಮಹತ್ವದ ಪ್ರಕಟಣೆಗಳ ಕುರಿತು ರಘುನಾಥ ಚ.ಹ, ಅಖಂಡ ಕರ್ನಾಟಕದ ಕುರಿತು ವೈ.ಎಸ್.ವಿ.ದತ್ತ, ಸಮಾಜಾಭಿವೃದ್ಧಿಯಲ್ಲಿ ವ್ಯಕ್ತಿ ಹೊಣೆಗಾರಿಕೆ ಕುರಿತು ಪ್ರೊ.ಜಿ.ಬಿ.ಶಿವರಾಜ್, ಜೀವನ ಪದ್ಧತಿಯ ಆತಂಕದ ನೆಲೆಗಳು ಕುರಿತು ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಸಮಕಾಲೀನ ಸಂದರ್ಭ: ಮಹಿಳಾ ಬಿಕ್ಕಟ್ಟುಗಳು ಕುರಿತು ಡಾ.ಎಂ.ಉಷಾ, ಸಾಮಾಜಿಕ ಜಾಲತಾಣ ಕುರಿತು ರೋಹಿತ್ ಚಕ್ರತೀರ್ಥ ಹಾಗೂ ಐಟಿಯಿಂದ ಮೇಟಿಗೆ ಕುರಿತು ವಸಂತ ಕಜೆ ವಿಚಾರಗಳನ್ನು ಮಂಡಿಸಲಿದ್ದಾರೆ.

ನುಡಿ ನಮನ ಸಲ್ಲಿಕೆ
ಕನ್ನಡ ನಾಡು -ನುಡಿ-ಸಂಸ್ಕೃತಿಗಾಗಿ ಸೇವೆ ಸಲ್ಲಿಸಿ ವರ್ತಮಾನದಲ್ಲಿ ನಮ್ಮೊಂದಿಗೆ ಇಲ್ಲದ ವಿದ್ವಾಂಸರಿಗೆ ಗೌರವಾರ್ಪಣೆ ಸಲ್ಲಿಸುವ ಕಾರ್ಯಕ್ರಮದಲ್ಲಿ ವಿದ್ವಾಂಸ ಡಾ. ಪ್ರಭುಶಂಕರ ಅವರ ಕುರಿತು ಡಾ. ಎನ್.ಎಸ್.ತಾರಾನಾಥ, ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅವರ ಕುರಿತು ಡಾ.ಜಿ.ಎಂ.ಹೆಗಡೆ ಹಾಗೂ ಕವಿ ಡಾ. ಸುಮತೀಂದ್ರ ನಾಡಿಗರ ಕುರಿತು ಮಹಾಬಲಮೂರ್ತಿ ಕೊಡ್ಲಕೆರೆ ನುಡಿನಮನ ಸಲ್ಲಿಸಲಿದ್ದಾರೆ.

ಮಾತಿನ ಗೌರವಾರ್ಪಣೆ
ಕನ್ನಡದ ಖ್ಯಾತ ತತ್ತ್ವಪದಗಾರರೂ ಸೂಫಿ ಸಂತರೂ ಆಗಿರುವ ಸಂತ ಶಿಶುನಾಳ ಶರೀಫರ ಇನ್ನೂರನೆಯ ವರ್ಷಾಚರಣೆಯ ವರ್ಷದ ಹಿನ್ನೆಲೆಯಲ್ಲಿ ನಾಡೋಜ ಡಾ.ಮಹೇಶ್ ಜೋಶಿಯವರು ಸಂತ ಶಿಶುನಾಳ ಶರೀಫರ ಕುರಿತು ಮಾತಿನ ಗೌರವಾರ್ಪಣೆ ನಡೆಸಿಕೊಡಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ
ರತ್ನಾಕರವರ್ಣಿ ವೇದಿಕೆ, ಸಂತ ಶಿಶುನಾಳ ಶರೀಫ ಸಭಾಂಗಣ, ಕು.ಶಿ.ಹರಿದಾಸ ಭಟ್ಟ ವೇದಿಕೆ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ ವೇದಿಕೆಗಳಲ್ಲಿ ಮುಸ್ಸಂಜೆಯಿಂದ ತಡರಾತ್ರಿಯವರೆಗೆ ಹಾಗೂ ಡಾ.ವಿ.ಎಸ್.ಆಚಾರ್ಯ ಸಭಾಭವನದ ಮಿಜಾರುಗುತ್ತು ಭಗವಾನ್ ಶೆಟ್ಟಿ ವೇದಿಕೆ, ಕೆ.ವಿ.ಸುಬ್ಬಣ್ಣ ಬಯಲುರಂಗ ಮಂದಿರ ಹಾಗೂ ಕೆ.ಎಸ್.ಪುಟ್ಟಣ್ಣಯ್ಯ ಕೃಷಿ ಆವರಣದ ಆನಂದ ಬೋಳಾರ್ ವೇದಿಕೆಗಳಲ್ಲಿ ಹಗಲು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications