ಕರ್ನಾಟಕ ಸಿಇಟಿ ಫಲಿತಾಂಶ: ಟಾಪರ್ ಪ್ರತೀಕ್ ಪ್ರತಿಕ್ರಿಯೆ
'ಒನ್ ಇಂಡಿಯಾ' ಜೊತೆ ಮಾತನಾಡಿದ ಪ್ರತೀಕ್, ತಂದೆ-ತಾಯಿಗಳ ಆಶೀರ್ವಾದ ಮತ್ತು ಎಕ್ಸ್ಪರ್ಟ್ ಪಿಯು ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತ್ತು ಎಂದಿದ್ದಾರೆ.
ಮಂಗಳೂರು, ಮೇ 30: ಇಂದು ಬಿಡುಗಡೆಯಾದ ಕರ್ನಾಟಕ ಸಿಇಟಿ ಫಲಿತಾಂಶದಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿ ಪ್ರತೀಕ್ ನಾಯಕ್ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ.
ತಮ್ಮ ಸಾಧನೆಯ ಕುರಿತು 'ಒನ್ ಇಂಡಿಯಾ' ಜೊತೆ ಮಾತನಾಡಿದ ಮಂಗಳೂರು ಮೂಲದ ಪ್ರತೀಕ್, ನನ್ನ ತಂದೆ ಶ್ರೀಕಾಂತ್ ನಾಯಕ್ ಮತ್ತು ತಾಯಿ ಸಂಗೀತಾ ನಾಯಕ್ ಆಶೀರ್ವಾದ ಮತ್ತು ಎಕ್ಸ್ಪರ್ಟ್ ಪಿಯು ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತ್ತು ಎಂದಿದ್ದಾರೆ.[ಸಿಇಟಿ 2017 ಫಲಿತಾಂಶ ಪ್ರಕಟ, 1 ಗಂಟೆಗೆ ಆನ್ಲೈನಲ್ಲಿ ಲಭ್ಯ]
ಕಂಪ್ಯೂಟರ್
ಸೈನ್ಸ್
ವಿಷಯದಲ್ಲಿ
ಇಂಜಿನಿಯರಿಂಗ್
ಮಾಡುವ
ಆಸ್ತಕಿಯನ್ನು
ವ್ಯಕ್ತಪಡಿಸಿರುವ
ಪ್ರತೀಕ್,
ರಸಾಯನಶಾಸ್ತ್ರ,
ಗಣಿತ
ಹಾಗೂ
ಸಂಖ್ಯಾಗಣಿತದಲ್ಲಿ
ತಲಾ
100
ಅಂಕಗಳನ್ನು
ಗಳಿಸಿದ್ದಾರೆ.
ಜೆಇಇ
ಮೇನ್ಸ್
ಪರೀಕ್ಷೆಯಲ್ಲೂ
1300ನೆ
ರ್ಯಾಂಕ್
ಗಳಿಸಿ,
ಸಾಧನೆ
ಮಾಡಿದ್ದಾರೆ.
ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಅಂಕಗಳು ಸ್ವಲ್ಪ ಕಡಿಮೆ ಬಂದಿದ್ದು, ಮರು ವೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದವರು ಹೇಳಿದ್ದಾರೆ
ಸಿಇಟಿ
ಫಲಿತಾಂಶ
ಚೆಕ್
ಮಾಡುವುದು
ಹೇಗೆ?:
*
ಕರ್ನಾಟಕ
ಪರೀಕ್ಷಾ
ಪ್ರಾಧಿಕಾರದ
ವೆಬ್ಸೈಟ್
ವಿಳಾಸಕ್ಕೆ
ಭೇಟಿ
ನೀಡಿ
*
Kea.kar.nic.in
ಅಥವಾ
Karresults.nic.in
*
"ಸಿಇಟಿ
2017"
ಬಟನ್
ಮೇಲೆ
ಕ್ಲಿಕ್
ಮಾಡಿ
*
ನಿಮ್ಮ
ನೋಂದಣಿ
ಸಂಖ್ಯೆ
ನಮೂದಿಸಿ
*
ರಿಸಲ್ಟ್
ಪಡೆಯಿರಿ,
ಡೌನ್
ಲೋಡ್
ಮಾಡಿ
ಪ್ರಿಂಟ್
ಔಟ್
ತೆಗೆದುಕೊಳ್ಳಿ
ವಿವಿಧ ವೃತ್ತಿಪರ ಕೋರ್ಸ್(ಬಿಇ, ಬಿಫಾರ್ಮಾ, ಆಯುಷ್, ಕೃಷಿ ಇಂಜಿನಿಯರಿಂಗ್) ಗಳ ಪ್ರವೇಶಕ್ಕಾಗಿ ನಡೆಯುವ 2017ನೇ ಸಾಲಿನ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ 2 ಹಾಗೂ 3ರಂದು ನಡೆಸಲಾಗಿತ್ತು. ಬೆಂಗಳೂರಿನ 82 ಸೇರಿ ರಾಜ್ಯಾದ್ಯಾಂತ 404 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 94,415 ವಿದ್ಯಾರ್ಥಿ ಹಾಗೂ 90,996 ವಿದ್ಯಾರ್ಥಿನಿಯರು ಸೇರಿದಂತೆ 1,85,411 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಸರ್ಕಾರದಿಂದ ಉಚಿತ ಶಿಕ್ಷಣ : 'ಸಿಇಟಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಐದು ಜನರಿಗೆ ಅವರ ಕೋರ್ಸ್ ಮುಗಿಯುವವರೆಗೆ ಸರ್ಕಾರದಿಂದ ಉಚಿತ ಶಿಕ್ಷಣ ನೀಡಲಾಗುತ್ತದೆ' ಎಂದು ಕರ್ನಾಟಕ ಸರ್ಕಾರ 2016ರಲ್ಲೇ ಘೋಷಿಸಿದೆ.